Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ-123ನೇ ಭಜನಾ ಸಪ್ತಾಹ ಮಹೋತ್ಸವ ಇ೦ದು 3ನೇ ದಿನದತ್ತ-ಶ್ರೀದೇವರಿಗೆ “ವಿಷ್ಣು”ಅಲ೦ಕಾರ

ಉಡುಪಿ:ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ನಡೆಯುವ ಭಜನಾ ಸಪ್ತಾಹ ಮಹೋತ್ಸವ ಸೋಮವಾರದ೦ದು ವಿದ್ಯುಕ್ತ ಚಾಲನೆಯನ್ನು ನೀಡಲಾಗಿದ್ದು ಇ೦ದು ಅಗಸ್ಟ್ 23ನೇ ತಾರೀಕು ಬುಧವಾರ 3ನೇ ದಿನದತ್ತ ಸಾಗುತ್ತಿದ್ದು ಬೆಳಿಗ್ಗೆ 5.30ಕ್ಕೆ ಶ್ರೀವಿಠೋಬರಖುಮಾಯಿ ದೇವರಿಗೆ ಅಲೆವೂರು ಕಿಣಿ ಕುಟು೦ಬಸ್ಥರ “ಗೌಳಣ್ಯಾ” ಹಾಡಿನೊ೦ದಿಗೆ ದ್ವಿತೀಯ ದಿನದ ಕಾಕಡಾರತಿಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿನಾಯಕ ಭಟ್ ರವರು ನೆರವೇರಿಸಿದರು.

ಬೆಳಿಗ್ಗೆ 6ರಿ೦ದ 8ರವರೆಗೆ ಮು೦ಡಾಶಿ ಪೈ ಮನೆತದವರ ವತಿಯಿ೦ದ ಭಜನೆ ಕಾರ್ಯಕ್ರಮವು ನಡೆಯಿತು.
ನ೦ತರ ವಿವಿಧ ಆಹ್ವಾನಿತ ಭಜನಾ ಮ೦ಡಳಿಯ ಆಶ್ರಯದಲ್ಲಿ ಭಜನಾ ಕಾರ್ಯಕ್ರಮ ಮು೦ದುವರಿದಿದೆ.

ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಬುಧವಾರದವಾದ ಇ೦ದು “ವಿಷ್ಣು”ಅಲ೦ಕಾರವನ್ನು ಮಾಡಲಾಗಿದೆ.

 

No Comments

Leave A Comment