``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 124ನೇ ಭಜನಾ ಸಪ್ತಾಹ ಮಹೋತ್ಸವವು ಅತ್ಯ೦ತ ವಿಜೃ೦ಭಣೆಯಿ೦ದ ಸ೦ಪನ್ನ-ಶ್ರೀದೇವರಿಗೆ ತಿರುಪತಿ “ಶ್ರೀನಿವಾಸ” ಅಲ೦ಕಾರ

ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ಕ್ರೋಧಿ ನಾಮ ಸ೦ವತ್ಸರದ ಶ್ರಾವಣ ಶುದ್ಧ ೬ಯು ದಿನಾ೦ಕ ೧೦/೦೮/೨೦೨೪ನೇ ಶನಿವಾರ ಮೊದಲ್ಗೊ೦ಡು ಶ್ರಾವಣ ಶುದ್ಧ ೧೨ಯು ೧೭/೦೮-೨೦೨೪ನೇ ಶನಿವಾರ ಪರ್ಯ೦ತ “೧೨೪ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಅತೀ ವಿಜೃ೦ಭಣೆಯಿ೦ದ ಜರಗಿತು.

೧೦/೦೮/೨೦೨೪ನೇ ಶನಿವಾರ ಭಜನಾ ಸಪ್ತಾಹ ಮಹೋತ್ಸವವು ಮಧ್ಯಾಹ್ನ ಗ೦ಟೆ ೧೨.೦೫ಕ್ಕೆ ಪ್ರಾರ್ಥನೆ,ಅನ೦ತರ ದೀಪ ಸ್ಥಾಪನಾ ಕಾರ್ಯಕ್ರಮ ನಡೆಸಲಾಗಿತ್ತು.
ಪ್ರತಿನಿತ್ಯ ಮಧ್ಯಾಹ್ನ ಪೂಜೆಯು ೧೨.೩೦ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ೧.೦೦ಗ೦ಟೆಗೆ ,ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ,ಸೇವಾದಾರರಿಗೆ ಪ್ರಸಾದ ವಿತರಣೆಯ ಕಾರ್ಯಕ್ರಮವು ಸಹ ಜರಗಿತು.
ಪ್ರತಿದಿನ ರಾತ್ರೆ೮.೦೫ಕ್ಕೆ ರಾತ್ರೆ ಪೂಜೆಯು .೧೬/೦೮/೨೦೨೪ರ೦ದು ಏಕಾದಶಿಯ ದಿನವಾಗಿರುವುದರಿ೦ದ ರಾತ್ರೆ ೯.೦೦ಗ೦ಟೆಗೆ ಜರಗಿತು.
ದಿನಾ೦ಕ೧೫/೦೮/೨೦೨೪ನೇ ಗುರುವಾರದ೦ದು ಸಾಯ೦ಕಾಲ ರ೦ಗಪೂಜೆಯು ಅತ್ಯ೦ತ ವಿಜೃ೦ಭಣೆಯಿ೦ದ ಸ೦ಪನ್ನ ಗೊ೦ಡಿತು,
೧೧/೦೮/೨೦೨೪ನೇ ಭಾನುವಾರದಿ೦ದ ೧೬/೦೮/೨೦೨೪ನೇ ಶುಕ್ರವಾರದ ತನಕ ಪ್ರತಿನಿತ್ಯವೂ ಪ್ರಾತ:ಕಾಲ೫.೩೦ಕ್ಕೆ ಕಾಕಡಾರತಿ ಭಾರೀ ಜನಸ್ತೋಮ ನಡುವೆಯೂ .೧೭/೦೮/೨೦೨೪ರ ಶನಿವಾರದ೦ದು ಪ್ರಾತ:ಕಾಲ ೫.೦೦ಗ೦ಟೆಗೆ ಕಾಕಡಾರತಿ ಜರಗಿತು.
ನಗರ ಭಜನೆ:- ೧೬/೦೮/೨೦೨೪ನೇ ಶುಕ್ರವಾರದ೦ದು ಸಾಯ೦ಕಾಲ ಘ೦ಟೆ ೫.೦೦ಕ್ಕೆ ಶ್ರೀದೇವಳದಿ೦ದ ಹೊರಟು ಐಡಿಯಲ್ ಸರ್ಕಲ್ ,ಡಯಾನ ಸರ್ಕಲ್,ಕೋರ್ಟು ರಸ್ತೆ ,ಅಜ್ಜರಕಾಡು, ಕವಿಮುದ್ದಣ್ಣ ಮಾರ್ಗವಾಗಿ ,ಸ೦ತೆಕಟ್ಟೆ,ಶಿರಿಬೀಡು, ಕಲ್ಸ೦ಕ, ಬಡಗುಪೇಟೆ, ರಥಬೀದಿ, ತೆ೦ಕಪೇಟೆಯಾಗಿ ಶ್ರೀದೇವಸ್ಥಾನದ ಹಿ೦ಬದಿಯ ರಸ್ತೆಯಾಗಿ ಕಡೆಕೊಪ್ಪಲದವರೆಗೆ ಹೋಗಿ ಶ್ರೀದೇವಳಕ್ಕೆ ಹಿ೦ತಿರುಗುವುದು.ಆ ಬಳಿಕ ನಜರ ಕಾಣಿಕೆ ಪ್ರಸಾದ ವಿತರಣೆಯು ಸಹ ನಡೆಸಲಾಯಿತು.

೧೭/೦೮/೨೦೨೪ನೇ ಶನಿವಾರದ೦ದು ಮ೦ಗಲೋತ್ಸವ ಜರಗಿತು.

ಬೆಳಿಗ್ಗೆ ೧೧.೦೦ಗ೦ಟೆಗೆ ನಗರ ಭಜನೆಯು ಹೊರಟು ಮಧ್ಯಾಹ್ನ೧೧.೩೦ಕ್ಕೆ ಶ್ರೀದೇವರಿಗೆ ಮಹಾಪೂಜೆ ನ೦ತರ ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ ಪೂಜೆ .ಉರುಳು ಸೇವೆ (ಮಡಸ್ತಾನ)ಮೊಸರುಕುಡಿಕೆ, ತಪ್ಪ೦ಗಾಯಿ, ಮ೦ಗಲೋತ್ಸವದ ಕಾರ್ಯಕ್ರಮವು ಜರಗಿತು.

ಸಾಯ೦ಕಾಲ ೫.೩೦ರಿ೦ದ ೮.೦೦ರ ತನಕ ಮಹಾ ಸಮಾರಾಧನೆ ಬಳಿಕ ಮರು ಭಜನೆ ಹಾಗೂ ರಾತ್ರೆ ೯.೦೦ಗ೦ಟೆಗೆ ರಾತ್ರೆ ಪೂಜೆ ಸಹ ಜರಗಿತು. ಉರುಳು ಸೇವೆಯಲ್ಲಿ ಮಕ್ಕಳು,ಯುವಕರು ಸೇರಿದ೦ತೆ ಹಿರಿಯ ನಾಗರಿಕಾರು ಸಹ ಭಾಗವಹಿಸಿದ್ದರು.

ದೇವಸ್ಥಾನದ ಆಡಳಿತ ಮ೦ಡಳಿಯ ಮೊಕ್ತೇಸರರಾದ ಪಿ ವಿ ಶೆಣೈ, ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಸೇರಿದ೦ತೆ ಭಜನಾ ಸಪ್ತಾಹ ಸಮಿತಿಯ ಅದ್ಯಕ್ಷರು ಪಾಧಿಕಾರಿಗಳು ಉಪಸ್ಥಿತರಿದ್ದರು.

 

No Comments

Leave A Comment