ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿರುವುದಕ್ಕೆ ಸಾಕ್ಷಿ-ದಿನಕರ್ ಹೇರೂರು-ಅಮೃತ್ ಶಣೈ

ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಉಡುಪಿ ಬ್ಲಾಕ್ ಕಾಂಗ್ರೆಸ್ ಇದರ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮೃತ್ ಶಣೈ ಇವರು ಕಾಂಗ್ರೆಸ್ ಪಕ್ಷವು ಯಾವತ್ತು ಕಾರ್ಯಕರ್ತರನ್ನು ಮರೆಯದೆ ಕಾರ್ಯಕರ್ತರ ಬೆಂಗಾವಲಾಗಿ ಇದೆ ಎಂಬುದಕ್ಕೆ ಸಾಕ್ಷಿ ದಿನಕರ್ ಹೇರೂರು ಇವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಇವರನ್ನು ಕಾಂಗ್ರೆಸ್ ಪಕ್ಷದ ರಾಜ್ಯಮಟ್ಟದ ನಾಯಕರು ಗುರುತಿಸಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಿರುವುದು ಶ್ಲಾಘನೀಯ ಎಂದು ಸಭೆಯನ್ನು ಉದ್ದೇಶಿಸಿ ತಿಳಿಸಿದರು.

ಸುರೇಶ್ ಶೆಟ್ಟಿ ಬನ್ನಂಜೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪಂಚಾಯತ್ ರಾಜ್ ಸಂಘಟನೆಯ ಎಲ್ಲಾ ಪದಾಧಿಕಾರಿಗಳನ್ನು ಒಳಗೊಂಡು ನಗರಾಭಿಪ್ರಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ದಿನಕರ್ ಹೇರೂರವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ದಿನಕರ್ ಹೆರೂರ್ ಇವರು ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಡುಪಿಯ ಜನತೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕಾರ್ಯನಿರ್ವಹಿಸಿ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವುದಾಗಿ ತಿಳಿಸಿ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತ ರಿಗೆ ಪ್ರಪ್ರಥಮವಾಗಿ ಸ್ಪಂದಿಸಿ ಫಲಪ್ರೇಕ್ಷೆ ಇಲ್ಲದೆ ತಾನು ದುಡಿಯುತ್ತೇನೆ ಎಂಬ ವಾಗ್ದಾನವನ್ನು ತಿಳಿಸಿದರು.
ಈ ಸಭೆಯಲ್ಲಿ ಪಂಚಾಯತ್ ಸಂಘಟನೆ ಪದಾಧಿಕಾರಿಗಳಾದ ಶ್ರೀಮತಿ ರಮಾ ಕುಕ್ಕಿ ಕಟ್ಟೆ. ಸದಾನಂದ ಕಿನ್ನಿಮುಲ್ಕಿ . ಉದಯ ಪೂಜಾರಿ ಪಂದು ಬೆಟ್ಟು. ಯೋಗೀಶ್ ಮೂಡಬೆಟ್ಟು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮಹೇಶ್ ಮೂಡಬೆಟ್ಟು,ಅನ್ವರ್ ಕುಕ್ಕಿಕಟ್ಟೆ. ಸಾಯಿ ರಾಜ್ ಕೋಟ್ಯಾನ್. ಸುಕನ್ಯಾ ಪೂಜಾರಿ. ಕಮಲ್ ಮಲ್ಪೆ. ಸುರೇಂದ್ರ ಆಚಾರ್ಯ ಕಾಡುಬೆಟ್ಟು. ಸುರೇಂದ್ರ ನಿಟ್ಟೂರು. ಉದಯ ಆಚಾರ್ಯ. ಸೂರ್ಯ ಬ್ರಹ್ಮಾವರ ಹಾಗೂ ಸಮಿತಿಯ ಸದಸ್ಯರು ಹಾಜರಿದ್ದರು.

ಈ ಸಭೆಯ ಪ್ರಾರಂಭದಲ್ಲಿ ಶೇಖರ್ ಶೆಟ್ಟಿ ಸ್ವಾಗತಿಸಿ, ಅನಿಲ್ ಕುಮಾರ್ ಹೆರ್ಗ ಇವರು ಧನ್ಯವಾದವನ್ನು ನೀಡಿದರು. ಸುರೇಶ್ ತೆಂಕನಿಡಿಯೂರು ಈ ಸಭೆಯ ಕಾರ್ಯಕ್ರಮ ನಿರ್ವಹಿಸಿದರು.

No Comments

Leave A Comment