ಶ್ರೀನಗರ: ಭೀಕರ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರ ತತ್ತರಿಸಿ ಹೋಗಿದ್ದು, ಭೂ ಕುಸಿತ, ಪ್ರವಾಹ ಹಾಗೂ ಮಳೆಯಿಂದಾಗಿ ಸಂಭವಿಸಿದ ಅನಾಹುತದಿಂದ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಮಳೆಯಿಂದಾಗಿ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ 36ಕ್ಕೆ ಏರಿದೆ. ಇದರ ಜೊತೆಗೆ ಮಳೆ ಸಂಬಂಧಿತ ಅವಘಡದಲ್ಲಿ
ನವದೆಹಲಿ:ಆ. 26ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ 10 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿಗಷ್ಟೇ ಹವಾಮಾನ ಇಲಾಖೆಯು ಕಥುವಾ, ಸಾಂಬಾ, ದೋಡಾ, ಜಮ್ಮು, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳು ಸೇರಿದಂತೆ ಜಮ್ಮುವಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿತ್ತು.
ಭುವನೇಶ್ವರ:ಆ. 26. ಒಡಿಶಾದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, 170ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿವೆ. ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆ ಮುದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಉತ್ತರ ಒಡಿಶಾದ ಬಾಲಸೋರ್, ಭದ್ರಕ್ ಮತ್ತು ಜಾಜ್ಪುರ ಜಿಲ್ಲೆಗಳ 170 ಕ್ಕೂ ಹೆಚ್ಚು
ಉಡುಪಿ:ದೇಶದೆಲ್ಲೆಡೆಯಲ್ಲಿ ಇ೦ದು ಮ೦ಗಳವಾರದ೦ದು ಶ್ರೀಗೌರಿತೃತೀಯ ಹಬ್ಬವು ವಿಜೃ೦ಭಣೆಯಿ೦ದ ನಡೆಯುತಿದೆ.ಜಿ ಎಸ್.ಬಿ ಸಮಾಜಬಾ೦ಧವರ ಮನೆಯಲ್ಲಿ ಈ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಮಹದೇವ ಹಾಗೂ ಗೌರಿಯ ಭಾವಚಿತ್ರವನ್ನಿಟ್ಟು ಅದಕ್ಕೆ ಹೂವಿನಿ೦ದ ಶೃ೦ಗರಿಸಿ ಮಧ್ಯಾಹ್ನ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.ವಾಯಿಣಪೂಜೆಯೆ೦ದೇ ಹೆಸರುವಾಸಿ.ಸುವಾಸಿನಿಯರಿಗೆ ಈ ಕಾರ್ಯಕ್ರಮ ಬಹಳ ಶ್ರೇಷ್ಠವಾಗಿದೆ. ಕಿರಿಯರು ಹಿರಿಯರಿಗೆ ವೀಳ್ಯವನ್ನು ಕೊಟ್ಟುಪೂಜಿಸಲ್ಪಟ್ಟ ತೆ೦ಗಿನಕಾಯಿ
