ಜು:30ರಿ೦ದ ಅಗಸ್ಟ್ 6ರವರೆಗೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ನೇ ಭಜನಾ ಸಪ್ತಾಹ ಮಹೋತ್ಸವ
ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ವಿಶ್ವಾವಸು ನಾಮ ಸ೦ವತ್ಸರದ ಶ್ರಾವಣ ಶುದ್ಧ 6ಯು ದಿನಾ೦ಕ 30/07/2025ನೇ ಬುಧವಾರದಿ೦ದ ಮೊದಲ್ಗೊ೦ಡು ಶ್ರಾವಣ ಶುದ್ಧ 12ಯು 06/08/2025ನೇ ಬುಧವಾರದ ಪರ್ಯ೦ತ 125ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಈ ಬಾರಿ ಅತೀ ವಿಜೃ೦ಭಣೆಯಿ೦ದ ಜರಗಲಿದೆ.
ಜುಲಾಯಿ 30ರ ಬುಧವಾರ ಮಧ್ಯಾಹ್ನ12.05ಕ್ಕೆ ಶ್ರೀದೇವರಿಗೆ ಪ್ರಾರ್ಥನೆಯೊ೦ದಿಗೆ ದೀಪಸ್ಥಾಪನಾ ಕಾರ್ಯಕ್ರಮವು ಜರಗಲಿದೆ.
ಅರ್ಚಕರಾದ ವಿನಾಯಕ ಭಟ್ ರವರು ದೀಪ ಪ್ರಜ್ವಲಿಸುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ.
ಕಾರ್ಯಕ್ರಮದ ವಿವರಗಳು:-
ಪ್ರತಿನಿತ್ಯವು ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ 1.00ಗ೦ಟೆಗೆ , ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ, ಸೇವಾದಾರರಿಗೆ ಪ್ರಸಾದ ವಿತರಣೆ. ಪ್ರತಿದಿನ ರಾತ್ರೆ 8.05ಕ್ಕೆ ರಾತ್ರೆ ಪೂಜೆಯು ಜರಗಲಿದೆ.
05/08/2025ರ ಮ೦ಗಳವಾರದ೦ದು ಏಕಾದಶಿಯ ದಿನವಾಗಿರುವುದರಿ೦ದ ರಾತ್ರೆ 9.00ಗ೦ಟೆಗೆ ರಾತ್ರೆ ಪೂಜೆ ಜರಗಲಿದೆ.
31/07/2025ನೇ ಗುರುವಾರದಿ೦ದ ೦5/08/2025ನೇ ಮ೦ಗಳವಾರದ ತನಕ ಪ್ರತಿನಿತ್ಯವೂ ಪ್ರಾತ:ಕಾಲ 5.30ಕ್ಕೆ ಕಾಕಡಾರತಿ ಜರಗಲಿದೆ. 06/08/2025ರ ಬುಧವಾರದ೦ದು ಪ್ರಾತ:ಕಾಲ 5.00ಗ೦ಟೆಗೆ ಕಾಕಡಾರತಿ ಜರಗಲಿದೆ.
ದಿನಾ೦ಕ 04/08/2025ನೇ ಸೋಮವಾರದ೦ದು ಸಾಯ೦ಕಾಲ ರ೦ಗಪೂಜೆಯು ನಡೆಯಲಿದೆ.ಸ೦ಜೆ 6.05ಕ್ಕೆ ರ೦ಗಪೂಜೆಗೆ ವಿಶೇಷ ಪ್ರಾರ್ಥನೆಯು ಯೊ೦ದಿಗೆ ರಾತ್ರೆ 9.00ಗ೦ಟೆಗೆ ರ೦ಗಪೂಜೆಯು ನಡೆಯಲಿದೆ.
31/07/2025ನೇ ಗುರುವಾರದಿ೦ದ ೦5/08/2025ನೇ ಮ೦ಗಳವಾರದ ತನಕ ಪ್ರತಿನಿತ್ಯವೂ ಪ್ರಾತ:ಕಾಲ 5.30ಕ್ಕೆ ಕಾಕಡಾರತಿ ಜರಗಲಿದೆ. 06/08/2025ರ ಬುಧವಾರದ೦ದು ಪ್ರಾತ:ಕಾಲ 5.00ಗ೦ಟೆಗೆ ಕಾಕಡಾರತಿ ಜರಗಲಿದೆ. 
ನಗರ ಭಜನೆ:- ೦5/08/2025ನೇ ಮ೦ಗಳವಾರ ಸಾಯ೦ಕಾಲ ಘ೦ಟೆ 5.00ಕ್ಕೆ ಶ್ರೀದೇವಳದಿ೦ದ ಹೊರಟು ಐಡಿಯಲ್ ಸರ್ಕಲ್ , ಡಯಾನ ಸರ್ಕಲ್, ಕೋರ್ಟು ರಸ್ತೆ ,ಅಜ್ಜರಕಾಡು, ಕವಿಮುದ್ದಣ್ಣ ಮಾರ್ಗವಾಗಿ ,ಸ೦ತೆಕಟ್ಟೆ,ಶಿರಿಬೀಡು, ಕಲ್ಸ೦ಕ, ಬಡಗುಪೇಟೆ, ರಥಬೀದಿ, ತೆ೦ಕಪೇಟೆಯಾಗಿ ಶ್ರೀದೇವಸ್ಥಾನದ ಹಿ೦ಬದಿಯ ರಸ್ತೆಯಾಗಿ ಕಡೆಕೊಪ್ಪಲದವರೆಗೆ ಹೋಗಿ ಶ್ರೀದೇವಳಕ್ಕೆ ಹಿ೦ತಿರುಗುವುದು.ಆ ಬಳಿಕ ನಜರ ಕಾಣಿಕೆ ಪ್ರಸಾದ ವಿತರಣೆಯು ಜರಗಲಿದೆ.
೦6/08/2025ನೇ ಬುಧವಾರದ೦ದು ಮ೦ಗಲೋತ್ಸವ ಜರಗಲಿದ್ದು ಬೆಳಿಗ್ಗೆ 11.00ಗ೦ಟೆಗೆ ನಗರ ಭಜನೆಯು ಹೊರಡುವುದು. ಮಧ್ಯಾಹ್ನ 11.30ಕ್ಕೆ ಶ್ರೀದೇವರಿಗೆ ಮಹಾಪೂಜೆ ನ೦ತರ ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ ಪೂಜೆ . ಉರುಳು ಸೇವೆ (ಮಡಸ್ತಾನ)ಮೊಸರುಕುಡಿಕೆ, ತಪ್ಪ೦ಗಾಯಿ, ಮ೦ಗಲೋತ್ಸವದ ಕಾರ್ಯಕ್ರಮ, ಸಾಯ೦ಕಾಲ 5.30ರಿ೦ದ 8.00ರ ತನಕ ಮಹಾ ಸಮಾರಾಧನೆ ಬಳಿಕ ಮರು ಭಜನೆ ಹಾಗೂ ರಾತ್ರೆ 9.00ಗ೦ಟೆಗೆ ರಾತ್ರೆ ಪೂಜೆ ಜರಗಲಿದೆ ಎ೦ದು ದೇವಸ್ಥಾನ ಆಡಳಿತ ಮ೦ಡಳಿ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯ ಪ್ರಕಟಣೆ ತಿಳಿಸಿದೆ.





























