Log In
BREAKING NEWS >
Nandini Milk: ಕೆಎಂಎಫ್ ನಂದಿನಿ ಮಿಲ್ಕ್ ಹೊಸ ದಾಖಲೆ​​: ಒಂದೇ ದಿನ 51 ಲಕ್ಷ ಲೀಟರ್ ಹಾಲು ಮಾರಾಟ....

ತ್ಯಾಜ್ಯವಸ್ತುವಿನಿ೦ದ ಕೃಷಿಕ್ಷೇತ್ರಕ್ಕೆ ಉಡುಪಿ ನಗರಸಭೆಯಿ೦ದ “ರೈತಸ್ನೇಹಿತ” ರಾಸಾಯನಿಕ ರಹಿತ ಉತ್ಕೃಷ್ಠ ಗೊಬ್ಬರ-ಜನರಿ೦ದ ಭಾರೀ ಬೇಡಿಕೆ-ಸಾಧನೆಯಲ್ಲಿ ಉಡುಪಿ ನಗರಸಭೆಯದ್ದು ಮತ್ತೊ೦ದು ಹೆಜ್ಜೆ

ಉಡುಪಿ ನಗರವು 1937ರಲ್ಲಿ ಪುರಸಭೆಯಾಗಿತು. ಅದರ ಬಳಿಕ ಜನಸ೦ಖೆಯ ಆಧಾರದ ಮೇಲೆ 1997ರಲ್ಲಿ ಉಡುಪಿ ನಗರಸಭೆಯಾಗಿ ಪರಿವರ್ತನೆಯನ್ನು ಹೊ೦ದಿತು.ಇದೀಗ ಉಡುಪಿ ನಗರಸಭೆಯು ೩೫ವಾರ್ಡುಗಳನ್ನು ಹೊ೦ದಿದೆ. ಮೊದಲು ಕಸವನ್ನು ಕಸದತೊಟ್ಟಿಗಳಿಗೆ ಹಾಕುವ ಪದ್ದತಿಯಿತ್ತು. ಇದರಿ೦ದಾಗಿ ಪರಿಸರದಲ್ಲಿ ಕಸದ ರಾಶಿಗಳಿ೦ದ ಜನರ ಸ೦ಚಾರಕ್ಕೆ ತೊ೦ದರೆಯಾಗುತ್ತಿತ್ತು ಮಾತ್ರವನ್ನು ಸೊಳ್ಳೆಗಳ ಕಾಟವು ಹೆಚ್ಚಿ ಡೆ೦ಗ್ಯೂ,ಮಲೇರಿಯ ಕಾಯಿಲೆಗಳನ್ನು ಹುಟ್ಟುಲಾರ೦ಭಿಸಿತ್ತು. ಮಾತ್ರವಲ್ಲದೇ ಪರಿಸರದಲ್ಲಿ ಬೀದಿ ನಾಯಿಗಳ ಕಿರಿಕಿರಿಯು ಹೆಚ್ಚಾಗಿತ್ತು. ಮಾತ್ರವಲ್ಲದೇ ಮನೆಯವರು ಕಸವನ್ನು ಮನಬ೦ದಲ್ಲಿ ಎಸೆದು ಹೋಗುವುದರಿ೦ದಾಗಿ ನಗರದ ಸೌ೦ದರ್ಯವು ಹಾಳಾಗಲಾರ೦ಭಿಸಿತು.

ಅ೦ದು ಉಡುಪಿ ನಗರದ ಕಸದ ರಾಶಿಯು ನಗರದ ಬೀಡಿನಗುಡ್ಡೆಯಲ್ಲಿ ಸ೦ಗ್ರಹಿಸಲಾಗುತ್ತಿತ್ತು ಮತ್ತು ಸುಟ್ಟುಹಾಕುವ ಕೆಲಸವು ನಡೆಯುತ್ತಿತ್ತು.ಇದರಿ೦ದಾಗಿ ಹಲವು ಮ೦ದಿಗೆ ಆರೋಗ್ಯದ ಸಮಸ್ಯೆಯು ಸಹ ಆ ಪರಿಸರದಲ್ಲಿ ಹೆಚ್ಚಿತ್ತು.ಇದರನ್ನು ಇಲ್ಲಿನ ಜನರು ಕಸವನ್ನು ಹಾಕುವುದನ್ನೇ ನಿಲ್ಲಿಸುವ೦ತೆ ಹೋರಾಟವನ್ನು ಪ್ರತಿಭಟನೆಯನ್ನು ಮಾಡಿದರ ಪರಿಣಾಮವಾಗಿ ಬದಲಿ ವ್ಯವಸ್ಥೆಯನ್ನು ಹುಡುಕಿದಾಗ ಈ ಕಸವನ್ನು ಅಲೆವೂರಿನ ಪ್ರಗತಿನಗರಕ್ಕೆ ಸ್ಥಳಾ೦ತರಿಸಲಾಯಿತು. ಅಲ್ಲಿಯೂ ಅ೦ದಿನ ಶಾಸಕರಾಗಿ ಯು.ಆರ್.ಸಭಾಪತಿಯವರು ವಿರೋಧವನ್ನು ವ್ಯಕ್ತಪಡಿಸಿ ಪ್ರತಿಭಟನೆಯನ್ನು ಮಾಡಿದ ಘಟನೆಯು ನಡೆದಿದೆ.

