ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ ಶ್ರೀಕೃಷ್ಣಮಠದಲ್ಲಿ ತೆಪ್ಪೋತ್ಸವದೊ೦ದಿಗೆ ವಾರ್ಷಿಕ ಸಪ್ತೋತ್ಸವಕ್ಕೆ ಅದ್ದೂರಿಯ ಚಾಲನೆ…

ಉಡುಪಿ:ಜ.10: ಪರ್ಯಾಯ ಶ್ರೀಪುತ್ತಿಗೆಮಠದ ಆಶ್ರಯದಲ್ಲಿ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಗುರುವಾರದ೦ದು ಪ್ರಾರಂಭ ಗೊಂಡಿದೆ. ಮಧ್ವ ಸರೋವರದಲ್ಲಿ ತೆಪ್ಪೋತ್ಸವದೊ೦ದಿಗೆ ನಡೆದು ಬಳಿಕ ಎರಡು ರಥಗಳ ರಥೋತ್ಸವ ನಡೆಯಿತು.ಈ ಸ೦ದರ್ಭದಲ್ಲಿ ಆಕರ್ಷಕ ಸುಡುಮದ್ದನ್ನು ಸುಡಲಾಯಿತು.

ವಾರ್ಷಿಕ ಸಪ್ತೋತ್ಸವ ಇಂದಿನಿಂದ ಜ.15ರವರೆಗೆ ನಡೆಯಲಿದೆ. ಜ.14ರಂದು ಮಕರ ಸಂಕ್ರಮಣದಂದು ಮೂರು ತೇರು ಉತ್ಸವ ನಡೆದರೆ, ಜ.15ರಂದು ಚೂರ್ಣೋತ್ಸವ ಹಗಲು ತೇರು ನಡೆಯಲಿದೆ.

ರಥಬೀದಿಯ ಸುತ್ತಲೂ ವಿಶೇಷ ಕುಣಿತ ಭಜನೆ ‘ವೈಭವೋತ್ಸವ’ ಈ ಬಾರಿ ನಡೆಯಲಿದೆ. ಇದರೊಂದಿಗೆ ಅಹಲ್ಯಾ ಬಾಯಿ ಹೋಳ್ಕರ್ ಅವರ ಜನ್ಮತ್ರಿಶತಾಬ್ದಿ ಪ್ರಯುಕ್ತ ವಿವಿಧ ಸ್ಪರ್ಧೆಗಳು ರಾಜಾಂಗಣದಲ್ಲಿ ನಡೆಯಲಿದೆ. ಅಲ್ಲದೇ ಪ್ರತಿದಿನ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ರಾಜಾಂಗಣದಲ್ಲಿ ನಡೆಯಲಿದೆ.

 

No Comments

Leave A Comment