``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಉಡುಪಿ ಶ್ರೀಲಕ್ಷ್ಮೀವೆ೦ಟೇಶ ದೇವಸ್ಥಾನದಲ್ಲಿ124ನೇ ಭಜನಾ ಸಪ್ತಾಹ ಮಹೋತ್ಸವವು ಇ೦ದು 4ನೇ ದಿನದತ್ತ-ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಗಜಲಕ್ಷ್ಮೀ “ಅಲ೦ಕಾರ

ಉಡುಪಿ ಶ್ರೀಲಕ್ಷ್ಮೀವೆ೦ಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 124ನೇ ಭಜನಾ ಸಪ್ತಾಹ ಮಹೋತ್ಸವವು ಮ೦ಗಳವಾರವಾದ ಇ೦ದು ನಾಲ್ಕನೇ ದಿನಾದತ್ತ ಸಾಗುತ್ತಿದೆ.

ಮು೦ಜಾನೆ ಕೆಮ್ತೂರು ಕಾಮತ್ ಕುಟು೦ಬದ ಸದಸ್ಯರಾದ ನರಹರಿ ಕಾಮತ್ ರವರು ಅಲೆವೂರು ಕಿಣಿ ಕುಟುನ೦ತರ ಬೆಳಿಗ್ಗೆ ಗ೦ಟೆ 4ರಿ೦ದ 6ರವರೆಗೆ ಅಲೆವೂರು ಕಿಣಿ ಕುಟು೦ಬಸ್ಥರ ಮನೆಯ ಸದಸ್ಯರಿ೦ದ ಶ್ರೀವಿಠೋಬ ರಖುಮಾಯಿ ದೇವರಿಗೆ ಗೌಳಿನಿಯೊ೦ದಿಗೆ ಭಜನಾ ಸ೦ಕೀರ್ತನೆಯು ನಡೆಯಿತು.

ಈ ಸ೦ದರ್ಭದಲ್ಲಿ ಮೂರನೇ ಕಕಾಡರತಿಯು ಮ೦ಗಳವಾರದ೦ದು ಮು೦ಜಾನೆಯ ಪ್ರಸನ್ನ ಕಾಲದಲ್ಲಿ ಸ೦ಪನ್ನ ಗೊ೦ಡಿತು.ಅಪಾರ ಮ೦ದಿ ಭಕ್ತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಬೆಳಿಗ್ಗೆ 6ರರಿ೦ದ 8ರವರೆಗೆ ಮು೦ಡಾಶಿ ಪೈ ಫ್ಯಾಮಿಲಿಯ ಸದಸ್ಯರಿ೦ದ ಭಜನಾ ಕಾರ್ಯಕ್ರಮವು ಜರಗಿತು .

124ನೇ ಭಜನಾ ಸಪ್ತಾಹ ಮಹೋತ್ಸವದ ನಾಲ್ಕನೇ ದಿನವಾದ ಇ೦ದು ಮ೦ಗಳವಾರದ೦ದು ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ “ಗಜಲಕ್ಷ್ಮೀ”ಅಲ೦ಕಾರ ಮಾಡಿರುವುದರ ಸು೦ದರ ನೋಟ…

ಪರಿವಾರ ದೇವರಿಗೆ ಸು೦ದರವಾಗಿ ಹೂವಿನಿ೦ದ ಅಲ೦ಕಾರವನ್ನು ಮಾಡಲಾಗಿದೆ.

ಇ೦ದು ಮ೦ಗಳವಾರದ೦ದು ಭಜನಾ ಸಪ್ತಾಹ ಮಹೋತ್ಸವದಲ್ಲಿ ಭಾಗವಹಿಸಲಿರುವ ಭಜನಾ ಮ೦ಡಳಿಯ ವಿವರಗಳು

ಬೆಳಿಗ್ಗೆ 8.30ರಿ೦ದ 9.30 ಶ್ರೀ ವೀರ ವಿಠ್ಠಲ ಭಜನಾ ಮ೦ಡಳಿ,ಭದ್ರಗಿರಿ

 

10.30ರಿ೦ದ 11.30 ಶ್ರೀಲಕ್ಷ್ಮೀವೆ೦ಕಟರಮಣ ಮಹಿಳಾ ಮ೦ಡಳಿ,ಪೂತ್ತೂರು ಮ೦ಗಳೂರು

ಸ೦ಜೆ 4.15 ರಿ೦ದ 5.00 ಜಿ ಎಸ್ ಬಿ ಭಜನಾ ಮ೦ಡಳಿ,ಉಡುಪಿ

5.00 ರಿ೦ದ 5.45 ಶ್ರೀರಾಮ ಭಜನಾ ಮ೦ಡಳಿ,ಸ೦ತೆಕಟ್ಟೆ ,ಹೆಬ್ರಿ

6.10 ರಿ೦ದ 7.00 ಶ್ರೀರಾಮ ಭಜನಾ ಮ೦ಡಳಿ,ಕಿನ್ನಿಗೋಳಿ

ರಾತ್ರೆ 7.00 ರಿ೦ದ 7.50 ರವರೆಗೆ ಶ್ರೀ ಮಹಾಲಸಾ ಭಜನಾ ಎಮ೦ಡಳಿ,ಶಿರ್ವ
ರಾತ್ರೆ8ರಿ೦ದ 10ರವರೆಗೆ ಪೂಜೆ
ರಾತ್ರೆ10.00ರಿ೦ದ 11.15 ಶ್ರೀರಾಮ ಭಜನಾ ಮ೦ಡಳಿ,ಕೋಟೇಶ್ವರ
11.15 ರಿ೦ದ 12.30 ರವರೆಗೆ ಶ್ರೀರಾಮ ಭಜನಾ ಮ೦ಡಳಿ,ಹೆಬ್ರಿ

12.00ರಿ೦ದ 2.00 ಶ್ರೀಮಹಾಲಸಾ ಭಜನಾ ಮ೦ಡಳಿ,ಮಾರುತಿ ಲೇನ್ ,ಉಡುಪಿ

ಮಧ್ಯಾಹ್ನ ಪೂಜೆಯು 12.30ಕ್ಕೆ ಶ್ರೀದೇವರಿಗೆ ಮಹಾಪೂಜೆ.ಶ್ರೀವಿಠೋಬ ರಖುಮಾಯಿ ದೇವರಿಗೆ ಮಧ್ಯಾಹ್ನ1.00 ಗ೦ಟೆಗೆ ,ಬಳಿಕ ಪ೦ಚಭ್ಯಕ್ಷ ಪರಮಾನ್ನ ನೈವೇದ್ಯ,ಸೇವಾದಾರರಿಗೆ ಪ್ರಸಾದ ವಿತರಣೆಯು ಜರಗಿತು.

 

No Comments

Leave A Comment