ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಅದ್ದೂರಿಯ ಶ್ರೀವರಮಹಾಲಕ್ಷೀವೃತದ ಆಚರಣೆ
ಉಡುಪಿ:ಉಡುಪಿ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಆಗಸ್ಟ್ 8ರ ಶುಕ್ರವಾರ೦ದು ಜಿ ಎಸ್ ಬಿ ಮಹಿಳಾ ಮಂಡಳಿಯವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯನ್ನು ಶ್ರೀ ಭುವನೇಂದ್ರ ಮಂಟಪದಲ್ಲಿ ನೆಡೆಸಲಾಯಿತು.ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕರಾದ ದಯಘಾನ್ ಭಟ್ ನೆರವೇರಿಸಿದರು.ಸಾಮೂಹಿಕ ಪ್ರಾರ್ಥನೆ , ಕಳಶ ಪ್ರತಿಷ್ಠೆ , ಸಮೂಹಿಕ ಕುಂಕುಮ ಅರ್ಚನೆ , ಲಲಿತಾ ಸಹಸ್ರನಾಮ ಪಠಣ , ಭಜನಾ ಕಾರ್ಯಕ್ರಮ ,ಮಹಾಪೂಜೆ ಪ್ರಸಾದ ವಿತರಣೆ ನೆಡೆಯಿತು
ಆಡಳಿತ ಮಂಡಳಿಯ ಸದಸ್ಯರು , ಮಹಿಳಾ ಮಂಡಳಿಯ ಪಧಾದಿಕಾರಿಗಳು ಸೇರಿದಾ೦ತೆ 500ಕ್ಕೂ ಹೆಚ್ಚಿನ ಮಹಿಳೆಯರು ಉಪಸ್ಥತರಿದ್ದರು
ಚಿತ್ರ ಸಹಕಾರ:ಶಿವಾನ೦ದ ನಾಯಕ್ “:ಐಡಿಯಲ್ ಸ್ಟೋಡಿಯೋ” ತೆ೦ಕಪೇಟೆ ಉಡುಪಿ.