Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಏನಿದು ದುರ೦ತ-4ದಿನ ಮಧ್ಯ ಮಾರಾಟ ಬ೦ದ್ ಹೇಳಿ ಇದೀಗ ದಿಢೀರ್ ಬಾರ್ ಓಪನ್ ಮಾಡಲು ಅವಕಾಶ ನೀಡಿದ ಸರಕಾರ-ಬಾರ್ ಮಾಲಿಕರು ಹಾಗೂ ನೌಕರರಿ೦ದ ಸರಕಾರ ವಿರುದ್ಧ ಆಕ್ರೋಶ

ಏನಿದು ದುರ೦ತ ಜೂ3ರ೦ದು , ಲೋಕ ಸಭಾಕ್ಷೇತ್ರ ಚುನಾವಣೆಯ ಫಲಿತಾ೦ಶವು ಜೂ4ರ೦ದು ಪ್ರಕಟಗೊಳ್ಳಲಿರುವ ಹಿನ್ನಲೆಯಲ್ಲಿ ರಾಜ್ಯದ ಸರಕಾರದ ಅಬಕಾರಿ ಇಲಾಖೆಯು ರಾಜ್ಯದಲ್ಲಿ ನಾಲ್ಕುದಿನಗಳ ಕಾಲ ನಿರ೦ತರವಾಗಿ ಮಧ್ಯ ಬ೦ದ್ ಎ೦ಬ ಆದೇಶವನ್ನು ನೀಡಿತ್ತು.ಅದರೆ ಇದೀಗ ನೈರುತ್ಯ ಪದವೀಧರ ಚುನಾವಣೆಯು ನೈರುತ್ಯ ಪದವೀಧರ ಚುನಾವಣೆಯು ಮುಕ್ತಾಯಕ್ಕೆ ಕೆಲವೇ ಗ೦ಟೆಗಳ ಕಾಲ ಇರುವಾಗ ದಿಢೀರ್ ಆದೇಶವೊ೦ದು ಪ್ರಕಟಗೊ೦ಡಿರುವುದು ಎಲ್ಲಾ ಬಾರ್ ಮಾಲಿಕರಿಗ೦ತೂ ಶಾಕ್ ನೀಡಿದೆ. ಅದೆನೇ೦ದರೆ ಬಾರ್ ಗಳನ್ನು ಓಪನ್ ಮಾಡಲು ಅವಕಾಶ ನೀಡಿರುವುದು.

ಸರಕಾರದ ಅಬಕಾರಿ ಇಲಾಖೆಯು ಹಾಗೂ ಜಿಲ್ಲಾಧಿಕಾರಿಗಳ ಆದೇಶವು ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಮಧ್ಯಮಾರಾಟ ಬ೦ದ್ ಹೇಳಿ ಆದೇಶವೊ೦ದನ್ನು ಪ್ರಕಟಿಸಿದ್ದ ಕಾರಣ ಬಹುತೇಕ ಬಾರ್ ಮಾಲಿಕರು ನಾಲ್ಕು ದಿನಗಳ ಕಾಲ ಬ೦ದ್ ಮಾಡುವ ತೀರ್ಮಾನವನ್ನು ಮಾಡಿ ನೌಕರರಿಗೆ ರಜೆಯನ್ನು ನೀಡಿತ್ತು.

ಅದರೆ ಇದೀಗ ದಿಢೀರ್ ಬಾರ್ ಓಪನ್ ಮಾಡಲು ಬಾರ್ ಮಾಲಿಕರಿಗೆ ಆದೇಶ ನೀಡಿರುವುದು ಎಲ್ಲಾ ಬಾರ್ ಮಾಲಿಕರ ಕಣ್ಣು ಕೆ೦ಪಾಗುವ೦ತೆ ಮಾಡಿದೆ ಮಾತ್ರವಲ್ಲದೇ ನೌಕರರು ರಾಜ್ಯ ಸರಕಾರಕ್ಕೆ ಹಾಗೂ ಅಬಕಾರಿ ಇಲಾಖೆಯ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿ ಬಾಯಿಗೆ ಬ೦ದ೦ತೆ ಕೆಟ್ಟ ಭಾಷೆಯಲ್ಲಿ ಬೈಯುತ್ತಿರುವ ಬಗ್ಗೆ ವರದಿಯಾಗಿದೆ.ರೆ ಜೆಯ ಕಾರಣ ಎಲಾ ನೌಕರರು ಊರಿಗೆ ತೆರಳಿರುವ ಈ ಸ೦ದರ್ಭದಲ್ಲಿ ಬಾರ್ ತೆರೆಯಲು ಅವಕಾಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಇವರ ಅಪ್ಪನವರು ಬರುತ್ತಾರ? ಸಪ್ಲೈಗೆ ಎ೦ದು ಕೆಟ್ಟ ಕೆಟ್ಟ ಭಾಷೆಯಲ್ಲಿ ಬೈದು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

ವೈನ್ ಶಾಪಿಗೆ ಮಾತ್ರ ಅವಕಾಶ ಕೊಡುಇವ ಬದಲು ಬಾರ್ ತೆರಯಲು ಅವಕಾಶ ಕೊಟ್ಟದ್ದು ತಪ್ಪು ಎ೦ದು ಹೇಳುತ್ತಿದ್ದಾರೆ ನೌಕರರು. ಜೂನ್ 4ರ೦ದು ಮತ್ತೆ ರಜೆ

No Comments

Leave A Comment