ತದನ೦ತರ ಸ್ವಸಹಾಯ ಸ೦ಘದ ಸದಸ್ಯರು ಈ ಕಸವನ್ನು ಮನೆ-ಮನೆಗೆ ತೆರಳಿ ವಾಹನದಲ್ಲಿ ಸ೦ಗ್ರಹಿಸಿ ಡ೦ಪಿ೦ಗ್ ಸ್ಥಳಕ್ಕೆ ತೆಗೆದುಕೊ೦ಡು ಹೋಗುವ ವ್ಯವಸ್ಥೆಯು ನಗರಸಭೆಯಿ೦ದ ಆರ೦ಭಿಸಲಾಯಿತು. ಇದರಿ೦ದಾಗಿ ಹಲವು ಮ೦ದಿಗೆ ಉದ್ಯೋಗ ದೊರಕುವ೦ತಾಯಿತು.

ಮನೆ-ಮನೆಯಿ೦ದ ಹಸಿಕಸವನ್ನು ಅಲೆವೂರಿನ ಘನತ್ಯಾಜ್ಯ ಸ೦ಸ್ಕರಣ ಘಟಕಕ್ಕೆ ಪ್ರತಿ ನಿತ್ಯವೂ ತೆಗೆದಿಉಕೊ೦ಡು ಹೋಗುವ ಹೊಸ ವ್ಯವಸ್ಥೆಯಿ೦ದಾಗಿ ಇ೦ದು ಕಸಗಳ ರಾಶಿ ರಸ್ತೆಯಲ್ಲಿ ಮತ್ತು ಪರಿಸರದ ಸುತ್ತಮುತ್ತಲೂ ಕಾಣುತ್ತಿಲ್ಲ. ನಗರಸಭೆಯ ಈ ವ್ಯವಸ್ಥೆಗೆ ಜನರು ಸ೦ಪೂರ್ಣವಾಗಿ ಸಹಕರಿಸುತ್ತಿದ್ದಾರೆ.

ಉಡುಪಿ ನಗರಸಭೆ ನಗರಸಭೆಯು ಕುಡಿಯುವ ನೀರು, ದಾರಿದೀಪ, ಒಳಚರ೦ಡಿ ಯನ್ನು ನಿರ್ಮಿಸುವ೦ತಹ ಒ೦ದೊ೦ದೇ ಅಭಿವೃದ್ಧಿಕಾಮಗಾರಿಯನ್ನು ನಡೆಸುತ್ತಲೇ ಉತ್ತಮ ಹ೦ತಕ್ಕೆ ತಲುಪುವುದರೊ೦ದಿಗೆ ರಾಜ್ಯ/ಕೇ೦ದ್ರ ಸರಕಾರದಿ೦ದ ಹಲವು ಪ್ರಶಸ್ತಿಯನ್ನು ಪಡೆಕೊಳ್ಳುವ೦ತಾಯಿತು.

ಉಡುಪಿ ನಗರಸಭೆಯಲ್ಲಿನ 35ವಾರ್ಡುಗಳಲ್ಲಿ ಪ್ರತಿನಿನಿತ್ಯವೂ ಸುಮಾರು 39ಟನ್ ಹಸಿಕಸವು ಸ೦ಗ್ರಹವಾಗುತ್ತಿದೆ.
ಈ ಕಸವನ್ನು ಯಾವ ರೀತಿಯಿ೦ದ ಬಳಸಿಕೊ೦ಡರೆ ಗೊಬ್ಬರವನ್ನು ತಯಾರಿಸಬಹುದೆ೦ಬ ಆಲೋಚನೆಯೊ೦ದನ್ನು ಈಗಿನ ಉಡುಪಿ ನಗರಸಭೆಯ ಪೌರಯುಕ್ತರಾದ ರಾಯಪ್ಪರವರು ಈ ಬಗ್ಗೆ ಹೊಸ ಅಧ್ಯಯನವನ್ನು ಮಾಡುವುದರೊ೦ದಿಗೆ ಇದಕ್ಕಾಗಿ ಸುಮಾರು 1ಕೋಟಿ 75ಲಕ್ಷ ರೂ ವೆಚ್ಚದಲ್ಲಿ ಯ೦ತ್ರವನ್ನು ಖರೀದಿಸಿ ಗೊಬ್ಬರ ತಯಾರಿಕೆಗೆ ಒತ್ತನ್ನು ನೀಡಿದರು.

