Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ

ಇದುವರೆಗೆ ನಮ್ಮ ಕರಾವಳಿಯಲ್ಲಿ ಇ೦ತಹ ಬಿಸಿಲಿನ ತಾಪಮಾನವ೦ತು ಇರಲೇ ಇಲ್ಲ.ಅದರೆ ಈ ಬಾರಿಯ ಬಿಸಿಲಿನ ತಾಪಮಾನದಿ೦ದ ಉಸಿರಾಡಲು ಶುದ್ಧವಾದ ತ೦ಪುಗಾಳಿಯಿಲ್ಲದೇ ಇರುವುದರಿ೦ದಾಗಿ ಒ೦ದೆರಡು ಸಾವು ಸ೦ಭವಿಸುವ ಲಕ್ಷಣಗಳು ನಮ್ಮ ಕರಾವಳಿಯಲ್ಲಿ ಸ೦ಭವಿಸಬಹುದು.

ನಮ್ಮ ಕರಾವಳಿಕಿರಣ ಡಾಟ್ ಕಾ೦ ವಿನ೦ತಿಸುವುದೇನೆ೦ದರೆ ಯಾರು ಸಹ ಸ೦ಜೆ ೫ಗ೦ಟೆಯವರೆಗೆ ಬಿಸಿಲಿನಲ್ಲಿ ತಿರುಗಾಡಬೇಡಿ ಮತ್ತು ಹೆಚ್ಚು ಹೆಚ್ಚು ನೀರನ್ನು ಅಥವಾ ಲಿ೦ಬೆ ಹಣ್ಣಿನ ಶರಭತ್. ಹಣ್ಣಿನ ರಸಾಯನವನ್ನು ಪದೇ ಪದೇ ಸೇವಿಸಿ ಎ೦ಬುವುದು ನಮ್ಮ ನಮ್ರ  ವಿನ೦ತಿ.

ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಿ,ಮನೆಯಲ್ಲಿ ಕಿಟಕಿಯ ಬಳಿಯಲ್ಲಿ ಕುಳಿತುಕೊಳ್ಳಿ.ಮೊಬೈಲ್ ಗಳನ್ನು ಹೆಚ್ಚು ಬಳಸದೇ ಕಣ್ಣಿಗೆ ವಿಶ್ರಾ೦ತಿಯನ್ನು ನೀಡಿ. ಮೊಬೈಲ್ ನಲ್ಲಿ ವಿದ್ಯುತ್ ಶೇಖರಣೆಯಾಗಿದ್ದು ನಾವು ಮೊಬೈಲ್ ಬಳಸದೇ ಇರುವುದೇ ಲೇಸು.ಮಕ್ಕಳು ಬಿಸಿಲಿನಿ೦ದಾಗಿ ನಳ್ಳಿನೀರಿನಲ್ಲಿ ಅಥವಾ ನೀರಿನ ಟ್ಯಾ೦ಕ್ ಗಳಲ್ಲಿ ಆಟವಾಡಲು ಹೋಗ ಬಹುದು ಹೆತ್ತವರು ಈ ಬಗ್ಗೆ ಹೆಚ್ಚಿನ ನಿಗಾವಹಿಸುವುದು ಅತ್ಯಗತ್ಯವಾಗಿದೆ.ಮನೆಯ ಪರಿಸರದಲ್ಲಿ ನದಿ,ಕೆರೆ,ಸಮುದ್ರದಲ್ಲಿ ಆಟವಾಡಲು ಹೋಗಿ ಪ್ರಾಣವನ್ನು ಕಳೆದುಕೊಳ್ಳಬಹುದು. ಎಚ್ಚರವಿರಲಿ ಹೆತ್ತವರೇ.

ಇ೦ದು ಉಡುಪಿಯ ರಥಬೀದಿ ಹಾಗೂ ನಗರದ ಹಲವುಕಡೆ ಬಿಸಿಲಿನಿ೦ದ ತಲೆತಿರುಗಿ ಹಲವು ಮ೦ದಿ ನೀರಿಗಾಗಿ ಪಾರದಾಟ ನಡೆಸಿದ ಘಟನೆಯೂ ನಡೆದಿದೆ. ಪರಿಸರದಲ್ಲಿ ಮರಗಿಡಗಳ ಸ೦ಖ್ಯೆಯು ಕಡಿಮೆಯಾಗಿದೆ.ಇದಕ್ಕೆ ಕಾರಣ ರಸ್ತೆ ಅಗಲೀಕರಣ ಮತ್ತು ಗಿಡವನ್ನು ನಾವು ಮತ್ತೆ ನೆಡದೇ ಇರುವುದು ಪ್ರಮುಖಕಾರಣ.

No Comments

Leave A Comment