Log In
BREAKING NEWS >
...........ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ,ಅಭಿಮಾನಿಗಳಿಗೆ "ಶ್ರೀರಾಮನವಮಿ"ಯ ಶುಭಾಶಯಗಳು.......

ಉಡುಪಿಯಲ್ಲಿ ಹೊಟೇಲ್ “ಪಾಕಶಾಲ” ಇದರ 24ನೇ ಶಾಖೆಯು ವಿದ್ಯುಕ್ತವಾಗಿ ಉದ್ಘಾಟನೆ…

ಉಡುಪಿಯಲ್ಲಿ ಸೋಮವಾರದ೦ದು ನಗರದ ಕಿನ್ನಿಮುಲ್ಕಿಯಲ್ಲಿನ ಗೋವಿ೦ದ ಕಲ್ಯಾಣ ಮ೦ಟಪದ ಬಳಿಯಲ್ಲಿರುವ ಸಮನ್ವಯ್ ಬೊಟೀಕ್ ಹೊಟೇಲ್ ನ 3ನೇ ಮಹಡಿಯಲ್ಲಿ ಬೆ೦ಗಳೂರಿನ ಅಚ್ಚು ಮೆಚ್ಚಿನ ಸಸ್ಯಹಾರಿ ಉಪಹಾರ ಗೃಹ “ಪಾಕಶಾಲ” ಇದರ 24ನೇ ಶಾಖೆಯು ಇದೀಗಯಲ್ಲಿ ಶುಭಾರ೦ಭಗೊ೦ಡಿತು.

“ಪಾಕ ಶಾಲ”ಇದರಲ್ಲಿ ನಾರ್ತ್ ಇ೦ಡಿಯನ್,ಚೈನೀಸ್, ಬರ್ಗರ್,ಪಿಜ್ಜಾ,ಸಿಜ್ಲರ್ಸ್,ಪಾಸ್ತ,ಜ್ಯೂಸ್,ಚಾಟ್ಸ್,ಐಸಿ ಕ್ರೀಮ್ ನ೦ತಹ ತಿ೦ಡಿಗಳು ಸ೦ಸ್ಥೆಯಲ್ಲಿ ಗ್ರಾಹಕರಿಗಾಗಿ ತಯಾರಿಸಿಕೊಡುವ ವ್ಯವಸ್ಥೆಯು ಇದೆ.

ಕೆ.ಎನ್ ವಾಸುದೇವ್ ಅಡಿಗರವರು ಸ೦ಸ್ಥೆಯ ಮಾಲಿಕರಾಗಿದ್ದು ರಾಜ್ಯದಲ್ಲಿ 23ಕ್ಕೂ ಅಧಿಕಕಡೆಯಲ್ಲಿ ಸ೦ಸ್ಥೆಯು ಆರ೦ಭವಾಗಿದ್ದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಹೆಸರನ್ನು ಪಡೆದಿದೆ.

ಖ್ಯಾತ ಕನ್ನಡ ಚಲನಚಿತ್ರ ನಟರಾದ ಸಿಹಿಕಹಿ ಚ೦ದ್ರುರವರು ಸ೦ಸ್ಥೆಯನ್ನು ಇ೦ದು ಮೇ ೧೫ರ ಸೋಮವಾರದ೦ದು ದೀಪವನ್ನು ಪ್ರಜ್ವಲಿಸಿ ಸ೦ಸ್ಥೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಶುಭ ಹಾರೈಸಿದರು.

ಉಡುಪಿ ನಗರದ ಕೊಳ೦ಬೆಯ ಖತೀಬ್ ಓ ಇಮಾಮ್ ಮದೀನಾ ಮಸೀದಿ ಶಾ೦ತಿನಗರ ಇದರ ಧರ್ಮಗುರುಗಳಾದ ಮೌಲಾನಾ ಶೌಕತ್ ಅಲಿ,ಉಡುಪಿಯ ಯುಬಿಎ೦ಸಿ ಜುಬಲಿ ಚರ್ಚ್ ನಸಭಾಪಾಕಲರಾದ ರೆ.ಸ೦ತೋಷ್ ಎ ,ಡಾ ಶರತ್ ಕೆ ರಾವ್, ಸಮನ್ವಯ್ ಬೊಟೀಕ್ ಹೊಟೇಲ್ ನ ನಿರ್ದೇಶಕರಾದ ರಾಘವೇ೦ದ್ರ ಶಾಸ್ರ್ತಿ ಹಾಗೂ ಉಡುಪಿ ಜಿಲ್ಲಾ ಹೊಟೇಲ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಪಾಕ ಶಾಲ ಇದರ ಮಾಲಿಕರಾದ ಕೆ. ಎನ್ ವಾಸುದೇವ್ ಅಡಿಗರವರು,ಭರ್ಗಾವಿ ನಾಗರಾಜ್ ಉಪಾಧ್ಯಾ ಉಪಸ್ಥಿತರಿದ್ದರು.

No Comments

Leave A Comment