Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಮತ್ತೆ 49 ಸಂಸದರು ಲೋಕಸಭೆಯಿಂದ ಅಮಾನತು, ಒಟ್ಟು ಸಂಖ್ಯೆ 173

ಬೆಂಗಳೂರು: ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಮಂಗಳವಾರ ಮತ್ತೆ ಭದ್ರತಾ ಉಲ್ಲಂಘನೆ ಪ್ರಕರಣದ ಗದ್ದಲ, ಕೋಲಾಹಲ ಮುಂದುವರಿದಿದೆ.

ಈ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷರು ಲೋಕಸಭೆಯಿಂದ ಫಾರೂಕ್ ಅಬ್ದುಲ್ಲಾ, ಶಶಿ ತರೂರ್, ಮನೀಶ್ ತಿವಾರಿ, ಸುಪ್ರಿಯಾ ಸುಳೆ, ಮೊಹಮ್ಮದ್ ಫೈಸಲ್, ಕಾರ್ತಿ ಚಿದಂಬರಂ, ಸುದೀಪ್ ಬಂಧೋಪಾಧ್ಯಾಯ, ಡಿಂಪಲ್ ಯಾದವ್ ಮತ್ತು ಡ್ಯಾನಿಶ್ ಅಲಿ ಸೇರಿದಂತೆ ಕನಿಷ್ಠ 49 ಲೋಕಸಭಾ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದ್ದಾರೆ.

ನಿನ್ನೆ ಒಂದೇ ದಿನದಲ್ಲಿ ದಾಖಲೆಯ 79 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಗಿತ್ತು. ಇಂದು ಸೇರಿ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಈ ಅಧಿವೇಶನವನ್ನು ಅಮಾನತುಗೊಳಿಸಿರುವ ಒಟ್ಟು ಸಂಸದರ ಸಂಖ್ಯೆ 173 ಕ್ಕೆ ಏರಿದೆ. ಇದು ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ಅತ್ಯಧಿಕವಾಗಿದೆ.

No Comments

Leave A Comment