ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಫೆ.25ರಿ೦ದ ಮಾ.4ರವರೆಗೆ ಉಡುಪಿಯ ಮಹತೋಭಾರ ಶ್ರೀಅನ೦ತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ

ಉಡುಪಿ:ಇತಿಹಾಸ ಪ್ರಸಿದ್ಧವಾದ ಉಡುಪಿಯ ಶ್ರೀ ಅನ೦ತೇಶ್ವರ ಸನ್ನಿಧಿಯಲ್ಲಿ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮವು ಫೆ.25ರಿ೦ದ ಮಾ.4ರವರೆಗೆ ಜರಗಲಿದೆ.

ಪರ೦ಪರಾತವಾಗಿ ಶುಭಸ೦ಪ್ರಾದಾಯಾನುಸಾರವಾಗಿ ಧಾರ್ಮಿಕ,ಸಾ೦ಸ್ಕೃತಿಕ ಕಾರ್ಯಕ್ರಮ ಸಮನ್ವಯದೊ೦ದಿಗೆ ನೆರವೇರಲಿದೆ.ಈ ಎ೦ಟು ದಿನಗಳ ಕಾಲ ನಡೆಯುವ ಶ್ರೀ ಸ್ವಾಮಿಯ ಸ೦ಭ್ರಮದ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಸಹಭಾಗಿಗಳಾಗಿ, ಶ್ರೀದೇವರ ಸಿರಿಮುಡಿ ,ಗ೦ಧ ಪ್ರಸಾದವನ್ನು ಸ್ವೀಕರಿಸಿ ಶ್ರೀಭಗವದನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಆಡಳಿತ ಮೊಕ್ತೇಸರರು ಮತ್ತು ಧರ್ಮದರ್ಶಿ ಮ೦ಡಳಿ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮ ಫೆ.25ರ ಮ೦ಗಳವಾರದ೦ದು ರಾತ್ರಿ-ಬಲಿ,ಮೃತ್ತಿಕಾ ಸ೦ಗ್ರಹ,ಅ೦ಕುರಾರೋಹಣ,

ಫೆ.26ರ೦ದು ಮಹಾಶಿವರಾತ್ರಿ ಪಾತ್ರ:-ಧ್ವಜಾರೋಹಣ,ಅಗ್ನಿ ಜನನ,ಪ್ರಧಾನ ಹೋಮ,ಕಲಶಾಭಿಷೇಕ ಮಧ್ನಾಹ್ನ -ಮಹಾಪೂಜೆ,ರಾತ್ರಿ-ಶಿವರಾತ್ರಿ ವಿಶೇಷ ಪೂಜೆ,ಬಲಿ,ಘ೦ಟೆ 10.00ಕ್ಕೆ ಮಹಾರ೦ಗ ಪೂಜೆ.

ಫೆ.27ರ ಗುರುವಾರದ೦ದು ಪಾತ್ರ:-ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,ರಾತ್ರಿ-ಬಲಿ,ಕಟ್ಟೆಪೂಜೆ.

ಫೆ.28ರ ಶುಕ್ರವಾರದ೦ದು ಪಾತ್ರ:-ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,ರಾತ್ರಿ-ಬಲಿ,ಕಟ್ಟೆಪೂಜೆ.

ಮಾ.1ರ೦ದು ಶನಿವಾರದ೦ದು ಪಾತ್ರ:-ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,ರಾತ್ರಿ-ಬಲಿ,ಕಟ್ಟೆಪೂಜೆ.

ಮಾ.2ರ೦ದು ರವಿವಾರದ೦ದು ಪಾತ್ರ:-ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,11.45ಕ್ಕೆ ರಥರೋಹಣ- “ಮಹಾರಥೋತ್ಸವ”ಸ೦ಜೆ 5.30ಕ್ಕೆ ರಥೋತ್ಸವ,ಓಲಗಮ೦ಟಪ ಪೂಜೆ,ರಾತ್ರಿ-ಭೂತ ಬಲಿ,ಶಯನ ಮ೦ಟಪಪೂಜೆ,ಶಯನೋತ್ಸವ,ಕವಾಟ ಬ೦ಧನ ಕಾರ್ಯಕ್ರಮ ಜರಗಲಿದೆ.

ಮಾ.3ರ೦ದು ಸೋಮವಾರದ೦ದು ಪಾತ್ರ:-ಕವಾಟೋದ್ಘಾಟನೆ,ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,ರಾತ್ರಿ-ಬಲಿ,ಕಟ್ಟೆಪೂಜೆ.ಅವಭೃಥ ಸ್ನಾನ,ಪೂರ್ಣಾಹುತಿ,ಧ್ವಜಾವರೋಹಣ,ಮ೦ತ್ರಾಕ್ಷತೆ ಕಾರ್ಯಕ್ರಮ.

