ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ 2024-25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಉಮೇಶ್ ಎ.ನಾಯ್ಕ್ ಚೇರ್ಕಾಡಿ ಪುನರಾಯ್ಕೆ

ಉಡುಪಿ:ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ (ರಿ) ಕುಂಜಿಬೆಟ್ಟು,ಉಡುಪಿ ಇದರ 2024-25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಶ್ರೀ ಉಮೇಶ್ ಎ.ನಾಯ್ಕ್ ಚೇರ್ಕಾಡಿ ಪುನರಾಯ್ಕೆ ಗೊಂಡಿರುತ್ತಾರೆ.

ಉಪಾಧ್ಯಕ್ಷರುಗಳಾಗಿ ಡಾ.ಅನಂದ ನಾಯ್ಕ್ ಹಳುವಳ್ಳಿ, ಶ್ರೀಮತಿ ಜಾನಕಿ ಕೃಷ್ಣ ನಾಯ್ಕ ಸಗ್ರಿ , ಪ್ರಧಾನ ಕಾರ್ಯದರ್ಶಿಯಾಗಿ : ಶ್ರೀ ಭುಜಂಗ ನಾಯ್ಕ್ ಮಣಿಪಾಲ, ಜೊತೆ ಕಾರ್ಯದರ್ಶಿಗಳಾಗಿ : ಶ್ರೀ ರಮೇಶ್ ನಾಯ್ಕ್ ಮನೋಳಿಗುಜ್ಜಿ ಮತ್ತು ಶ್ರೀಮತಿ ವಿದ್ಯಾವತಿ ಎಸ್ ನಾಯ್ಕ್, ಕೋಶಾಧಿಕಾರಿಯಾಗಿ ಶ್ರೀ ದೇವೇಂದ್ರ ನಾಯ್ಕ್ ಮಣಿಪಾಲ,ಸಂಘಟನಾ ಕಾರ್ಯದರ್ಶಿ: ಶ್ರೀ ಷಣ್ಮುಖ ನಾಯ್ಕ್ ಇಂದ್ರಾಳಿ, ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀ ಬಿ.ಟಿ ನಾಯ್ಕ್ ಚೇರ್ಕಾಡಿ , ಕ್ರೀಡಾ ಕಾರ್ಯದರ್ಶಿ: ಶ್ರೀ ಕೃಷ್ಣ ನಾಯ್ಕ್ ಕರ್ಜೆ ಹಾಗೂ 25 ಜನ ಕಾರ್ಯಕಾರಿ ಸಮಿತಿಯ ಸದಸ್ಯರು ಆಯ್ಕೆಯಾಗಿದ್ದಾರೆ

No Comments

Leave A Comment