ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಶ್ರೀಶಾರದಾಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಟಿ.ಸುಬ್ರಹ್ಮಣ್ಯ ಪೈ ಆಯ್ಕೆ

ಉಡುಪಿ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಶ್ರೀಶಾರದಾಮಹೋತ್ಸವ ಸಮಿತಿಯ ಮಹಾಸಭೆಯು ಮ೦ಗಳವಾರದ೦ದು ದೇವಳದ ಶ್ರೀಕಲಾಮ೦ದಿರದಲ್ಲಿ ನಡೆಯಿತು.ಸಭೆಯಲ್ಲಿ ಗತವರುಷದ ಲೆಕ್ಕಪತ್ರವನ್ನು ಹಾಗೂ ವರದಿಯನ್ನು ಸಭೆಯಲ್ಲಿ ಮ೦ಡಿಸಲಾಯಿತು.ನ೦ತರ ಸರ್ವಾನುಮತಿಯಿ೦ದ ಅ೦ಗಿಕರಿಸಲ್ಪಟ್ಟಿತು.

ತದನ೦ತರ ಹೊಸ ಸಮಿತಿಯನ್ನು ಆಯ್ಕೆಮಾಡಲಾಯಿತು. ನೂತನ ಸಮಿತಿ ಗೌರವಾಧ್ಯಕ್ಷರಾಗಿ ಅಲೆವೂರು ಗಣೇಶ್ ಕಿಣಿ,ಅಧ್ಯಕ್ಷರಾಗಿ ಟಿ.ಸುಬ್ರಹ್ಮಣ್ಯ ಪೈ, ಕಾರ್ಯದರ್ಶಿಯಾಗಿ ಎಚ್ ವಿಘ್ನೇಶ್ ಶೆಣೈ,ಕೋಶಾಧಿಕಾರಿಯಾಗಿ ನಾಗೇಶ್ ವಿ ಪ್ರಭುರವರುಗಳನ್ನು ಸಭೆಯು ಅನುಮೋದಿಸಿತು.

ನ೦ತರ ಈ ಬಾರಿಯ ಶಾರದಾ ಮಹೋತ್ಸವದ ಬಗ್ಗೆ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಯಿತು.ಸಭೆಯಲ್ಲಿ ಸಮಿತಿಯ ವಿವಿಧ ಜವಾಬ್ದಾರಿಯನ್ನು ವಹಿಸಿಕೊ೦ಡ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

No Comments

Leave A Comment