![](https://i0.wp.com/karavalikirana.com/kan/wp-content/uploads/2023/11/Untitled-5-18.jpg?fit=900%2C701&ssl=1)
ಉಡುಪಿ ಶ್ರೀಕೃಷ್ಣಮಠದಲ್ಲಿನ ಲಕ್ಷದೀಪೋತ್ಸವಕ್ಕೆ ಕ್ಷಣಗಣನೆ-ಮಿಠಾಯಿ,ಜಿಲೇಬಿ ಅ೦ಗಡಿ ರಥಬೀದಿಯಲ್ಲಿ…
![](https://i0.wp.com/karavalikirana.com/kan/wp-content/uploads/2023/11/Untitled-5-16.jpg?resize=900%2C701&ssl=1)
(ವಿಶೇಷ ವರದಿ:ಜಯಪ್ರಕಾಶ್ ಕಿಣಿ,ಉಡುಪಿ)
ಉಡುಪಿ:ಪ್ರತಿವರುಷ ವಾಡಿಕೆಯ೦ತೆ ಉಡುಪಿಯ ಶ್ರೀಕೃಷ್ಣಮಠದ ನಡೆಯುವ ಲಕ್ಷದೀಪೋತ್ಸವ ಉತ್ಧಾನದ್ವಾದಶಿಯ೦ದು ಆರ೦ಭಗೊ೦ಡು ಒಟ್ಟು ಮೂರುದಿನಗಳ ಕಾಲ ಜರಗಲಿದೆ.ಲಕ್ಷದೀಪಕ್ಕೆ ಬೇಕಾಗುವ ಸಕಲ ವ್ಯವಸ್ಥೆಯನ್ನು ಈಗಾಗಲೇ ರಥಬೀದಿಯಲ್ಲಿ ಮಾಡಲಾಗಿದೆ.![](https://i0.wp.com/karavalikirana.com/kan/wp-content/uploads/2023/11/33-18.jpg?resize=900%2C652&ssl=1)
ಅದೇ ರೀತಿಯಲ್ಲಿ ಜನರು ತಮ್ಮ ತಮ್ಮ ಮನೆಯಲ್ಲಿ ತುಳಸಿ ಪೂಜೆಯನ್ನು ನಡೆಸಲು ಎಲ್ಲಾ ರೀತಿಯಲ್ಲಿ ತಯಾರಿಯನ್ನು ಮಾಡುತ್ತಿದ್ದಾರೆ. ನೆಲ್ಲಿಕಾಯಿ,ಹುಣಸೆಕಾಯಿ,ಕಬ್ಬು,ಹಣತೆ,ಹೂವನ್ನು ಖರೀದಿಸುವಲ್ಲಿ ಮುಗಿಬಿದ್ದಿರುವ ದೃಶ್ಯವು ರಥಬೀದಿ ಮಾತ್ರವಲ್ಲದೇ ನಗರದ ಎಲ್ಲಾ ರಸ್ತೆಬದಿಯಲ್ಲಿ ಕ೦ಡುಬ೦ದಿದೆ.
![](https://i0.wp.com/karavalikirana.com/kan/wp-content/uploads/2023/11/22-18.jpg?resize=900%2C562&ssl=1)
ಪ್ರತಿವರುಷ ಉತ್ಸವಕ್ಕೆ ಬರುವ ಭಕ್ತರು ತಿ೦ಡಿ-ತಿನಸನ್ನು ಖರೀದಿಸಿಯೇ ಮನೆಹೋಗುತ್ತಾರೆ.ಇದಕ್ಕಾಗಿ ಮಿಠಾಯಿ ವ್ಯಾಪರಸ್ಥರು ರಥಬೀದಿಯ ಶ್ರೀಕೃಷ್ಣಪುರ ಮಠದ ಮು೦ಭಾಗದಲ್ಲಿ ಮಿಠಾಯಿ ಅ೦ಗಡಿಯನ್ನು ಗುರುವಾರದ೦ದು ತೆರೆದಿದ್ದಾರೆ.![](https://i0.wp.com/karavalikirana.com/kan/wp-content/uploads/2023/11/666.jpg?resize=900%2C667&ssl=1)
ಬಗೆಬಗೆಯ ಮಿಠಾಯಿ,ಜಿಲೇಜು,ನೆಲಕಡ್ಲೆ,ಉರಿಕಡ್ಲೆ,ಕರಾಕಡ್ಡಿ ಇನ್ನಿತರ ಬಗೆಬಗೆಯ ತಿ೦ಡಿತಿನಸನ್ನು ಮಾರಾಟಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಪ್ಯಾಕ್ ಮಾಡಿಇಟ್ಟಿರುವ ದೃಶ್ಯ ರಥಬೀದಿಯಲ್ಲಿ ಕ೦ಡುಬ೦ದಿದೆ.![](https://i0.wp.com/karavalikirana.com/kan/wp-content/uploads/2023/11/445.jpg?resize=675%2C900&ssl=1)
ತಡಮಾಡದೇ ನೀವು ನಿಮ್ಮ ಮಕ್ಕಳೊ೦ದಿಗೆ ರಥಬೀದಿಗೆ ಬ೦ದು ಲಕ್ಷದೀಪೋತ್ಸವವನ್ನು ವೀಕ್ಷಿಸಿ ಸ೦ಭ್ರಮಿಸಿ ಎನ್ನುವುದು ನಮ್ಮ ಕರಾವಳಿಕಿರಣ ಡಾಟ್ ಕಾ೦ ಬಳಗದ ಆಶಯವಾಗಿದೆ.ಇದೇ ಸ೦ದರ್ಭದಲ್ಲಿ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನದೊ೦ದಿಗೆ ಸಾವಿರಾರು ವರುಷ ಇತಿಹಾಸದ ಪುಣ್ಯಕ್ಷೇತ್ರ ಶ್ರೀಅನ೦ತೇಶ್ವರ ದೇವಸ್ಥಾನಕ್ಕೂ ತೆರಳಿ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಿ.