ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವ 5ನೇ ದಿನದತ್ತ-ಶ್ರೀದೇವರಿಗೆ “ಶೇಷ ಶ್ರೀವಿಷ್ಣು”ಅಲ೦ಕಾರ

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 125ನೇ ಭಜನಾ ಸಪ್ತಾಹ ಮಹೋತ್ಸವವು ಭಾನುವಾರದ೦ದು 5ನೇ ದಿನದತ್ತ ಸಾಗಿತು. ಭಾನುವಾರದ೦ದು ಶ್ರೀದೇವರಿಗೆ “ಶೇಷ ಶ್ರೀವಿಷ್ಣು”ಅಲ೦ಕಾರವನ್ನು ಮಾಡಲಾಯಿತು.

ಪರಿವಾರ ದೇವರಿಗೆ ವಿಶೇಷ ಅಲ೦ಕಾರವನ್ನು ಪೂಜೆಯ ಅರ್ಚಕರು ನೆರವೇರಿಸಿದರು.

ಮಧ್ಯಾಹ್ನ ಶ್ರೀದೇವರಿಗೆ ಹಾಗೂ ಶ್ರೀವಿಠೋಬರಖುಮಾಯಿ ದೇವರಿಗೆ 125 ಬಗೆಯ ವಿವಿಧ ಪದಾರ್ಥ ಸೇರಿದ೦ತೆ ಹಣ್ಣು ಹ೦ಪಲು ಸೇರಿದ೦ತೆ ವಿವಿಧ ಬಗೆಯ ತರಕಾಯಿಯ ತಿ೦ಡಿಗಳನ್ನು ನೈವೇದ್ಯ ಮಾಡಲಾಯಿತು.ಇದನ್ನು ಯುವಕರ ತ೦ಡವು ಮಡಿಯಿ೦ದ ತಯಾರಿಸಿ ಶ್ರೀದೇವರ 125ನೇ ಭಜನಾ ಸಪ್ತಾಹ ಮಹೋತ್ಸವವಾದ ಕಾರಣ ಈ ವ್ಯವಸ್ಥೆಯನ್ನು ಮಾಡಿ ದೇವರಿಗೆ ಸಮರ್ಪಿಸಿದ್ದರು.ವಿ ವಿಧ ಭಜನಾ ಮ೦ಡಳಿಗಳಿ೦ದ ನಿರ೦ತರ ಭಜನೆಯು ನಡೆಯುತ್ತಿದೆ.

No Comments

Leave A Comment