Log In
BREAKING NEWS >
````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಹಾಗೂ ಓದುಗರಿಗೆ ಶ್ರೀ ಗೌರಿ-ಗಣೇಶನ ಹಬ್ಬದ ಶುಭಾಶಯಗಳು```````

ಕಾರವಾರ: ಸಾಲದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ಗೋವಾದ ಕುಟುಂಬ

ಕಾರವಾರ: ಆಘಾತಕಾರಿ ಘಟನೆಯೊಂದರಲ್ಲಿ ಗೋವಾದ ಮೂವರ ಕುಟುಂಬವೊಂದು ಸಾಲದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಇಲ್ಲಿನ ಕಾಳಿ ನದಿ ದಂಡೆಯಲ್ಲಿ ಸಾವನ್ನಪ್ಪಿದ್ದರೆ, ಗೋವಾದಲ್ಲಿ ಒಬ್ಬರು ನೇಣು ಹಾಕಿಕೊಂಡಿದ್ದಾರೆ.

ಕಾರವಾರದಿಂದ 5 ಕಿಮೀ ದೂರದಲ್ಲಿರುವ ದೇವಬಾಗ್ ದ್ವೀಪದಲ್ಲಿ ಬುಧವಾರ  12 ವರ್ಷದ ಬಾಲಕನ ಶವವನ್ನು ಸ್ಥಳೀಯರು ಪತ್ತೆ ಮಾಡಿದ ನಂತರ ಇದು ಗೊತ್ತಾಗಿದೆ. ತದಂತರ ಪೊಲೀಸರು ಅದೇ ಸ್ಥಳದಿಂದ 37 ವರ್ಷದ ಮಹಿಳೆಯ ಮತ್ತೊಂದು ಶವವನ್ನು ಪತ್ತೆ ಹಚ್ಚಿದ್ದಾರೆ. ಸಾವಿಗೆ ಕಾರಣ ಪತ್ತೆಹಚ್ಚಲು ಪೊಲೀಸರು ಹುಡುಕಾಟ ನಡೆಸಿದಾಗ  ಮೃತ ಮಹಿಳೆ ಬಾಲಕ  ದಕ್ಷ್ ಪಟೇಲ್ ತಾಯಿ ಎಂದು ಗುರುತಿಸಿದ್ದಾರೆ.

ಮೃತ ಮಹಿಳೆಯನ್ನು ಗೋವಾದ ಮಾಪುಸಾ ಸಮೀಪದ ಪಾಡಿ ನಿವಾಸಿ ಜ್ಯೋತಿ ಪಾಟೀಲ್ ಎಂದು ಗುರುತಿಸಲಾಗಿದೆ. ನಂತರ, ಗೋವಾದಲ್ಲಿ ಪೊಲೀಸರು ತನಿಖೆ ನಡೆಸಿದಾಗ ಅಲ್ಲಿನ ಪಾಡಿ ಅರಣ್ಯ ಪ್ರದೇಶದಲ್ಲಿ ಜ್ಯೋತಿ ಅವರ ಪತಿ ಶ್ಯಾಮ್ ಪಾಟೀಲ್ ಕೂಡ ಶವವಾಗಿ ಪತ್ತೆಯಾಗಿದ್ದಾರೆ. ಅವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗೋವಾ ಪೊಲೀಸರು ಖಚಿತಪಡಿಸಿದ್ದಾರೆ.

 ಕಾರವಾರದಿಂದ 20 ಕಿ.ಮೀ ದೂರದಲ್ಲಿರುವ ಗೋಪಿಶೆಟ್ಟರ ಮೂಲದ ಶ್ಯಾಮ್ ಅವರು 25 ವರ್ಷಗಳ ಹಿಂದೆ ತಮ್ಮ ವ್ಯಾಪಾರಕ್ಕಾಗಿ ಗೋವಾಕ್ಕೆ ಸ್ಥಳಾಂತರಗೊಂಡಿದ್ದರು, ಅಲ್ಲಿ ಅವರು ಮೂಲತಃ ಕಾರವಾರದಿಂದ ವಿವಿಧ ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲವನ್ನು ಪೂರೈಸುತ್ತಿದ್ದರು.ಆದರೆ, ಕಾರಣಾಂತರಗಳಿಂದ ನಷ್ಟ ಅನುಭವಿಸಿದ ಅವರು ತಮ್ಮ ಸ್ನೇಹಿತರು ಮತ್ತು ಹಣಕಾಸು ಸಂಸ್ಥೆಗಳಿಂದ  ದೊಡ್ಡ ಮೊತ್ತದ ಹಣವನ್ನು ಸಾಲ ಪಡೆದಿದ್ದರು ಎನ್ನಲಾಗಿದೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.

No Comments

Leave A Comment