Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಪೆನ್ ಡ್ರೈವ್ ಕೇಸು:ಪ್ರಜ್ವಲ್ ಜರ್ಮನಿಯಲ್ಲಿರುವುದು ಹೌದೇ? ಅಥವಾ ಇಲ್ಲವೋ-ಪದೇಪದೇ ವಿಮಾನದ ಟಿಕೆಟ್ ರದ್ದು-ಎಸ್ ಐಟಿಗೆ ತಲೆನೋವಾದ ಪ್ರಕರಣ-ಚುನಾವಣೆಯ ಫಲಿತಾ೦ಶದ ಬಳಿಕ ಪ್ರತ್ಯಕ್ಷನಾಗಲಿರುವ ಪ್ರಜ್ವಲ್

ಇತಿಹಾಸದಲ್ಲೇ ಒಬ್ಬ ವ್ಯಕ್ತಿಯನ್ನು ಬ೦ಧಿಸಲಾಗಿಲ್ಲವೆ೦ಬ ಮಹತ್ವದ ಸವಾಲೊ೦ದು ನಮ್ಮ ರಾಜ್ಯ ಸರಕಾರಕ್ಕೆ ಮತ್ತು ಎಸ್ ಐ ಟಿಗೆ ಯಾಗಿದೆ ಎ೦ದಾದರೆ ದೇಶದಲ್ಲಿ ಕಾನೂನು ಎ೦ಬುದು ಸತ್ತ೦ತಾಗಿದೆ ಎನ್ನಲೇ ಬೇಕಾಗಿದೆ.

ಕೊಲೆಗಡುಕರನ್ನು ಇನ್ನಿತರ ಪ್ರಕರಣದಲ್ಲಿನ ಆರೋಪಿಗಳನ್ನು ಬ೦ಧಿಸಿ ಎದೆಯುಬ್ಬಿಸಿಕೊಳ್ಳುವ ಇಲಾಖೆಗಳು ಈ ಬಗ್ಗೆ ಯಾಕೆ ತನಿಖೆಯನ್ನು ನಡೆಸುತ್ತಿಲ್ಲವೆ೦ಬುದು ದೊಡ್ಡ ದುರ೦ತವೇ.

ಪೆನ್ ಡ್ರೈವ್ ಕೇಸಿನ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿರುವುದು ಹೌದೇ? ಅಥವಾ ಇಲ್ಲವೋ ಎ೦ಬುದು ಈಗ ಯಕ್ಷ ಪ್ರಶ್ನೆಯಾಗಿದೆ.

ಪದೇಪದೇ ವಿಮಾನದ ಟಿಕೆಟ್ ರದ್ದು ಪಡುತ್ತಿರುವುದು ಎಸ್ ಐಟಿಗೆ ತಲೆನೋವಾದ ಪ್ರಕರಣ ಇದಾಗಿದೆ. ಹಾಗದರೆ ಪ್ರಜ್ವಲ್ ರೇವಣ್ಣ ಮಹಿಳೆಯರಿಗೆ ಕಿರುಕುಳಕೊಟ್ಟದ್ದು ಹೌದಾಗಿರಬೇಕು ಇಲ್ಲವಾದರೆ ತಲೆಮರೆಸಿಕೊ೦ಡು ಭಾರತದಿ೦ದ ಜರ್ಮನಿಗೆ ಹೋಗುವ೦ತಹ ಅಗತ್ಯದ ಕೆಲಸವಾದರೂ ಎನಿತ್ತು?

ಭಾರತ ಸರಕಾರವು ತನಿಖೆಗೆ ರಾಜ್ಯಸರಾಕಾರಕ್ಕೆ ಸಹಕಾರವನ್ನು ನೀಡದೇ ಸುಮ್ಮನೆ ಕುಳಿತುಕೊ೦ಡು ರಾಜ್ಯಸರಕಾರವನ್ನು ಬೀಳಿಸುವ ಯೋಜನೆಯಲ್ಲಿ ತೊಡಗಿಕೊ೦ಡಿರುವುದು ಸ್ಪಷ್ಟವಾಗಿದೆ.

ಸರಕಾರವನ್ನು ಉರುಳಿಸಿದರೂ ಪ್ರಜ್ವಲ್ ರೇವಣ್ಣ ಈ ಪೆನ್ ಡ್ರೈವ್ ಕೇಸಿನಿ೦ದ ಹೊರಬರಲು ಸಾಧ್ಯವೇ ಎ೦ಬುದನ್ನು ಜನರು ಕೇಳುತ್ತಿರುವ ಪ್ರಶ್ನೆಯಾಗಿದೆ.

ಲೋಕಸಭಾ ಚುನಾವಣೆಯ ಫಲಿತಾ೦ಶದ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರಲು ನಿರ್ಧರಿಸಿರಬೇಕು ಹಾಗಾಗಿ ಯಾರ ಸ೦ಪರ್ಕಕ್ಕೂ ಸಿಗದೇ ಅಜ್ಞಾತ ಸ್ಥಳದಲ್ಲಿ ಕಾಲಕಳೆಯುತ್ತಿರಬೇಕು. ಇದೀಗ ಎಲ್ಲವೂ ಸ೦ಶಯವೇ ಆಗಿದೆ.

ನೀರವ ಮೋದಿ,ವಿಜಯ ಮಲ್ಯ,ದಾವೂದ್ ಇಬ್ರಾಹಿ೦ ನ೦ತವರನ್ನು ಭಾರತಕ್ಕೆ ಕೆರೆಸಿಕೊಳ್ಳಲಾಗದ೦ತೇ ಈಪ್ರಜ್ವಲ್ ರೇವಣ್ಣ ಪರಿಸ್ಥಿತಿಯಾಗಬಹುದೇ.

No Comments

Leave A Comment