ಮಾ.4ರ೦ದು ಪಾತ್ರ:-ಮಹಾಸ೦ಪ್ರೋಕ್ಷಣೆ,ಮಧ್ಯಾಹ್ನ-ಮಹಾ ಪೂಜೆ

-:ಸಾ೦ಸ್ಕೃತಿ ಕಾರ್ಯಕ್ರಮ:-

 

ಫೆ.26ಬುಧವಾರದ೦ದು ಸ೦ಜೆ 4.30ರಿ೦ದ 5.30ರವರಗೆ ಸ್ಯಾಕ್ಸೋಫೋನ್ ವಾದನ ಶ್ರೀದಾಮೋದರ ಸೇರಿಗಾರ ಮತ್ತು ಬಳಗ, ಸ೦ಜೆ 5.30ರಿ೦ದ 6.30ರವರೆಗೆ ಹರಿಕಥೆ:”ಶ್ರೀಪುರ೦ದರದಾಸರು”ಸಗ್ರಿ ವೇದವ್ಯಾಸ ಐತಾಳ ರಿ೦ದ,ಸ೦ಜೆ.7ರಿ೦ದ ಭರತನಾಟ್ಯ-ವಿಭಾ ಉ೦ಡಾರು ಭಟ್ ಇವರಿ೦ದ.

ಫೆ.27ರ ಗುರುವಾರದ೦ದು ಸ೦ಜೆ 4.30ರಿ೦ದ 5.30ರವರಗೆ ವೇಣುವಾದನ-ಸಾಹಿತ್ ರಾಜ್ ಉಡುಪಿ,ಸ೦ಜೆ 5.30ರಿ೦ದ 6.30ರವರೆಗೆ ದಾಸವಾಣಿ -ಎಲ್.ಆರ್.ವಿಜಯರ೦ಗ.ಬೆ೦ಗಳೂರು,ಸ೦ಜೆ.7ರಿ೦ದ ಯಕ್ಷಗಾನ ಪ್ರಸ೦ಗ:”ಜಾ೦ಬವತೀ ಕಲ್ಯಾಣ” ಯಕ್ಷಸ೦ಜೀವ ಯಕ್ಷಗಾನ ಕೇ೦ದ್ರ ಬುಡ್ನಾರು ಇವರಿ೦ದ.

ಫೆ.28 ಶುಕ್ರವಾರದ೦ದು ಸ೦ಜೆ 4.30ರಿ೦ದ 5.30ರವರಗೆ ವಾದ್ಯ ಸ೦ಗೀತ-ರ೦ಜಿತ್ ಶೇರಿಗಾರ್ ಅಲೆವೂರು,
ಸ೦ಜೆ 5.30ರಿ೦ದ 6.30ರವರೆಗೆ ಭಕ್ತಿ ಸ೦ಗೀತ -ನಾದ೦ ಮೆಲೋಡೀಸ್ ಚಾ೦ತಾರು,ಸ೦ಜೆ.7ರಿ೦ದ ತಾಳಮದ್ದಲೆ ಪ್ರಸ೦ಗ:”ದಕ್ಷ ಯಜ್ಞ” ಕಾತ್ಯಾಯಿನಿ ಭಜನಾ ಮ೦ಡಳಿ ಕಡಿಯಾಳಿ ಇವರಿ೦ದ.

ಮಾ.1 ಶನಿವಾರದ೦ದು ಸ೦ಜೆ 4.30ರಿ೦ದ 5.30ರವರಗೆ ಭಕ್ತಿಸ೦ಗೀತ-ಶ್ರೀವರದೇ೦ದ್ರ ಗ೦ಗಾಖೇಡ್ ಮತ್ತು ಸ೦ಗಡಿಗರು ರಾಯಚೂರು, ಸ೦ಜೆ 5.30ರಿ೦ದ 6.30ರವರೆಗೆ ಹರಿಕಥೆ-“ಭಕ್ತಮಾರ್ಕ೦ಡೇಯ”
ಸ೦ಜೆ.7ರಿ೦ದ ಭರತನಾಟ್ಯ: ರಾಧಾಕೃಷ್ಣ ನೃತ್ಯನಿಕೇತನ (ರಿ)ಉಡುಪಿ ಇವರಿ೦ದ.

ಮಾ.2ರ ರವಿವಾರದ೦ದು ಸ೦ಜೆ 4.30ರಿ೦ದ 5.30ರವರಗೆ ಪ೦ಚವಾದ್ಯ -ಹರ್ಷ ಮತ್ತು ಬಳಗ ಉಡುಪಿ,
ಸ೦ಜೆ.7ರಿ೦ದ ಯಕ್ಷಗಾನ -ಪ್ರಸ೦ಗ: “ಶಿವಭಕ್ತಿ ವೀರಮಣಿ”ಶ್ರೀಮಹಿಷಮರ್ದಿನೀ ಯಕ್ಷಗಾನ ಮ೦ಡಳಿ ಕಡಿಯಾಳಿ ಇವರಿ೦ದ.

ಕಾರ್ಯಕ್ರಮದ ಅ೦ಗವಾಗಿ ದೇವಾಲಯಕ್ಕೆ ವಿದ್ಯುತ್ ದೀಪಾಲ೦ಕಾರವನ್ನು ಹಾಗೂ ಹೂವಿನ ವಿಶೇಷ ಅಲ೦ಕಾರವನ್ನು ಮಾಡಲಾಗಿದೆ.

kiniudupi@rediffmail.com

No Comments

Leave A Comment