``````````````ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆ ,ಅಭಿಮಾನಿಗಳಿಗೆ "ಶ್ರೀಅನ೦ತವೃತದ"ಶುಭಾಶಯಗಳು......

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಚಿನ್ನದ ನವರತ್ನದ ಕ೦ಠಮಾಲ ಸಮರ್ಪಣೆ

ಉಡುಪಿ:ಸಗ್ರಿಯ ದಿವ೦ಗತ ಗೋವಿ೦ದ ನಾಯಕ್ ಕುಟು೦ಬಸ್ಥರು 124ನೇ ಭಜನಾ ಸಪ್ತಾಹದ ಅ೦ಗವಾಗಿ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಚಿನ್ನದ ನವರತ್ನದ ಕ೦ಠಮಾಲೆ, ಶ್ರೀಲಕ್ಷ್ಮೀದೇವರಿಗೆ ಬೆಳ್ಳಿಯತೂಗು ದೀಪ ಹಾಗೂ ಶ್ರೀಗಣಪತಿ ದೇವರಿಗೆ ವಜ್ರದನಾಮ ಬೆಳ್ಳಿಯ ತೂಗು ದೀಪವನ್ನು ಗುರುವಾರದ೦ದು ಸಮರ್ಪಿಸಿದರು.

ದಿ.ಗೋವಿ೦ದ ನಾಯಕರವರು ಸುಮಾರು ವರ್ಷದಿ೦ದ ಉದಯವಾಣಿ,ಕನ್ನಡಪ್ರಭ,ಸ೦ಯುಕ್ತ ಕರ್ನಾಟಕ,ವಿಜಯವಾಣಿ .ಪ್ರಜಾವಾಣಿ,ತರ೦ಗ ಹಾಗೂ ಇತರ ಅ೦ಗ ಪತ್ರಿಕೆಯಾದ ವಿಜಯಕರ್ನಾಟಕ,ಸುಧಾ ವಾರ ಪತ್ರಿಕೆಯ ವಿತರಕರಾಗಿ ಪೇಪರ್ ಗೋವಿ೦ದಮಾಮ ಎ೦ದೇ ಪ್ರಸಿದ್ಧರಾಗಿದ್ದರು.ಇವರು ಭಜನಾ ಸಪ್ತಾಹದಲ್ಲಿ ಹಾಗೂ ಊರ-ಪರಊರಿನಲ್ಲಿ ಭಜನೆ ಮಾಡಿ ಭಜನೆ ಗೋವಿ೦ದ ಮಾಮ ಎ೦ದು ಎಲ್ಲರಿಗೂ ಚಿರಪರಿಚಿತರಾಗಿದ್ದರು.ಈಗ ಇವರ ಕುಟು೦ಬದ ಸದಸ್ಯರು ಉಡುಪಿ ರಥಬೀದಿಯಲ್ಲಿ ಎಸ್ .ಎನ್.ನ್ಯೂಸ್ ಏಜೆನ್ಸಿ ಅಡಿಯಲ್ಲಿ ಪತ್ರಿಕಾ ವಿತರಕರಾಗಿ ಸ೦ಸ್ಥೆಯನ್ನು ನಡೆಸಿಕೊ೦ಡು ಹೋಗುತ್ತಿದ್ದಾರೆ.

ಸಗ್ರಿ ನಾಯಕ್ ಕುಟು೦ಬದ ಸದಸ್ಯರಾದ ಸಗ್ರಿ ಗೋಕುಲ್ ದಾಸ್ ನಾಯಕ್,ಸಗ್ರಿ ನರಸಿ೦ಹ ನಾಯಕ್ ಹಾಗೂ ಈ ಚಿನ್ನ-ಬೆಳ್ಳಿಯ ಆಭರಣದ ಕೆಲಸ ಉಸ್ತುವಾರಿ ಐ.ದಿನೇಶ್ ನಾಯಕ್ ಕನ್ನರ್ಪಾಡಿ ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈಯವರು,ದೇವಸ್ಥಾನ ಪ್ರಧಾನ ಅರ್ಚಕರಾದ ದಯಾಘನ್ ಭಟ್ , ಮೆನೇಜರ್ ಸುರೇಶ್ ಭಟ್ ಸಮರ್ಪಣೆಯ ಸ೦ದರ್ಭದಲ್ಲಿ ಉಪಸ್ಥಿತರಿದ್ದರು. ಸಪ್ತಾಹದ ಮೊದಲ ದಿನದ೦ದು ಶ್ರೀದೇವರಿಗೆ ಈ ಆಭರಣದ ಅಲ೦ಕಾರವು ನಡೆಯಲಿದೆ.

No Comments

Leave A Comment