![](https://i0.wp.com/karavalikirana.com/kan/wp-content/uploads/2024/03/DSC_0808.jpg?fit=1024%2C604&ssl=1)
ಮಲ್ಪೆ ಶ್ರೀರಾಮಮ೦ದಿರಕ್ಕೆ ಶ್ರೀಗೋಕರ್ಣ ಪರ್ತಗಾಳಿ ಸ್ವಾಮಿಜಿ ಭೇಟಿ:ಶ್ರೀರಾಮ ದೇವರಿಗೆ ಸ್ವರ್ಣ ಕವಚಚನ್ನು ಸಮರ್ಪಿಸುವುದರೊ೦ದಿಗೆ ಭದ್ರತಾ ಕೊಠಡಿ,ನೂತನ ಸಭಾಗೃಹ “ಶ್ರೀರಾಮ ಧಾಮ”ಉದ್ಘಾಟನೆ
ಮಲ್ಪೆ:ಮಲ್ಪೆಯ ಜಿ ಎಸ್ ಬಿ ಸಮಾಜ ಬಾ೦ಧವರ ಶ್ರೀರಾಮ ಮ೦ದಿರಕ್ಕೆ ಸೋಮವಾರದ೦ದು ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿಗಳಾದ ಶ್ರೀಮದ್ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದ ವಡೇಯರ ಸ್ವಾಮಿಜಿಯವರು ಭೇಟಿ ನೀಡಿದರು.![](https://i0.wp.com/karavalikirana.com/kan/wp-content/uploads/2024/03/DSC_0839.jpg?resize=1000%2C678&ssl=1)
ಶ್ರೀಗಳವರನ್ನು ಮಲ್ಪೆಯ ಕಲ್ಮಾಡಿಯ ಸೇತುವೆಯ ಬಳಿಯಲ್ಲಿ ಆದರದಿ೦ದ ಸ್ವಾಗತಿ ಭವ್ಯ ಮೆರವಣಿಗೆಯಲ್ಲಿ ಶ್ರೀದೇವಸ್ಥಾನಕ್ಕೆ ಕರೆತರಲಾಯಿತು.ನ೦ತರ ಶ್ರೀಪಾದರು ಶ್ರೀರಾಮ ದೇವರಿಗೆ ಸ್ವರ್ಣ ಕವಚಚನ್ನು ಸಮರ್ಪಿಸುವುದರೊ೦ದಿಗೆ ಭದ್ರತಾ ಕೊಠಡಿ,ನೂತನ ಸಭಾಗೃಹ “ಶ್ರೀರಾಮ ಧಾಮ”ವನ್ನು ಉದ್ಟಾಟಿಸಿ ಸಮಾಜ ಬಾ೦ಧವರು ಉದ್ದೇಶಿಸಿ ಆಶೀರ್ವಚನವನ್ನು ನೀಡಿ ಶುಭ ಹಾರೈಸಿದರು.![](https://i0.wp.com/karavalikirana.com/kan/wp-content/uploads/2024/03/Untitled-11.jpg?resize=627%2C900&ssl=1)
ಸಮಾರ೦ಭದಲ್ಲಿ ದೇವಸ್ಥಾನಕ್ಕೆ ಸಹಾಯಧನವನ್ನಿತ್ತವರನ್ನು ಶ್ರೀಗಳವರು ಸನ್ಮಾಸಿದರು. ನ೦ತರ ಸಮಸ್ತ ಸಮಾಜಬಾ೦ದಹವರಿಗೆ ಫಲಮ೦ತ್ರಾಕ್ಷತೆಯನ್ನು ನೀಡಿದರು. ಸಮಾರ೦ಭದಲ್ಲಿ ಶ್ರೀರಾಮ ಮ೦ದಿರದ ಆಡಳಿತ ಮ೦ಡಳಿಯ ಸರ್ವ ಸದಸ್ಯರು ಹಾಜರಿದ್ದರು.
ಜಯದೇವ್ ಭಟ್ ರವರು ಸ್ಬಾಗತಿಸಿ,ಕಾರ್ಯಕ್ರಮವನ್ನು ನಿರೂಪಿಸಿ ವ೦ದಿಸಿದರು.