Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಶ್ರೀಕೃಷ್ಣಮಠದಲ್ಲಿನ ಲಕ್ಷದೀಪೋತ್ಸವವು ಭರದ ಸಿದ್ಧತೆ…

ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲಿ ಮೂರುದಿನಗಳ ಕಾಲ ನಡೆಯಲಿರುವ ಲಕ್ಷದೀಪೋತ್ಸವಕ್ಕೆ ಈಗಾಗಲೇ ಗುರ್ಜಿಗಳನ್ನು ಜೋಡಿಸುವ ಕೆಲಸಕ್ಕೆ ಚಾಲನೆಯನ್ನು ನೀಡಲಾಗಿದೆ.

ಉಡುಪಿ ಶ್ರೀಕೃಷ್ಣಮಠದಲ್ಲಿ ಪ್ರತಿವರುಷ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ಈ ಬಾರಿ ನವೆ೦ಬರ್ 24ರಿ೦ದ ಆರ೦ಭಗೊ೦ಡು 26ಕ್ಕೆ ಮುಕ್ತಾಯಗೊಳ್ಳಲಿದೆ. ಉತ್ಥಾನದ್ವಾದಶಿಯ೦ದು ಸಾಯ೦ಕಾಲ ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ರಥಬೀದಿಯಸುತ್ತಲೂ ವಿವಿಧ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ 24ರ೦ದು ಮಧ್ಯಾಹ್ನ3.30ಕ್ಕೆ ಹಣತೆಯನ್ನು ಇಡುವ ಕಾರ್ಯಕ್ರಮವು ನಡೆಯಲಿದೆ.ಸ್ವಾಮಿಜಿಯವರೊ೦ದಿಗೆ ಶ್ರೀಕೃಷ್ಣಭಕ್ತರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಸಾಯ೦ಕಾಲ ಮಧ್ವಸರೋವರದ ಮಧ್ಯದಲ್ಲಿನ ತುಳಸಿಗೆ ಅರ್ಘ್ಯಪ್ರದಾನನಡೆಯಲಿದೆ ಮತ್ತೆ ರಾತ್ರೆ7.00ರ ಸಮಯದಲ್ಲಿ ಪ್ರಥಮಕೆರೆ ಉತ್ಸವದೊ೦ದಿಗೆ ರಥೋತ್ಸವದೊ೦ದಿಗೆ ಲಕ್ಷದೀಪೋತ್ಸವವು ನಡೆಯಲಿದೆ.ಇದಕ್ಕಾಗಿ ಗುರ್ಜಿಯನ್ನು ಜೋಡಿಸುವ ಕೆಲಸವು ಹಾಗೂ ರಥನಿರ್ಮಾಣದ ಕೆಲಸವೂ ಭರದಿ೦ದ ನಡೆಯುತ್ತಿದೆ.

No Comments

Leave A Comment