Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಉಡುಪಿ: ಚಿಟ್ಪಾಡಿಯ” ರಾಮನಾಥಕೃಪ” ಪಡಿಯಾರ್ ಮನೆಗೆ ಗೋಕರ್ಣಶ್ರೀಗಳ ಭೇಟಿ…

ಉಡುಪಿ: ಉಡುಪಿಯ ಚಿಟ್ಪಾಡಿಯ” ರಾಮನಾಥಕೃಪ”  ರಥಬೀದಿಯ ಖ್ಯಾತ ಪೂಜಾ ಸಾಮಾಗ್ರಿ ಮಳಿಗೆ ಗಣೇಶ್ ಪಡಿಯಾರ್ ಮನೆಗೆ ಡಿಸೆ೦ಬರ್ 7ರ ಗುರುವಾರದ೦ದು ಸಾಯಂಕಾಲ ಪರಮಪೂಜ್ಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧಿಪತಿ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ಭೇಟಿ ನೀಡಿದರು.

ಮನೆಗೆ ಪ್ರಥಮ ಬಾರಿ ಆಗಮಿಸಿದ್ದ ಶ್ರೀಗಳವರನ್ನು ಪೂರ್ಣಕು೦ಭದೊ೦ದಿಗೆ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.
ನ೦ತರ ಶ್ರೀಗಳವರಿಗೆ ಪಾದಪೂಜೆಯನ್ನು ಹಾಗೂ ಫಲವಸ್ತುಗಳ ಸಮರ್ಪಿಸಲಾಯಿತು.ನ೦ತರ ಶ್ರೀಗಳವರು ಮನೆಯ ಎಲ್ಲಾ ಸದಸ್ಯರಿಗೆ ಫಲಮ೦ತ್ರಾಕ್ಷತೆಯನ್ನು ನೀಡಿ ಶುಭಹಾರೈಸಿದರು.

No Comments

Leave A Comment