Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಶಿರಬೀಡು ವಾರ್ಡ್ ನಲ್ಲಿ ಶಿಥಿಲಗೊಂಡ ಸಣ್ಣ ಸೇತುವೆ ದುರಸ್ಥಿಗೆ ಸುರೇಶ್ ಬನ್ನ೦ಜೆ ಆಗ್ರಹ

ಉಡುಪಿ:ಉಡುಪಿ ಶಿರಬೀಡು ವಾರ್ಡ್ ನಲ್ಲಿ ಶಿಥಿಲಗೊಂಡ ಸಣ್ಣಸೇತುವೆ ಈ ಸೇತುವೆ ಮೇಲೆ ಪ್ರತಿನಿತ್ಯವೂ ನೂರಾರು ಜನರು ಸಂಚಾರಿಸುತ್ತಿದ್ದು ದ್ವಿಚಕ್ರ ವಾಹನ ಸವಾರರು ಕೂಡ ಈ ಸೇತುವೆ ಮೇಲಿಂದ ಸಂಚರಿಸುತ್ತಾರೆ ಈ ಸೇತುವೆಯ ಉಡುಪಿ ಬಸ್ ಸ್ಟ್ಯಾಂಡ್ ನಿಂದ ತಾಲೂಕ ಆಫೀಸ್ ಗೆ ಒಳದಾರಿಯಾಗಿರುತ್ತದೆ.

ಮಾತ್ರವಲ್ಲದೆ ಅಂಬಲಪಾಡಿ ದೇವಸ್ಥಾನಕ್ಕೆ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೈಂಟ್ ಸಿಸಿಲಿಸ್ ಕಾನ್ವೆಂಟ್ ಶಾಲೆಗೆ ಇದು ಒಳದಾರಿಯಾಗಿದ್ದು ದಿನನಿತ್ಯ ನೂರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು ಈ ಸೇತುವೆ ಮೇಲೆ ಜನರು ಹೋಗಲು ಭಯಪಡುತ್ತಿದ್ದು ಉಡುಪಿ ನಗರ ವ್ಯಾಪ್ತಿಯ ಮಳೆ ನೀರು ಈ ತೋಡಿನಲ್ಲಿ ಹರಿದು ಹೋಗುತ್ತಿದ್ದು ದಿನನಿತ್ಯ ಈ ಪರಿಸರದಲ್ಲಿ ನೆರೆ ಉಂಟಾಗುತ್ತಿದ್ದು ಈ ಸೇತುವೆ ಯಾವ ಸಂದರ್ಭದಲ್ಲಿ ನೀರು ಪಾಲಾಗುವುದು ಎಂದು ಜನರು ಹೆದರಿಕೆಯಲ್ಲಿ ಈ ಸೇತುವೆಯನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ಇದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

ಈ ಹಿಂದೆ ನಗರಸಭಾ ಅಧಿಕಾರಿಗಳಿಗೆ ದೂರನ್ನು ನೀಡಿದ್ದು ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಷ್ಟು ಮಾತ್ರವಲ್ಲದೆ ಸ್ಥಳೀಯ ನಗರಸಭಾ ಸದಸ್ಯರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಉಡುಪಿ ಜಿಲ್ಲಾಧಿಕಾರಿಯವರು ಕೂಡಲೇ ಈ ಸೇತುವೆಯ ದುರಸ್ತಿಯ ಕಾರ್ಯವನ್ನು ಕೈಗೆತ್ತಿಕೊಂಡು ಜನಸಾಮಾನ್ಯರ ಪ್ರಾಣವನ್ನು ಉಳಿಸಿಕೊಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಜಿಲ್ಲಾಧಿಕಾರಿಯರಲ್ಲಿ ಮನವಿಯನ್ನು ಮಾಡಿರುತ್ತಾರೆ.

No Comments

Leave A Comment