2017ರ ಫೆಬ್ರವರಿ 17ರ ರಾತ್ರಿ ನಟಿಯನ್ನು ಅಂಗಮಾಲಿ ಅಥಣಿ ಬಳಿ ಕಾರು ತಡೆದು ಅಪಹರಿಸಿ, ದೈಹಿಕವಾಗಿ ಹಲ್ಲೆ ಮಾಡಿ, ಅಶ್ಲೀಲವಾಗಿ ಫೋಟೋಗಳನ್ನು ಸೆರೆಹಿಡಿದ ಸಂಬಂಧ ಪ್ರಕರಣ ದಾಖಲಾಗಿತ್ತು. ಪಿತೂರಿ ಮತ್ತು ಸಾಕ್ಷ್ಯ ನಾಶವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿ ನ್ಯಾಯಾಲಯ ಎಂಟನೇ ಆರೋಪಿ ದಿಲೀಪ್ನನ್ನು ಖುಲಾಸೆಗೊಳಿಸಿತ್ತು. ಏಳನೇ ಆರೋಪಿ ಚಾರ್ಲಿ ಥಾಮಸ್, ಒಂಬತ್ತನೇ ಆರೋಪಿ ಸನಿಲ್ ಕುಮಾರ್ (ಮೇಷ್ಠಿರಿ ಸನಿಲ್), ಮತ್ತು 15 ನೇ ಆರೋಪಿ ಮತ್ತು ದಿಲೀಪ್ ಸ್ನೇಹಿತ ಜಿ ಶರತ್ ಅವರನ್ನು ಸಹ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು. ಬೈಜು ಪೌಲೋಸ್ ತನಿಖಾ ಅಧಿಕಾರಿಯಾಗಿದ್ದು ಅಡ್ವ. ವಿ ಅಜ್ಕುಮಾರ್ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿದ್ದಾರೆ.