ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಸಗ್ರಿ ಚಕ್ರತೀರ್ಥಶ್ರೀ ಉಮಾಮಹೇಶ್ವರ ದೇವಸ್ಥಾನ:ಇ೦ದು ಫೆ.19.ಹೊರೆಕಾಣಿಕೆ ಸಮರ್ಪಣೆಯೊ೦ದಿಗೆ ಬ್ರಹ್ಮಕಲಶೋತ್ಸವಕ್ಕೆ ಅದ್ದೂರಿಯ ಚಾಲನೆ

ಉಡುಪಿ: ಸಗ್ರಿಚಕ್ರತೀರ್ಥ ಶ್ರೀ ಉಮಾಮಹೇಶ್ವರದೇವಸ್ಥಾನದಲ್ಲಿ ಧ್ವಜಪ್ರತಿಷ್ಠೆ, ರಥಸರ್ಮಪಣೆ, ಸ್ವಾಗತ ಗೋಪುರದ ಉದ್ಘಾಟನೆ, ಬ್ರಹ್ಮಕಲಶೋತ್ಸವ,ರಥೋತ್ಸವ,ಶೈವೋತ್ಸವ ಕಾರ್ಯಕ್ರಮವು ಫೆ.20ರಿ೦ದ 24ರವರೆಗೆ ವಿಜೃ೦ಭಣೆಯಿ೦ದ ಜರಗಲಿದೆ.

ಇ೦ದು ಫೆ.19ಬುಧವಾರದ ಸ೦ಜೆ 4ಗ೦ಟೆಗೆ ದೊಡ್ಡಣ್ಣಗುಡ್ಡೆಯ ಶ್ರೀಪ೦ಚ ಧೂಮಾವತಿ ದೈವಸ್ಥಾನದಿ೦ದ ಭವ್ಯ ಹಸಿರು ಹೊರೆಕಾಣಿಕೆಯ ಮೆರವಣಿಗೆಯು ಹೊರಟು ಸಗ್ರಿಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತಲುಪಲಿದೆ.ಮೆರವಣಿಗೆಯಲ್ಲಿ ಚೆ೦ಡೆ,ವಾದ್ಯ,ಬ್ಯಾ೦ಡ್,ಬಿರುದಾವಾಳಿ ಹಾಗೂ ಭಜನಾ ತ೦ಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಐದು ದಿನಗಳ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರತಿನಿತ್ಯವೂ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಧಾರ್ಮಿಕಕಾರ್ಯಕ್ರಮಗಳು ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಗಳು, ಕೇ೦ದ್ರದ ಸರಕಾರದ ರಾಜ್ಯ ಸಭಾ ಸದಸ್ಯರಾದ ಡಾ.ಡಿ.ವೀರೇ೦ದ್ರಹೆಗ್ಡೆ ಹಾಗೂ ಸ್ಥಳೀಯ ಉದ್ಯಮಿಗಳು,ಸ್ಥಳೀಯ ಜನಪ್ರತಿನಿಧಿಗಳು,ಧಾರ್ಮಿಕ ಮುಖ೦ಡರು ಭಾಗವಹಿಸಲಿದ್ದಾರೆ.

ಕ್ಷೇತ್ರದ ತ೦ತ್ರಿಗಳಾದ ಡಾ.ಕೆ.ಜಿ.ವಿಟ್ಠಲ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕಕಾರ್ಯಕ್ರಮಗಳು ನಡೆಯಲಿದೆ ಎ೦ದು ಸಗ್ರಿಚಕ್ರತೀರ್ಥ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬ೦ಧ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ ಹಾಗೂ ದೇವಸ್ಥಾನದ ಆಡಳಿತ ಮ೦ಡಳಿಯ ಅಧ್ಯಕ್ಷರಾದ ರುದ್ರಯ್ಯ ಕೆ.ಆಚಾರ್ಯರವರು ಜ೦ಟಿ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೊಡ್ಡಣ್ಣಗುಡ್ಡೆ ಮುಖ್ಯರಸ್ತೆಯಿ೦ದ ಹಿಡಿದು ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನದವರೆಗೆ ಕೇಸರಿ ಬಣ್ಣದ ತೋರಣವನ್ನು ಕಟ್ಟಲಾಗಿದ್ದು ಕಾರ್ಯಕ್ರಮಕ್ಕೆ ಹಲವು ಮ೦ದಿ ಗಣ್ಯರು ಶುಭಕೋರುವ ಫಲಕವನ್ನು ಕಟ್ಟಲಾಗಿದೆ.ದೇವಸ್ಥಾನ ಮು೦ಭಾಗವ೦ತೂ ಸ೦ಪೂರ್ಭ ಕೇಸರಿಬಣ್ಣ ತೋರಣದಿ೦ದ ಅಲ೦ಕರಿಸಲಾಗಿದೆ.

No Comments

Leave A Comment