ಉಡುಪಿ:ದೇಶದೆಲ್ಲೆಡೆ ಶ್ರೀಗೌರಿಗಣೇಶನ ಹಬ್ಬದ ಸ೦ಭ್ರಮದ ವಾತಾವರಣವು ನಿರ್ಮಾಣವಾಗಿದೆ.ಶಾ೦ತಿಯುತವಾಗಿ ಈ ಹಬ್ಬವು ನಡೆಯಲೆನ್ನುವುದೇ ಎಲ್ಲಾ ಭಾರತೀಯ ಆಸೆಯಾಗಿದೆ.ಯಾವುದೇ ಕಾರ್ಯಕ್ರಮವು ನಡೆಯುವುದಾರೆ ಶ್ರೀಗಣೇಶನ ನಾಮ ಸ್ಮರಣೆಯಿ೦ದಲೇ ಆರ೦ಭವಾಗುವುದು. ಈ ಹಬ್ಬವನ್ನುಎಲ್ಲಾ ಧರ್ಮದವರು ಕೂಡಿಕೊ೦ಡು ಮಾಡುತ್ತಾರೆ. ಶ್ರೀಗಣೇಶನ ವಿಗ್ರಹ ರಚಿಸುವವ ಕಲಾವಿದರು ನಿರ೦ತರವಾಗಿ ವಿಗ್ರಹ ರಚನೆಯಲ್ಲಿ ರಾತ್ರೆ-ಹಗಲೆನ್ನದೇ ನಿರ್ಮಾಣಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ಮಂಗಳೂರು:ಆಗಸ್ಟ್ 24: ಕರಾವಳಿ ಕರ್ನಾಟಕವನ್ನು ಸಾಮಾನ್ಯವಾಗಿ ಬಿಜೆಪಿ ಭದ್ರಕೋಟೆಯಂದೇ ಹೇಳಲಾಗುತ್ತದೆ. ಕೆಲವು ವರ್ಷಗಳಿಂದ ಸಣ್ಣ ಪುಟ್ಟ ಚುನಾವಣೆಗಳಿಂದ ಹಿಡಿದು ವಿಧಾನಸಭೆ , ಲೋಕಸಭೆ ಚುನಾವಣೆಗಳಲ್ಲಿ ಹಿಂದುತ್ವದ ಅಜೆಂಡಾದ ಮೇಲೆ ಬಿಜೆಪಿ ಗೆದ್ದುಕೊಂಡು ಬರುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಅಂದರೆ 2018ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ
ಆಲ್ಬನಿ:ಆ. 24,ನಯಾಗರಾ ಫಾಲ್ಸ್ ವೀಕ್ಷಿಸಿ ನ್ಯೂಯಾರ್ಕ್ಗೆ ಹಿಂತಿರುಗುತ್ತಿದ್ದ ಬಸ್ವೊಂದು ಪಲ್ಟಿ ಹೊಡೆದ ಪರಿಣಾಮ ಭಾರತೀಯರು ಸೇರಿ ಐವರು ಮೃತಪಟ್ಟಿರುವ ಘಟನೆ ಪೆಂಬ್ರೋಕ್ನಲ್ಲಿ ಸಂಭವಿಸಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 54 ಪ್ರಯಾಣಿಕರ ಪೈಕಿ ಐದು ಮಂದಿ ಮೃತಪಟ್ಟಿದ್ದು, ಹಲವರು
ಅಹಮದಾಬಾದ್: ಗುಜರಾತ್ನ ಕಚ್ ಜಿಲ್ಲೆಯ ಭಾರತ-ಪಾಕ್ ಗಡಿ ಬಳಿ ಶನಿವಾರ ಗಡಿ ಭದ್ರತಾ ಪಡೆ (ಬಿಎಸ್ಎಫ್) 15 ಪಾಕಿಸ್ತಾನಿ ಮೀನುಗಾರರನ್ನು ಬಂಧಿಸಿದ್ದು, ಎಂಜಿನ್ ಅಳವಡಿಸಿದ್ದ ದೋಣಿಯನ್ನು ವಶಪಡಿಸಿಕೊಂಡಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಮೇರೆಗೆ, ಬಿಎಸ್ಎಫ್ ಸಿಬ್ಬಂದಿ 68ನೇ ಬೆಟಾಲಿಯನ್ ಅಡಿಯಲ್ಲಿ ಗಡಿ ಹೊರಠಾಣೆ ಬಳಿಯ ಕೋರಿ ಕ್ರೀಕ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು
ನವದೆಹಲಿ: ಒಡಿಶಾ ಕರಾವಳಿಯಲ್ಲಿ ಸಮಗ್ರ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಯ (IADWS) ಮೊದಲ ಹಾರಾಟ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ವೇದಿಕೆಯ ಅಭಿವೃದ್ಧಿಕಾರರಾದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಸಶಸ್ತ್ರ ಪಡೆಗಳನ್ನು ಹಾರಾಟ ಪರೀಕ್ಷೆಗಳಲ್ಲಿ ಅಭಿನಂದಿಸಿದರು. ಶನಿವಾರ ಒಡಿಶಾ ಕರಾವಳಿಯಲ್ಲಿ 1230 ಗಂಟೆಗಳ