ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಮತ್ತೆ 49 ಸಂಸದರು ಲೋಕಸಭೆಯಿಂದ ಅಮಾನತು, ಒಟ್ಟು ಸಂಖ್ಯೆ 173
ಬೆಂಗಳೂರು: ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಮಂಗಳವಾರ ಮತ್ತೆ ಭದ್ರತಾ ಉಲ್ಲಂಘನೆ ಪ್ರಕರಣದ ಗದ್ದಲ, ಕೋಲಾಹಲ ಮುಂದುವರಿದಿದೆ.
ಈ ಹಿನ್ನೆಲೆಯಲ್ಲಿ ಲೋಕಸಭಾಧ್ಯಕ್ಷರು ಲೋಕಸಭೆಯಿಂದ ಫಾರೂಕ್ ಅಬ್ದುಲ್ಲಾ, ಶಶಿ ತರೂರ್, ಮನೀಶ್ ತಿವಾರಿ, ಸುಪ್ರಿಯಾ ಸುಳೆ, ಮೊಹಮ್ಮದ್ ಫೈಸಲ್, ಕಾರ್ತಿ ಚಿದಂಬರಂ, ಸುದೀಪ್ ಬಂಧೋಪಾಧ್ಯಾಯ, ಡಿಂಪಲ್ ಯಾದವ್ ಮತ್ತು ಡ್ಯಾನಿಶ್ ಅಲಿ ಸೇರಿದಂತೆ ಕನಿಷ್ಠ 49 ಲೋಕಸಭಾ ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದ್ದಾರೆ.
ನಿನ್ನೆ ಒಂದೇ ದಿನದಲ್ಲಿ ದಾಖಲೆಯ 79 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನಿಂದ ಅಮಾನತುಗೊಳಿಸಲಾಗಿತ್ತು. ಇಂದು ಸೇರಿ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಈ ಅಧಿವೇಶನವನ್ನು ಅಮಾನತುಗೊಳಿಸಿರುವ ಒಟ್ಟು ಸಂಸದರ ಸಂಖ್ಯೆ 173 ಕ್ಕೆ ಏರಿದೆ. ಇದು ಸಂಸತ್ತಿನ ಇತಿಹಾಸದಲ್ಲಿ ಇದುವರೆಗೆ ಅತ್ಯಧಿಕವಾಗಿದೆ.