ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವ ಭಕ್ತರ ಗಮನಕ್ಕೆ
ಉಡುಪಿ:ತಿರುಪತಿ ತಿರುಮಲ ದೇವಸ್ಥಾನದಲ್ಲಿ ಇತ್ತೀಚಿಗೆ ಹುಟ್ಟಿಕೊ೦ಡ ಲಡ್ದು ವಿಷಯದಿ೦ದಾಗಿ ಭಕ್ತರಲ್ಲಿ ಭಾರೀ ಅತ೦ಕವನ್ನು ಹುಟ್ಟು ಹಾಕಿತ್ತು. ಇದೀಗ ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳುವ ಎಲ್ಲಾ ಭಕ್ತರಲ್ಲಿ ನಮ್ಮ ಕರಾವಳಿಕಿರಣ ಡಾಟ್ ಕಾ೦ನ ಮನವಿ ಇದಾಗಿದೆ.ಇನ್ನು ತಿರುಪತಿಯಲ್ಲಿ ಲಡ್ಡು ಪ್ರಸಾದವನ್ನು ಪಡೆದುಕೊಳ್ಳ ಬೇಕಾದರೆ ತಮ್ಮ ತಮ್ಮ ಆಧಾರ್ ಕಾರ್ಡು ಬಹಳ ಅಗತ್ಯವಾಗಿ ತೆಗೆದುಕೊ೦ಡು ಹೋಗಬೇಕಾಗುವ ಪ್ರಮೇಯವಿದೆ.
ಆಧಾರ್ ಕಾರ್ಡು ಇದ್ದಲ್ಲಿ ಲಡ್ಡು ಪ್ರಸಾದ್ ಪ್ರಸಾದ್ ದೊರಕುತ್ತದೆ ಮತ್ತು ಇದಕ್ಕಾಗಿ ಕ್ಯೂನಿಲ್ಲಬೇಕಾಗುತ್ತದೆ.ನ೦ತರ ನಿಗದಿ ಪದಿಸಿದ ಮೊತ್ತನೀಡಿ ಕೂಪನ್ ಪಡೆದುಕೊ೦ಡಾಗ ಲಡ್ದು ಪ್ರಸಾದ ನಿಮ್ಮ ನಿಮ್ಮ ಕೈ ಸೇರಲಿದೆ. ಆಧಾರ್ ಕಾರ್ಡಿನಲ್ಲಿರುವ ವ್ಯಕ್ತಿಯೇ ಇರಬೇಕು ಹೊರತು ಬೇರೆಯವರಿಗೆ ನೀಡಲಾಗುವುದಿಲ್ಲ. ಇನ್ನು ಮು೦ದೆ ದೇವಸ್ಥಾನಕ್ಕೆ ತೆರಳುವಾಗ ಆಧಾರ್ ಕಾರ್ಡ ತಪ್ಪದೇ ತೆಗೆದುಕೊ೦ಡು ಹೋಗುವ೦ತೆ ಭಕ್ತರಿಗೆ ಈ ಮಾಹಿತಿಯನ್ನು ನೀಡಿದ್ದೇವೆ.