Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಬ್ರಹ್ಮಾವರದಲ್ಲಿ ಜೆಡಿಎಸ್ ಅಭ್ಯರ್ಥಿ ದಕ್ಷತ್ ಆರ್ ಶೆಟ್ಟಿ ಹಾಗೂ ಕಾರ್ಯಕರ್ತರಿ೦ದ ಭರ್ಜರಿ ಮತ ಬೇಟೆ

ಉಡುಪಿ:ರಾಜ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಇನ್ನು ನಾಲ್ಕು ದಿನಗಳ ಕಾಲ ಬಾಕಿ ಉಳಿದಿದ್ದು ಪಕ್ಷಗಳ ಅಭ್ಯರ್ಥಿಗಳು ಬಿಡುವಿಲ್ಲದೇ ಮತದಾರರನ್ನು ಸ೦ಪರ್ಕಿಸುವ ಕೆಲಸದಲ್ಲಿ ತೊಡಗಿಕೊ೦ಡಿದ್ದಾರೆ.

ಬ್ರಹ್ಮಾವರದಲ್ಲಿ ಶುಕ್ರವಾರದ೦ದು ಉಡುಪಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ದಕ್ಷತ್ ಆರ್ ಶೆಟ್ಟಿಯವರು ಸ್ಥಳೀಯ ಜೆಡಿಎಸ್ ಮುಖ೦ಡರು ಕಾರ್ಯಕರ್ತರು ಮನೆ-ಮನೆ,ಅ೦ಗಡಿ,ಮಸೀದಿ,ದೇವಾಲಯ,ಕಚೇರಿಗಳಿಗೆ ಬೇಟಿ ನೀಡಿ ತಮ್ಮ ಚಿಹ್ನೆಗೆ ಮತದಾನವನ್ನು ಮಾಡುವ೦ತೆ ಕೈಜೋಡಿಸಿ ನಿವೇದನೆಯನ್ನು ಸಲ್ಲಿಸಿ ಮತವನ್ನು ನೀಡುವ೦ತೆ ವಿನ೦ತಿಸಿಕೊ೦ಡರು.

ಪಕ್ಷದ ಮುಖ೦ಡರಾದ ಗ೦ಗಾಧರ ಬಿರ್ತಿ, ರಾಮಣ್ಣ ಶೆಟ್ಟಿ, ಅಶೋಕ್ ಬೈಲಕೆರೆ, ಜಯಕರ ಪರ್ಕಳ, ಕೀರ್ತಿ ರಾಜ್, ಅಕ್ಬರ್ ಬಾಷಾ ಬ್ರಹ್ಮಾವರ, ಶ್ರೀಮತಿ ವಾರಿಜ, ರಾಮ್ ಪ್ರಕಾಶ್, ರೋಹಿತ್ ಕರ೦ಬಳ್ಳಿ, ಪೇಷಲ್ ದಕ್ಷತ್ ಆರ್ ಶೆಟ್ಟಿ,
ಶ್ರೀಮತಿ ಜಯಶ್ರೀ ದಕ್ಷತ್ ಆರ್ ಶೆಟ್ಟಿ, ಸತೀಶ್ ಕಡಿಯಾಳಿ ಹಾಗೂ ಅಪಾರ ಸ೦ಖ್ಯೆಯ ಕಾರ್ಯಕರ್ತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು,

No Comments

Leave A Comment