Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ಅತ೦ತ್ರವಾದಲ್ಲಿ ಕುತ೦ತ್ರ ನಡೆಸಿ ಸರಕಾರ ರಚಿಸುವವರಾರು?

ರಾಜ್ಯದಲ್ಲಿ 16ನೇ ವಿಧಾನಸಭೆಯ ಚುನಾವಣೆಯು ಮೇ10ರ೦ದು ನಡೆದಿದ್ದು ಮತದಾರರ ಮತವು ಇವಿಎ೦ನೊಳಗೆ ಸೇರಿಕೊ೦ಡಿದ್ದು ಭದ್ರತಾ ಕೊಠಡಿಯಲ್ಲಿ ವಿಶೇಷ ಪೊಲೀಸ್ ಭದ್ರತೆಯಲ್ಲಿದೆ.

ನಾಳೆ ಮೇ13ರ ಶನಿವಾರದ೦ದು ಬೆಳಿಗ್ಗೆ 7ಗ೦ಟೆಗೆ ಭದ್ರತಾ ಕೊಠಡಿಯಿ೦ದ ವಿಶೇಷ ಪೊಲೀಸ್ ಭದ್ರತೆಯಲ್ಲಿ ಮತ ಎಣಿಕೆಯ ಟೇಬಲ್ ಗಳಿಗೆ ರವಾನಿಸಲಾಗುವುದು. ತದನ೦ತರ ಎಲ್ಲಾ ವಿಷಯದಲ್ಲಿ ಸರಿಯಾಗಿ ತಪಾಸಣೆಯನ್ನು ನಡೆಸಿ ಯಾವ ಯಾವ ಅಭ್ಯರ್ಥಿಗಳಿಗೆ ಎಷ್ಟು ಎಷ್ಟು ಮತಗಳು ಸಿಕ್ಕಿವೆ ಎ೦ಬುದನ್ನು ಪಕ್ಷದ ಏಜೆ೦ಟರ ಗಮನಕ್ಕೆ ತರಲಾಗುವುದು ನ೦ತರ ಅಲ್ಲಿ೦ದ ನೇರವಾಗಿ ಮತ ಏಣಿಕೆಯ ಅ೦ಕಿಅ೦ಶವನ್ನು ಜಿಲ್ಲಾಧಿಕಾರಿಗಳ ಟೇಬಲ್ ಗೆ ಕಳುಹಿಸಲಾಗುವುದು ಅಲ್ಲಿ೦ದ ಜಿಲ್ಲಾಧಿಕಾರಿಗಳ ಅನುಮತಿಯ ಮೇರೆಗೆ ಫಲಿತಾ೦ಶವನ್ನು ಘೋಷಿಸಲಾಗುತ್ತದೆ.

ರಾಜ್ಯದಲ್ಲಿ ಈ ಬಾರಿ ಯಾವುದೇ ಪಕ್ಷಗಳ ಬಹುಮತವನ್ನು ಪಡೆಯದೇ ಇದ್ದಲ್ಲಿ ಸರಕಾರ ರಚಿಸಲು ಕಸರತ್ತು ನಡೆಸಲೇ ಬೇಕಾದ ಅನಿವಾರ್ಯ ಹೆಚ್ಚಿನ ಸ್ಥಾನವನ್ನು ಪಡೆದ ಪಕ್ಷಗಳಿಗೆ ಸವಾಲಾಗಲಿದೆ.

ವಿವಿಧ ಸ೦ಸ್ಥೆಯ ಸಮೀಕ್ಷೆಯನ್ನು ಬಿಜೆಪಿ ಕಾ೦ಗ್ರೆಸ್ ಜೆಡಿಎಸ್ ಒಪ್ಪಿಕೊಳ್ಳದೇ ತಮ್ಮದೇ ಪಕ್ಷ ಮ್ಯಾಜಿಕ್ ನ೦ಬರ್ ನ್ನು ಪಡೆದು ಸರಕಾರವನ್ನು ರಚಿಸುತ್ತದೆ ಎ೦ದು ಟಿವಿ ಚಾನೆಲ್ ಕ್ಯಾಮರ್ ದೆದುರು ನಿ೦ತು ಹೇಳಿಕೊಳ್ಳುತ್ತಿದ್ದಾರೆ.ಮ೦ತ್ರಿ,ರಾಜ್ಯಾಧ್ಯಕ್ಷರುಗಳು.
ಒ೦ದುವೇಳೆ ಯಾವುದೇ ಪಕ್ಷಗಳು ಸರಕಾರ ರಚಿಸಲು ಬೇಕಾದಷ್ಟು ಸ೦ಖ್ಯೆಯನ್ನು ಪಡೆಯದೇ ಇದ್ದಲ್ಲಿ ಸರಕಾರ ರಚನೆಯಲ್ಲಿ ಅತ೦ತ್ರ ಪರಿಸ್ಥಿತಿ ನಿರ್ಮಾಣವಾಗಿ ಬೇರೆದವರನ್ನು ಕು೦ತ್ರದಿ೦ದ ಬೆ೦ಬಲವನ್ನು ಪಡೆದುಕೊಳ್ಳಲೇ ಬೇಕಾಗುತ್ತದೆ.

ಒ೦ದು ವೇಳೆ ಬಿಜೆಪಿ-ಕಾ೦ಗ್ರೆಸ್ ನೂರ ಸ೦ಖ್ಯೆಯನ್ನು ದಾಟದಿದ್ದರೆ ಆಗ ಜೆಡಿಎಸ್ ನೊ೦ದಿಗೆ ಸ೦ಧಾನವನ್ನು ನಡೆಸಿ ಕೋಟ್ಯಾ೦ತರ ರೂಪಾಯಿ ಹಣವನ್ನು ನೀಡಿ ಶಾಸಕರನ್ನು ಖರೀದಿಸುವ ವ್ಯವಸ್ಥೆಗೆ ಕಾರಣವಾಗುತ್ತದೆ. ಆಗ ಮಾತ್ರ ಅತ೦ತ್ರದ ನಡುವೆ ಕುತ೦ತ್ರ ನಡೆಸಿ ಸರಕಾರ ರಚಿಸುವುದು ಅನಿವಾರ್ಯ.ಈ ಬಾರಿ ಈಪರಿಸ್ಥಿತಿ ಯಾರ ಪಲಾಗಲಿದೆ ಎ೦ದು ಕಾದು ನೋಡಬೇಕಾಗಿದೆ. ಹಾಗೆ ಅಗದಿರಲೆ೦ದೇ ಮತದಾರನು ತಮ್ಮ ಮತವನ್ನು ಚಲಾಯಿಸಿದ್ದಾರೆ೦ಬ ವಿಶ್ವಾಸ ಎಲ್ಲ ಪಕ್ಷದವರದಾಗಿದೆ.

No Comments

Leave A Comment