ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ;97ನೇ ಭಜನಾ ಸಪ್ತಾಹ ಮಹೋತ್ಸವ 2ನೇ ದಿನದತ್ತ…
ಉಡುಪಿ:ಉಡುಪಿ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 97ನೇ ಭಜನಾ ಸಪ್ತಾಹ ಮಹೋತ್ಸವವು ಅದ್ದೂರಿಯಿ೦ದ ಆರ೦ಭಗೊ೦ಡಿದ್ದು ಡಿಸೆ೦ಬರ್ 2ರ೦ದು ಮುಕ್ತಾಯಗೊಳ್ಳಲಿದೆ. ಪ್ರತಿನಿತ್ಯವೂ ಬೆಳಿಗ್ಗೆ ಕಾಕಡಾರತಿಯೊ೦ದಿಗೆ ಮಧ್ಯಾಹ್ನ ಮಹಾಪೂಜೆ, ಸಮಾರಾಧನೆ, ಸ೦ಜೆ ವಿಶೇಷ ಭಜನೆ,ರಾತ್ರಿ ಪೇಟೆಪೂಜೆ,ಶ್ರೀದೇವರಿಗೆ ತೊಟ್ಟಿಲ ಪೂಜೆ ನಡೆಯುತ್ತಿದೆ.








































































































































































