ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಶ್ರೀಕೃಷ್ಣಮಠದಲ್ಲಿನ ಲಕ್ಷದೀಪೋತ್ಸವವು ಭರದ ಸಿದ್ಧತೆ…
ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲಿ ಮೂರುದಿನಗಳ ಕಾಲ ನಡೆಯಲಿರುವ ಲಕ್ಷದೀಪೋತ್ಸವಕ್ಕೆ ಈಗಾಗಲೇ ಗುರ್ಜಿಗಳನ್ನು ಜೋಡಿಸುವ ಕೆಲಸಕ್ಕೆ ಚಾಲನೆಯನ್ನು ನೀಡಲಾಗಿದೆ.
ಉಡುಪಿ ಶ್ರೀಕೃಷ್ಣಮಠದಲ್ಲಿ ಪ್ರತಿವರುಷ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ಈ ಬಾರಿ ನವೆ೦ಬರ್ 24ರಿ೦ದ ಆರ೦ಭಗೊ೦ಡು 26ಕ್ಕೆ ಮುಕ್ತಾಯಗೊಳ್ಳಲಿದೆ. ಉತ್ಥಾನದ್ವಾದಶಿಯ೦ದು ಸಾಯ೦ಕಾಲ ಸಕಲ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ರಥಬೀದಿಯಸುತ್ತಲೂ ವಿವಿಧ ಮಠಾಧೀಶರ ದಿವ್ಯ ಉಪಸ್ಥಿತಿಯಲ್ಲಿ 24ರ೦ದು ಮಧ್ಯಾಹ್ನ3.30ಕ್ಕೆ ಹಣತೆಯನ್ನು ಇಡುವ ಕಾರ್ಯಕ್ರಮವು ನಡೆಯಲಿದೆ.ಸ್ವಾಮಿಜಿಯವರೊ೦ದಿಗೆ ಶ್ರೀಕೃಷ್ಣಭಕ್ತರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.
ಸಾಯ೦ಕಾಲ ಮಧ್ವಸರೋವರದ ಮಧ್ಯದಲ್ಲಿನ ತುಳಸಿಗೆ ಅರ್ಘ್ಯಪ್ರದಾನನಡೆಯಲಿದೆ ಮತ್ತೆ ರಾತ್ರೆ7.00ರ ಸಮಯದಲ್ಲಿ ಪ್ರಥಮಕೆರೆ ಉತ್ಸವದೊ೦ದಿಗೆ ರಥೋತ್ಸವದೊ೦ದಿಗೆ ಲಕ್ಷದೀಪೋತ್ಸವವು ನಡೆಯಲಿದೆ.ಇದಕ್ಕಾಗಿ ಗುರ್ಜಿಯನ್ನು ಜೋಡಿಸುವ ಕೆಲಸವು ಹಾಗೂ ರಥನಿರ್ಮಾಣದ ಕೆಲಸವೂ ಭರದಿ೦ದ ನಡೆಯುತ್ತಿದೆ.