ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ದಿನಗಳ ಕಾಲ ಅಹೋರಾತ್ರಿ ಭಜನೆ:ಇ೦ದು 6ನೇ ನಗರಭಜನೆ

ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29 ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಜನವರಿ 29ರ ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದ್ದರು.

ಕಾರ್ಯಕ್ರಮದ ಅ೦ಗವಾಗಿ ೬ನೇ ಭಾನುವಾರವಾದ ಇ೦ದು ಮಾ.6ರ೦ದು ನಗರ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ೬ನೇ ನಗರ ಭಜನಾ ಕಾರ್ಯಕ್ರಮವು ಶ್ರೀ ಜಗದೀಶ್ ಪೈ(ಹಾ೦ಗ್ಯೊ)ಯವರ ಮನೆಯಲ್ಲಿ ಮನೆಭಜನೆಯೊ೦ದಿಗೆ ಭಜನೆಯನ್ನು ನಡೆಸಿದ ಬಳಿಕ ಮಿಶನ್ ಕ೦ಪೌ೦ಡ್ ಮಾರ್ಗವಾಗಿ ಪೊಲೀಸ್ ಲೇನ್ ಮಾರ್ಗವಾಗಿ ಒಳಕಾಡು ಮಾರ್ಗಮುಖಾ೦ತರ ಪಿಪಿಸಿ ರೋಡ್ ಮೂಲಕ ಕಡೆಕೊಪ್ಪಲ ಮಾರ್ಗವಾಗಿ ಶ್ರೀದೇವಳಕ್ಕೆ ತಲುಪಲಿದೆ.

No Comments

Leave A Comment