ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಬಂಟ್ವಾಳ: ನೆಲ್ಯಪಲ್ಕೆಯಲ್ಲಿ ರಭಸದಿಂದ ಬೀಸಿದ ಗಾಳಿ- ಮನೆಗಳಿಗೆ ಹಾನಿ
ತಾಲೂಕಿನ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಸಮೀಪದ ನೆಲ್ಯಪಲ್ಕೆ ಎಂಬಲ್ಲಿ ಶನಿವಾರ ಬೀಸಿದ ಗಾಳಿಯ ರಭಸಕ್ಕೆ ವಾಣಿಜ್ಯ ಕಟ್ಟಡದ ಮುಂಭಾಗ ಹಾಕಲಾಗಿದ್ದ ಸಿಮೆಂಟ್ ಶೀಟ್ಗಳು ಹಾರಿ ಹೋಗಿವೆ.
ಜತೆಗೆ ಎರಡು ಮನೆಗಳ ಮೇಲೆ ಮರದ ದಿಮ್ಮಿಗಳು ಬಿದ್ದು ಛಾವಣಿಗೆ ಹಾನಿಯಾಗಿದೆ. ಗಾಳಿಯ ವೇಗ ಕಡಿಮೆಯಾದಂತೆ ಹೆಚ್ಚಿನ ಹಾನಿಯನ್ನು ತಪ್ಪಿಸಲಾಯಿತು.
ನೆಲ್ಯಪಲ್ಕೆಯಲ್ಲಿ ಶನಿವಾರ ಬೆಳಗ್ಗೆಯಿಂದ ಎಡೆಬಿಡದೆ ಮಳೆ ಸುರಿಯಿತು. ಸ್ಥಳೀಯ ಉದ್ಯಮಿ ಖಾದರ್ ಇಕ್ರಾ ಅವರ ಮಾಲೀಕತ್ವದ ವಾಣಿಜ್ಯ ಕಟ್ಟಡದ ಮುಂಭಾಗದಲ್ಲಿ ಹಾಕಲಾಗಿದ್ದ ಸಿಮೆಂಟ್ ಶೀಟ್ಗಳು ಹಾರಿ ಹೋಗಿವೆ. ಇದಲ್ಲದೆ, ಹೆಚ್ಚಿನ ವೇಗದ ಗಾಳಿಗೆ ಇತರ ಪ್ಲಾಸ್ಟಿಕ್ ವಸ್ತುಗಳು ಮತ್ತು ಬಟ್ಟೆಗಳು ಸಹ ಹಾರಿಹೋಗಿವೆ.
ಅಕ್ಕಪಕ್ಕದ ಮರಗಳು ಬುಡ ಸಮೇತ ಅಬ್ದುಲ್ ಖಾದರ್ ಮತ್ತು ಯೂನಸ್ ಎಂಬುವವರ ಮನೆಗಳ ಮೇಲೆ ಬಿದ್ದು ಕಟ್ಟಡಗಳಿಗೆ ಭಾಗಶಃ ಹಾನಿಯಾಗಿದೆ. ಇಕ್ರಾನ ಅಂಗಡಿಯ ಬಳಿ ಗಾಳಿಯು ಸುಂಟರಗಾಳಿಯಾಗಿ ಮಾರ್ಪಟ್ಟಿತು. ಸಮೀಪದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿದೆ. ಗಾಳಿಗೆ ಹಾಳೆಗಳು ಹಾರುತ್ತಿರುವುದನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ.