Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಮಾ.30ರ೦ದು ‘ಆನಂದವನ’ ಎಂಬ ನೂತನ ಪ್ರವಚನ ವೇದಿಕೆ ಹಾಗೂ ನೂತನ ಮಾಹಿತಿ ಅಂತರ್ಜಾಲ ತಾಣದ ಉದ್ಘಾಟನೆ

ಉಡುಪಿ:‘ಜ್ಞಾನದೀಪ’ ಎಲ್ಲೆಡೆ ಬೆಳಗಲೆಂದು ‘ಜ್ಞಾನಯಜ್ಞ’ಕ್ಕಾಗಿ ವಿಶೇಷವಾಗಿ ನಿರ್ಮಾಣಗೊಂಡಿರುವ ‘ಆನಂದವನ’ ಎಂಬ ನೂತನ ಪ್ರವಚನ ವೇದಿಕೆಯ ಉದ್ಘಾಟನೆಯನ್ನು ಹಾಗೂ ದೇಶ-ವಿದೇಶಗಳಲ್ಲಿ ಇರುವ ಮಠದ ಭಕ್ತರಿಗೆ ಶ್ರೀಅದಮಾರು ಮಠದ ಬಗ್ಗೆ, ಸೇವೆಗಳು ಮತ್ತು ಶಾಖೆಗಳ ಬಗ್ಗೆ ಎಲ್ಲ ಮಾಹಿತಿ ಇರುವ, ಅಲ್ಲದೆ ಮಠದ ವಿದ್ಯಾಸಂಸ್ಥೆಗಳ ವಿವರ, ವಸತಿಗೃಹಗಳ ಸಂಪರ್ಕ, ಉಡುಪಿ ಕೃಷ್ಣ ಮತ್ತು ಪರ್ಯಾಯ ಈ ಎಲ್ಲ ಮಾಹಿತಿಗಳಿರುವ ನೂತನ ಅಂತರ್ಜಾಲ ತಾಣದ (ವೆಬ್ಸೈಟ್) ಉದ್ಘಾಟನೆಯನ್ನು ಶ್ರೀಅದಮಾರು ಮಠದ ಉಭಯಶ್ರೀಪಾದರು ತಾ.30/03/2024ರಂದು ನಡೆಸಿಕೊಡಲಿದ್ದಾರೆ.

ಉದ್ಘಾಟನೆ/ಅನುಗ್ರಹ ಸಂದೇಶ : ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು,ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

ಅಂತರ್ಜಾಲ ತಾಣದ ಬಗ್ಗೆ ಪ್ರಾತ್ಯಕ್ಷಿಕೆ : ನಟರಾಜ ಮತ್ತು ತಂಡದವರಿಂದ
ವಿಶೇಷ ಉಪನ್ಯಾಸ :ಡಾ. ಲಕ್ಷ್ಮೀಶ ಭಟ್, ಮುದರಂಗಡಿ.ಸನ್ಮಾನ : ನಟರಾಜ್, ಅಂತರ್ಜಾಲತಾಣ ತಂತ್ರಜ್ಞರು

ಸಮಯ: ಸಂಜೆ 04.30ರಿಂದ 06.00ರವರೆಗೆ (ಸ್ಥಳ: ಆನಂದವನ, ಶ್ರೀಅದಮಾರು ಮಠ, ಉಡುಪಿ)

ಸಾಂಸ್ಕೃತಿಕ ಕಾರ್ಯಕ್ರಮ :ಶ್ರೀನಿವಾಸ ಪೆಜತ್ತಾಯ ತಂಡದವರಿಂದ ದ್ವಾದಶ ಸ್ತೋತ್ರಗಳ ಹಾಡುಗಾರಿಕೆ ಮತ್ತು ಕೀರ್ತನೆ (6.00-7.00)ತಾ.31/03/2024ರಂದು ‘ಆನಂದವನ’ದಲ್ಲಿ ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯರ ನೂತನಕೃತಿ ’ಕೃಷ್ಣಸಮೀಕ್ಷಾ-1’ ಇದರ ಲೋಕಾರ್ಪಣೆಯನ್ನು ಶ್ರೀಅದಮಾರು ಮಠದ ಉಭಯಶ್ರೀಪಾದರು ನಡೆಸಿಕೊಡಲಿದ್ದಾರೆ.

ಕೃತಿ ಪರಿಚಯ : ವಿ. ಕೃಷ್ಣರಾಜ ಭಟ್ಟ, ಕುತ್ಪಾಡಿ,ಲೋಕಾರ್ಪಣೆ/ಅನುಗ್ರಹ ಸಂದೇಶ :ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು
ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು

ವಿಶೇಷ ಉಪನ್ಯಾಸ : ಕೃಷ್ಣ- ಆನಂದ,ಉಪನ್ಯಾಸಕರು :ಡಾ. ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ

ಸನ್ಮಾನ :CA ಕೆ. ವೆಂಕಟೇಶ ಶೆಣೈ, ಬೆಂಗಳೂರು ಮತ್ತು ಗೋಪಾಲಕೃಷ್ಣ ಪೈ, ಕುಮಟಾ

ಸಮಯ: ಸಂಜೆ 04.30ರಿಂದ 06.00ರವರೆಗೆ (ಸ್ಥಳ: ಆನಂದವನ, ಶ್ರೀಅದಮಾರು ಮಠ, ಉಡುಪಿ)

ಸಾಂಸ್ಕೃತಿಕ ಕಾರ್ಯಕ್ರಮ :ಶ್ರೀನಿವಾಸ ಪೆಜತ್ತಾಯ ತಂಡದವರಿಂದ ದ್ವಾದಶ ಸ್ತೋತ್ರಗಳ,ಹಾಡುಗಾರಿಕೆ ಮತ್ತು ಕೀರ್ತನೆ (6.00-7.00) ಉಡುಪಿಯ ರಥಬೀದಿಯಲ್ಲಿರುವ ಶ್ರೀಅದಮಾರು ಮಠದ ಸಹಜ-ಸ್ವಚ್ಛ-ಸುಂದರ-ನೈಸರ್ಗಿಕ ವಾತಾವರಣ ‘ಆನಂದವನ’ದಲ್ಲಿ ನಡೆಯುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಬೇಕೆಂದು ಆನಂದ ಪ್ರಕಾಶನ, ಶ್ರೀಅದಮಾರು ಮಠ, ಉಡುಪಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

No Comments

Leave A Comment