Log In
BREAKING NEWS >
``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಅಸ್ಸಾಂನ ಸುರಿದ ಸತತ ಭಾರಿ ಮಳೆ 29 ಜಿಲ್ಲೆಗಳು ಜಲಾವೃತ, 16.50 ಲಕ್ಷ ಜನರ ಜೀವನ ಅಸ್ತವ್ಯಸ್ತ, 56 ಸಾವು!

ಗುವಾಹಟಿ: ಅಸ್ಸಾಂನಲ್ಲಿ ಸುರಿದ ಸತತ ಭಾರಿ ಮಳೆಯಿಂದಾಗಿ ಅಲ್ಲಿ ಪ್ರವಾಹದ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ರಾಜ್ಯದ ಬರೊಬ್ಬರಿ 29 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಟ್ಟು ಬರೊಬ್ಬರಿ 16.50 ಲಕ್ಷಕ್ಕೂ ಅಧಿಕ ಮಂದಿ ತೊಂದರೆಗೀಡಾಗಿದ್ದಾರೆ.ಅಸ್ಸಾಂ ರಾಜ್ಯದ ಪ್ರಮುಖ ನದಿಗಳಾದ ಬ್ರಹ್ಮಪುತ್ರ, ದಿಗಾರೂ ಮತ್ತು ಕೊಲೊಂಗ್ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಪ್ರವಾಹ, ಭೂಕುಸಿತ, ಮಳೆ ಸಂಬಂಧಿತ ಅವಘಡಗಳಲ್ಲಿ ರಾಜ್ಯದಲ್ಲಿ ಈವರೆಗೆ 56 ಮಂದಿ ಮೃತಪಟ್ಟಿದ್ದು, ಮೂವರು ನಾಪತ್ತೆಯಾಗಿದ್ದಾರೆ.

ಧುಬ್ರಿ ಜಿಲ್ಲೆಯಲ್ಲಿ ಅತಿ ಹೆಚ್ಚು2.23 ಲಕ್ಷಕ್ಕೂ ಅಧಿಕ, ದರಾಂಗ್‌ನಲ್ಲಿ 1.84 ಲಕ್ಷಕ್ಕೂ ಅಧಿಕ ಮತ್ತು ಲಕ್ಷ್ಮೀಪುರ ಜಿಲ್ಲೆಯಲ್ಲಿ 1.66 ಲಕ್ಷಕ್ಕೂ ಅಧಿಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬರ್ಪೇಟಾ, ಬಿಸ್ವನಾಥ್, ಕ್ಯಾಚಾರ್, ಚರೈಡಿಯೊ, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ್, ಗೋಲ್ಪಾರಾ, ಗೋಲಾಘಾಟ್, ಹೈಲಕಂಡಿ, ಹೊಜೈ, ಜೋರ್ಹತ್, ಕಮ್ರೂಪ್, ಕಾಮ್ರೂಪ್ ಮೆಟ್ರೋಪಾಲಿಟನ್, ಪೂರ್ವ ಕರ್ಬಿ ಆಂಗ್ಲಾಂಗ್, ಪಶ್ಚಿಮ ಕರ್ಬಿನ್ ಅಂಗ್ಲಾಂಗ್, ಲಖಿಮ್ಪುರ್ ಆಂಗ್ಲಾಂಗ್, , ಮಜುಲಿ, ಮೊರಿಗಾಂವ್, ನಾಗಾಂವ್, ನಲ್ಬರಿ, ಶಿವಸಾಗರ್, ಸೋನಿತ್‌ಪುರ ಮತ್ತು ತಿನ್ಸುಕಿಯಾ ಜಿಲ್ಲೆಗಳು ಪ್ರವಾಹದಿಂದ ತೀವ್ರಹಾನಿಗೊಳಗಾಗಿದ್ದು, 2.23 ಲಕ್ಷಕ್ಕೂ ಹೆಚ್ಚು ಜನರು ಬಳಲುತ್ತಿರುವ ಧುಬ್ರಿ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ.

ಸಿಎಂ ಹಿಮಂತ ಬಿಸ್ವ ಶರ್ಮಾರಿಂದ ಪರಿಶೀಲನೆ

ಇನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಇದಕ್ಕೂ ಮೊದಲು ಬುಧವಾರ ರಾತ್ರಿ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದ ಸಿಎಂ, ಸಂತ್ರಸ್ತರಿಗೆ ಪರಿಹಾರ, ಪುನರ್ವಸತಿ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಸಂಪುಟ ಸಚಿವರು ಮೊಕ್ಕಾಂ ಹೂಡಲಿದ್ದಾರೆ.
ಸಾವಿನ ಸಂಖ್ಯೆ 56ಕ್ಕೆ ಏರಿಕೆ, ಮೂವರು ನಾಪತ್ತೆ

ಇನ್ನು ಈ ವರ್ಷದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತದಲ್ಲಿ ಸತ್ತವರ ಸಂಖ್ಯೆ 56 ಕ್ಕೆ ಏರಿದ್ದು, ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋದ ಮೂವರು ನಾಪತ್ತೆಯಾಗಿದ್ದಾರೆ. ನಿಮತಿಘಾಟ್, ತೇಜ್‌ಪುರ, ಗುವಾಹಟಿ, ಗೋಲ್‌ಪಾರಾ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ದರ್ರಾಂಗ್ ನಲ್ಲಿ ಸುಮಾರು 1.84 ಲಕ್ಷ ಜನರು ಪ್ರವಾಹದ ನೀರಿನಲ್ಲಿ ತತ್ತರಿಸುತ್ತಿದ್ದಾರೆ.

ಇದರ ಉಪನದಿಗಳಾದ ಬಡತಿಘಾಟ್‌ನಲ್ಲಿ ಸುಬಾನ್ಸಿರಿ, ಚೆನಿಮಾರಿಯಲ್ಲಿ ಬುರ್ಹಿ ದಿಹಿಂಗ್, ಶಿವಸಾಗರ್‌ನಲ್ಲಿ ದಿಖೌ, ನಂಗ್ಲಾಮುರಘಾಟ್‌ನಲ್ಲಿ ದಿಸಾಂಗ್, ನುಮಾಲಿಗಢ್‌ನಲ್ಲಿ ಧನಸಿರಿ ಮತ್ತು ಕಂಪುರ್ ಮತ್ತು ಧರಮ್ತುಲ್‌ನಲ್ಲಿ ಕೊಪಿಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಬರಾಕ್ ನದಿಯು ಎಪಿ ಘಾಟ್, ಬಿಪಿ ಘಾಟ್, ಚೋಟಾ ಬಕ್ರಾ ಮತ್ತು ಫುಲೆಟ್ರಾಕ್‌ನಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದ್ದರೆ, ಅದರ ಉಪನದಿಗಳಾದ ಘರ್ಮುರಾದಲ್ಲಿ ಢಾಳೇಶ್ವರಿ, ಮಟಿಜುರಿಯಲ್ಲಿ ಕಟಖಲ್ ಮತ್ತು ಕರೀಮ್‌ಗಂಜ್ ಪಟ್ಟಣದ ಕುಶಿಯಾರಾ ಮತ್ತು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

No Comments

Leave A Comment