ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ: ತುಳುಕೂಟದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆ

ಉಡುಪಿ: ಸಾಂಸ್ಕೃತಿಕ ಸಂಘಟನೆ ತುಳುಕೂಟ, ಉಡುಪಿ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆಯಾಗಿದ್ದಾರೆ.

ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸಂಸ್ಥೆಯ ಇತರ ಪದಾಧಿಕಾರಿಗಳಾದ ಸಂಸ್ಥಾಪಕ ಅಧ್ಯಕ್ಷ ಡಾ.ಭಾಸ್ಕರಾನಂದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಗಂಗಾಧರ ಕೆಡಿಯೂರು, ಖಜಾಂಚಿ ಚೈತನ್ಯ ಎಂ.ಜಿ, ಉಪಾಧ್ಯಕ್ಷರಾದ ಭುವನಪ್ರಸಾದ್ ಹೆಗ್ಡೆ, ಮನೋಹರ್ ಶೆಟ್ಟಿ ತೋನ್ಸೆ, ದಿವಾಕರ ಸನಿಲ್, ರಶ್ಮಿ ಶೆಣೈ, ಜಂಟಿ ಕಾರ್ಯದರ್ಶಿಗಳಾದ ಜ್ಯೋತಿ ಎಸ್.ದೇವಾಡಿಗ, ಸಂತೋಷ್ ಕುಮಾರ್, ಪ್ರಸನ್ನಕುಮಾರ್ ಇದ್ದರು. , ಸಂಘಟನಾ ಕಾರ್ಯದರ್ಶಿಗಳಾದ ಮೋಹನ್ ಶೆಟ್ಟಿ ಮೂಡನಿಡಂಬೂರು, ವಿದ್ಯಾ ಸರಸ್ವತಿ, ಉದಯ ಕುಮಾರ್ ತೆಂಕನಿಡಿಯೂರು.ಸಂಸ್ಥೆಯ ಸಲಹಾ ಮಂಡಳಿಯಲ್ಲಿ ವಿಶ್ವನಾಥ ಶೆಣೈ, ಮುರಳೀಧರ ಉಪಾಧ್ಯ, ಡಾ.ಗಣಂತ್ ಎಕ್ಕಾರ್, ಎಸ್.ಎ.ಕೃಷ್ಣಯ್ಯ, ಬನ್ನಂಜೆ ಬಾಬು ಅಮೀನ್, ಮನೋರಮಾ ಶೆಟ್ಟಿ, ಎಸ್.ವಿ.ಭಟ್, ರವಿಶಂಕರ್ ರೈ, ಶಾಂತಾರಾಮ ಶೆಟ್ಟಿ ಇದ್ದಾರೆ.

ತುಳುಮಿನದಾನ ಕಾರ್ಯಕ್ರಮದ ಸಂಯೋಜಕ ಡಾ.ವಿ.ಕೆ.ಯಾದವ್, ತುಳು ಸಾಂಪ್ರದಾಯಿಕ ಕಾರ್ಯಕ್ರಮ ಸಂಯೋಜಕ ದಯಾನಂದ ಕೆ, ತುಳು ಪಠ್ಯಪುಸ್ತಕ ಸಂಯೋಜಕ ವಿಶ್ವನಾಥ ಬಾಯರಿ, ನಿಟ್ಟೂರು ತುಳು ಜಾನಪದ ಗೀತೆ ಸ್ಪರ್ಧೆಯ ಸಂಯೋಜಕ ಜಯರಾಮ ಶೆಟ್ಟಿಗಾರ್ ಮಣಿಪಾಲ, ಆಟಿಕೂಟದ ಸಂಯೋಜಕಿ ಪೂರ್ಣಿಮಾ ಶೆಟ್ಟಿ ಮತ್ತು ತಾರಾ ಸತೀಶ್, ಆತಿ ಕಷಾಯ ಕಾರ್ಯಕ್ರಮ ಸಂಯೋಜಕ ನಟ ಸತೀಶ್. ಶೆಟ್ಟಿ, ಮಾದರಂಗಿದರಂಗ ಕಾರ್ಯಕ್ರಮದ ಸಂಯೋಜಕಿ ಯಶೋಧ ಕೇಶವ್, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಯೋಜಕಿ ಶಿಲ್ಪಾ ಜೋಶಿ, ಕೆಮ್ತೂರು ತುಳು ನಾಟಕ ಸ್ಪರ್ಧೆಯ ಸಂಯೋಜಕ ಪ್ರಭಾಕರ ಭಂಡಾರಿ, ತುಳು ಗೊಬ್ಬುಲು ಸ್ಪರ್ಧೆಯ ಸಂಯೋಜಕ ರತ್ನಾಕರ ಇಂದ್ರಾಳಿ ಮತ್ತು ಯು ಎಸ್ ಉಮರ್ ಹಾಗೂ ಮಾಧ್ಯಮ ಸಂಯೋಜಕಿ ಭಾರತಿ ಟಿ ಕೆ. ಕಾರ್ಯಕಾರಿ ಸಮಿತಿಗೆ 40 ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

No Comments

Leave A Comment