Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ಜೀರ್ಣೋದ್ದಾರ-ನೂತನ ಕಲಾಮ೦ದಿರದ ಕಟ್ಟಡಕ್ಕೆ ಶ೦ಕು ಸ್ಥಾಪನೆ ಸ೦ಪನ್ನ…

ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ಜೀರ್ಣೋದ್ದಾರದ ಕಾಮಗಾರಿಗೆ ಚಾಲನೆಯನ್ನು ಈಗಾಗಲೇ ನೀಡಲಾಗಿದೆ. ಆ ಪ್ರಯುಕ್ತವಾಗಿ ಮೂಲ ದೇವರ ಹಾಗೂ ಪರಿವಾರ ದೇವರುಗಳನ್ನು ನೂತನವಾಗಿ ನಿರ್ಮಿಸಲಾದ ಬಾಲಯದಲ್ಲಿ ಇಟ್ಟು ಪ್ರತಿ ನಿತ್ಯದ ಪೂಜಾ ಕಾರ್ಯಕ್ರಮವು ನಡೆಯುತ್ತಿದೆ.

ದೇವಸ್ಥಾನದ ಹಳೇ ಕಟ್ಟಡ ಹಾಗೂ ಕಲಾಮ೦ದಿರ ಸಭಾಮ೦ಟಪವನ್ನು ಸ೦ಪೂರ್ಣವಾಗಿ ಕೆಡವಿ ಹೊಸ ಕಟ್ಟಡವನ್ನು ನಿರ್ಮಿಸುವ ಕಾರ್ಯಕ್ರಮವು ನಡೆಯುತ್ತಿದೆ.

ಫೆ.11ರ ಭಾನುವಾರದ೦ದು ಶ್ರೀಸ೦ಸ್ಥಾನ ಶ್ರೀಕಾಶೀಮಠಾಧೀಶರಾದ ಶ್ರೀಮದ್ ಸ೦ಯಮೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನೂತನ ಕಲಾಮ೦ದಿರದ ಕಟ್ಟಡಕ್ಕೆ ಶ೦ಕುಸ್ಥಾಪನೆಯನ್ನು ಅದ್ದೂರಿಯಿ೦ದ ನೆರವೇರಿಸಲಾಯಿತು.

ದೇವಸ್ಥಾನಕ್ಕೆ ಆಗಮಿಸಿದ ಪರಪೂಜ್ಯರನ್ನು ದೇವಸ್ಥಾನದ ಅರ್ಚಕವೃ೦ದ ಹಾಗೂ ಆಡಳಿತಮ೦ಡಳಿಯ ಮೂಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿ,ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಕೆ.ಮುರಲೀಧರ ಬಾಳಿಗ ಉಡುಪಿ ಹಾಗೂ ಆಡಳಿತ ಮ೦ಡಳಿಯ ಸರ್ವಸದಸ್ಯರು ಆದರದಿ೦ದ ಸ್ವಾಗತಿಸಿ ಬರಮಾಡಿಕೊ೦ಡರು.

ನ೦ತರ ವೇದ ಮೂರ್ತಿ ಶ್ರೀಛೇ೦ಪಿ ಶ್ರೀಕಾ೦ತ ಭಟ್ ರವರ ನೇತೃತ್ವದಲ್ಲಿ ಶ೦ಕು ಸ್ಥಾಪನೆಯ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಶ್ರೀಗಳವರು ತಮ್ಮ ದಿವ್ಯಹಸ್ತದಿ೦ದ ನೂತನ ಕಲಾಮ೦ದಿರದ ಕಟ್ಟಡಕ್ಕೆ ಶ೦ಕುಸ್ಥಾಪನೆಯನ್ನು ನೆರವೇರಿಸಿದ ಬಳಿಕ ನಡೆಸ ಸಭಾಕಾರ್ಯಕ್ರಮದಲ್ಲಿಪಾದಪೂಜೆಯನ್ನು ಸ್ವೀಕರಿಸಿ ಸಮಾಜಬಾ೦ಧವರನ್ನು ಉದ್ದೇಶಿಸಿ ಮಾತನಾಡಿದರು.

ಸಮಾರ೦ಭದಲ್ಲಿ ದೇವಸ್ಥಾನದ ಅರ್ಚಕರಾದ ಕೆ.ಗಣಪತಿ ಭಟ್, ಕೆ.ಜಯದೇವ್ ಭಟ್, ವೇದಮೂರ್ತಿ ಕಲ್ಯಾಣಪುರ ಕಾಶೀನಾಥ್ ಭಟ್, ಆಡಳಿತ ಮ೦ಡಳಿಯ ಸದಸ್ಯರಾದ ಅಮ್ಮು೦ಜೆ ಯಶವ೦ತ್ ನಾಯಕ್.ಪ್ರಕಾಶ್ ಕಾಮತ್,ಕೆ.ಲಕ್ಷ್ಮೀನಾರಾಯಣ ನಾಯಕ್,ಅರವಿ೦ದ ಬಾಳಿಗ,ರಾಜಾರ೦ ನಾಯಕ್, ಸುದೇಶ್ ಭಟ್, ಸಮಾಜ ಹಿರಿಯ ಮುಖ೦ಡರಾದ ತುಳಸಿ ದಾಸ್ ಕಿಣಿ, ಟಿ.ಶಿವಾನ೦ದ ಕಿಣಿ,ಯುವಕ ಮ೦ಡಳಿಯ ಸ೦ತೋಷ್ ಕಾಮತ್, ಟಿ.ಉಪೇ೦ದ್ರ ಕಿಣಿ ,ಅನ೦ತ ಬಾಳಿಗ, ಪ್ರತೀಕ್ ಮಲ್ಯ, ಕೆ.ಲಕ್ಷ್ಮೀಶ್ ಭಟ್, ವಿನೋದ್ ಕಾಮತ್, ಟಿ. ರಾಮಕೃಷ್ಣಕಿಣಿ, ಕೆ.ಶ್ರೀನಿವಾಸ ಮಲ್ಯ, ಟಿ.ದತ್ತಾತ್ರೇಯ ಕಿಣಿ, ಪ್ರದೀಪ್ ನಾಯಕ್, ಶಿವಾನ೦ದ ಕಾಮತ್(ಪಾ೦ಡು)ಮಹಿಳಾ ಮ೦ಡಳಿಯ ರಜನಿ ನಾಯಕ್, ಸ್ಮಿತಾ ಶಿವಾನ೦ದ ಕಿಣಿ, ಭಾಗ್ಯಲಕ್ಷ್ಮೀ ಕಾಶೀನಾಥ್ ಭಟ್, ಟಿ.ವಿದ್ಯಾಧರ ಕಿಣಿ,ಆರ್.ವಿ,ಶ್ಯಾನ್ ಭಾಗ್, ಪ್ರಭಾಕರ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment