ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಪ್ರಧಾನ ಮ೦ತ್ರಿ ಉಡುಪಿಗೆ ಭೇಟಿ-ಮಳೆ ನೀರು ಹರಿದು ಹೋಗುವ ತೋಡಿಗೆ ಮಣ್ಣು-ಸಮಸ್ಯೆಗೆ ನಾ೦ದಿಯಾಯಿತೇ?

ಉಡುಪಿಗೆ ಪ್ರಧಾನ ಮ೦ತ್ರಿಯವರ ಆಗಮನಕ್ಕಾಗಿ ಹಲವಾರು ಅಭಿವೃದ್ಧಿ ಕಾಮಗಾರಿಯನ್ನು ತರಾತುರಿಯಿ೦ದ ಉಡುಪಿಯಲ್ಲಿ ಆರ೦ಭಿಸಲಾಗಿದೆ.ಅದರೆರ೦ತೆ ಹಲವು ಸಮಸ್ಯೆಗಳು ಇದರಿ೦ದಾಗಿದೆ ಎ೦ಬುದಕ್ಕೆ ಈ ಚಿತ್ರವೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ತೆ೦ಕಪೇಟೆ ಹಾಗೂ ಒಳಕಾಡುವಿನ ನಗರಸಭೆಯ ವಾರ್ಡಿನ ಕೊಳಚೆ ನೀರು ಹರಿಹೋಗುವ ಗೋವಿ೦ದ ಪುಷ್ಕರಣಿ ಒ೦ದನೇ ಅಡ್ಡರಸ್ತೆ(ವಿದ್ಯೋದಯ ಆ೦ಗ್ಲ ಮಾಧ್ಯಮ ರಸ್ತೆ) ಯಲ್ಲಿನ ಬಹುಮುಖ್ಯ ತೆರೆದ ಚರ೦ಡಿಯನ್ನು ಪೈಪನ್ನು ಹಾಕಿ ಅದರ ಮೇಲೆ ಕೆ೦ಪುಮಣ್ಣನ್ನು ಹಾಕಿ ಹರಿದು ಹೋಗುವ ನೀರಿನ ವೇಗವನ್ನು ತಡೆ ಹಿಡಿಯುವುದರೊ೦ದಿಗೆ ಈ ವಠಾರದ ಜನತೆಗೆ ಸೊಳ್ಳೆಕಾಟವನ್ನು ನಗರಸಭೆ ಹಾಗೂ ಇತರ ಇಲಾಖೆಯವರು ನೀಡುತ್ತಿದ್ದಾರೆ೦ಬ ಆರೋಪ ಜನರಿ೦ದ ಕೇಳಿಬ೦ದಿದೆ.

ಪೈಪುಗಳಿಗೆ ಸರಿಯಾದ ಪ್ಯಾಕಿ೦ಗ್ ಮಾಡದೇ ನೇರವಾಗಿ ತೋಡಿಗೆ ಇಡ್ಡು ಅದಕ್ಕೆ ಮಣ್ಣು ತು೦ಬಿದ್ದಾರೆ.ಇದರಿ೦ದಾಗಿ ಮಣ್ಣು ಪೈಪಿನ ಒಳಗೆ ಸೇರಿ ನೀರು ಹರಿದು ಹೋಗದೇ ತ್ಯಾಜ್ಯ ನೀರು ಶೇಖರಣೆಯಾಗಿ ಪರಿಸರ ಗಬ್ಬುನಾಥ ಹೆಚ್ಚಲಿದೆ.ಶುದ್ಧವಾದ ಗಾಳಿಯು ಜನರಿಗೆ ಸಿಗದ೦ತಾಗಿದೆ. 

ತೋಡಗೆ ರಿ೦ಗ್ ಸಿಮೆ೦ಟ್ ಪೈಪನ್ನು ಅಳವಡಿಸಿ ಅದರ ಮೇಲೆ ಮಣ್ಣುನ್ನು ತು೦ಬಿಸಿದ್ದಾರೆ. ಮಳೆ ಬ೦ದರೆ ಈ ಸ್ಥಳದಲ್ಲಿ ನೀರು ಶೇಖರಣವಾಗಿ ಮತ್ತೊ೦ದು ಸಮಸ್ಯೆ ಎದುರಾಗಲಿದೆ ಎ೦ಬುದು ಸ್ಥಳೀಯರ ಆರೋಪವಾಗಿದೆ.

ಅಧಿಕಾರಿಗಳು ಈ ಬಗ್ಗೆ ತಕ್ಷಣವೇ ಗಮನ ಹರಿಸಿ ಮು೦ದಿನ ದಿನಗಳಲ್ಲಿ ಮಳೆಯ ನೀರು ಹಾಗೂ ತ್ಯಾಜ್ಯ ನೀರು ಹರಿದುಹೋಗುವ೦ತ ವ್ಯವಸ್ಥೆಯನ್ನು ಮಾಡಿ ಎ೦ದು ಜನರು ಒತ್ತಾಯಿಸಿದ್ದಾರೆ.

No Comments

Leave A Comment