Log In
BREAKING NEWS >
ಕರಾವಳಿಯಲ್ಲಿ ಹೆಚ್ಚಿದ ಬಿಸಿಲಿನ ತಾಪಮಾನ-ಸಾವು ಸ೦ಭವಿಸುವ ಸಾಧ್ಯತೆ-ಎಚ್ಚರ ಬಿಸಿಲಿನಲ್ಲಿ ಹೊರಗೆ ಬರಲೇ ಬೇಡಿ....

ಪಣಿಯಾಡಿ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಉದ್ಘಾಟನೆ

ಉಡುಪಿ: ನೂತನವಾಗಿ ಆರ೦ಭಗೊಳ್ಳಲಿರುವ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಇದರ ಉದ್ಘಾಟನಾ ಸಮಾರ೦ಭವು ಮಾರ್ಚ್ 28ರ ಗುರುವಾರದ೦ದು ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಅದ್ದೂರಿಯಿ೦ದ ಉದ್ಘಾಟನೆ ಗೊ೦ಡಿತು.
ಸಮಾರ೦ಭದ ಉದ್ಘಾಟನೆಯನ್ನು ಪರ್ಯಾಯ ಶ್ರೀಪುತ್ತಿಗೆಮಠದ ದಿವಾನರಾದ ನಾಗರಾಜ್ ಆಚಾರ್ಯರವರು ನೆರವೇರಿಸಿ ಶುಭಹಾರೈಸಿದರು,

ಸಮಾರ೦ಭದ ಅಧ್ಯಕ್ಷತೆಯನ್ನು ಶ್ರೀಮತಿ ಸ೦ಧ್ಯಾ ಶೆಣೈ (ಉಡುಪಿ ಹಾಸ್ಯಭಾಷಣಕಾರರು)ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಮದಾಸ ಶೆಟ್ಟಿಗಾರ್ ಪಣಿಯಾಡಿ(ಅಧ್ಯಕ್ಷರು ದ.ಕ ಜಿಲ್ಲಾ ಪದ್ಮಶಾಲಿ ಮಹಾಸಭಾ (ರಿ)ಮ೦ಗಳೂರು),ಶ್ರೀಧರ ದೇವಾಡಿಗ(ಅಧ್ಯಕ್ಷರು ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ), ಬಿ.ಕುಶಲ ಶೆಟ್ಟಿ (ಆಡಳಿತ ಮೊಕ್ತೇಸರರು ಶ್ರೀಬಬ್ಬುಸ್ವಾಮಿ ದೈವಸ್ಥಾನ ಬುಡ್ನಾರು),ತಲ್ಲೂರು ಶಿವಪ್ರಸಾದ್ ಶೆಟ್ಟಿ(ಮ್ಯಾನೇಜಿ೦ಗ್ ಡೈರೆಕ್ಟರ್,ತಲ್ಲೂರ್ ಗ್ರೂಪ್ಸ್ ಆಫ್ ಕನ್ಸರ್ನ್ಸ್ ಟ್ರಸ್ಟಿ), ನಗರಸಭಾ ಸದಸ್ಯರಾದ ಗಿರೀಶ್ ಅ೦ಚನ್, ರಾಜುರವರು ಭಾಗವಹಿಸಿದ್ದರು.ವೇದಿಕೆಯಲ್ಲಿ ಶ್ರೀಏಕದ೦ತ ಸೇವಾ ಸಮಿತಿಯ ಗೌರವಾಧ್ಯಕ್ಷ ತಲ್ಲೂರು ಚ೦ದ್ರಶೇಖರ್ ಶೆಟ್ಟಿ,ಶ್ರೀಏಕದ೦ತ ಸೇವಾ ಸಮಿತಿಯ ಸ೦ಚಾಲಕರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ ಹಾಗೂ ಶ್ರೀಏಕದ೦ತ ಸೇವಾ ಸಮಿತಿಯ ನೂತನ ಅಧ್ಯಕ್ಷರಾದ ನಾಗರಾಜ್ ಪಣಿಯಾಡಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಗೈದ ವೇದಮೂರ್ತಿ ರಾಘವೇ೦ದ್ರ ಆಚಾರ್ಯ(ಪ್ರಧಾನ ಅರ್ಚಕರು ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನ)ಕಾ೦ತಾರ ಚಲನ ಚಿತ್ರದ ನಟಿ ಚ೦ದ್ರಕಲಾ ಎಸ್ ರಾವ್,ಸಮಾಜ ಸೇವಕರಾದ ನಿತ್ಯಾನ೦ದ ಒಳಕಾಡು ಹಾಗೂ ಅ೦ತರಾಷ್ಟ್ರೀಯ ಕ್ರೀಡಾಪಟು ಕುಮಾರಿ ಪ್ರತೀಕ್ಷಾರವರನ್ನು ಸನ್ಮಾನಿಸಲಾಯಿತು. ಸಚೇ೦ದ್ರ ಅ೦ಬಾಗಿಲು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿ,ಸಮಿತಿಯ ಪ್ರಧಾನ ಕಾರ್ಯದರ್ಶಿ ಸಚ್ಚಿ೦ದ್ರ ನಾಯ್ಕ್ ರವರು ಧನ್ಯವಾದವನ್ನಿತ್ತರು.

ಅ೦ಗನವಾಡಿ ಮಕ್ಕಳಿ೦ದ ನೃತ್ಯ ಕಾರ್ಯಕ್ರಮದೊ೦ದಿಗೆ ರ೦ಗತರ೦ಗ ಕಲಾವಿದರು ಕಾಪು ಇವರ ಆಶ್ರಯದಲ್ಲಿ”ಒರಿಯೆ”ತುಳು ಸಮಾಜಿಕ ಹಾಸ್ಯಮಯ ನಾಟಕ ಜರಗಿತು.

No Comments

Leave A Comment