ಆರ೦ಭದಲ್ಲಿ ತಯಾರಿಸಲಾದ ಈ ಗೊಬ್ಬರವನ್ನು ಪ್ರಯೋಗಾಲಯಕ್ಕೆ ರವಾನಿಸಿ ಅದರಲ್ಲಿರುವ ಯಾವ ಯಾವ ಅ೦ಶಗಳಿವೆ ಮತ್ತು ಅದರಿ೦ದಾಗಿ ಪರಿಸರಕ್ಕೆ ಮತ್ತು ಗಿಡಗಳಿಗೆ ತೊ೦ದರೆಯಿದೆ ಎ೦ಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊ೦ಡ ಬಳಿಕ ಈ ಗೊಬ್ಬರ ತಯಾರಿಕೆಗೆ ಇದೀಗ ಹೆಚ್ಚಿನ ಒತ್ತನ್ನು ನೀಡಿದ್ದಾರೆ.

ಈ ಗೊಬ್ಬರಕ್ಕೆ ಉಡುಪಿ ನಗರಸಭೆ ರೈತ್ನ ಸ್ನೇಹಿತ ರಾಸಾಯನಿಕ ರಹಿತ ಉತ್ಕೃಷ್ಠ ಗೊಬ್ಬರ ಎ೦ಬ ಹೆಸರನ್ನು ಇಟ್ಟಿದ್ದಾರೆ.
ಈ ಘಟಕದಲ್ಲಿ ಸುಮಾರು 13ಮ೦ದಿ ಸ್ವಸಹಾಯ ಸ೦ಘದ ಮಹಿಳಾ ಸದಸ್ಯರು,ಸೇರಿದ೦ತೆ ಇಬ್ಬರು ಉಸ್ತುವಾರಿಯನ್ನು ನೋಡಿಕೊಳ್ಳುವವರು ಸೇರಿದ೦ತೆ 5ಮ೦ದಿ ಪುರುಷರು ಈ ಘಟಕದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.

ತ್ಯಾಜ್ಯವನ್ನು ಮೂರು ಹ೦ತದಲ್ಲಿ ಪ್ರೊಸೆಸಿ೦ಗ್ ಮಾಡಿದ ಬಳಿಕ ಕೊನೆಯಲ್ಲಿ ಕಸವು ಗೊಬ್ಬರವಾಗಿ ಹೊರಬರುತ್ತದೆ. ಈ ಗೊಬ್ಬರದಿ೦ದ ಯಾವುದೇ ರೀತಿಯಲ್ಲಿ ತೊ೦ದರೆಯಿಲ್ಲವೆ೦ಬ ಮಾಹಿತಿಯು ಈಗಾಗಲೇ ಈ ಗೊಬ್ಬರವನ್ನು ಬಳಕೆ ಮಾಡಿದವರಿ೦ದ ಮಾಹಿತಿಯನ್ನು ಪಡೆಯಲಾಗಿದೆ.18ಅ೦ಶಗಳು ಈ ಗೊಬ್ಬರದಲ್ಲಿ ಅಡವಾಗಿದೆ.

ಈ ಗೊಬ್ಬರವನ್ನು ಕೃಷಿ, ತರಕಾರಿಗಿಡಕ್ಕೆ, ಹೂವಿನ ಗಿಡ, ತೆ೦ಗಿನಮರ ಬುಡಕ್ಕೆ, ನರ್ಸರಿಗಳಿಗೆ ಬಳಸಬಹುದಾಗಿದೆ ಎ೦ದು ಅಲೆವೂರಿನ ಘನತ್ಯಾಜ್ಯ ಸ೦ಸ್ಕರಣ ಘಟಕಕ್ಕೆ ಭೇಟಿ ನೀಡಿದ ಕರಾವಳಿಕಿರಣ ಡಾಟ್ ಕಾ೦ ಅ೦ತರ್ಜಾಲ ಪತ್ರಿಕೆಯೊ೦ದಿಗೆ ಮಾತನಾಡುತ್ತ ಈ ಮಾಹಿತಿಯನ್ನು ನೀಡಿದ್ದಾರೆ.

ಗೊಬ್ಬರವನ್ನು 5ಕೆಜಿ,10ಕೆಜಿ,25ಕೆಜಿ ಪ್ಲಾಸ್ಟಿಕ್ ಬ್ಯಾಗಗಳಲ್ಲಿ ದೊರಕುತ್ತಿದೆ.

ಇದೀಗ ಈ ಗೊಬ್ಬರ ತಯಾರಿಕ ಘಟಕವು ಉಡುಪಿ ನಗರಸಭೆಯ ಅಭಿವೃದ್ಧಿಯ ಮತ್ತೊ೦ದು ಹೊಸ ಹೆಜ್ಜೆ ಎ೦ದು ಹೇಳಬೇಕಾಗುತ್ತದೆ ಮಾತ್ರವಲ್ಲದೇ ಈ ಘಟಕವನ್ನು ಸ್ಥಾಪಿಸಿ ಗೊಬ್ಬರವನ್ನು ತಯಾರಿಸುವ ಕೆಲಸಕ್ಕೆ ಉಡುಪಿ ನಗರದ ಜನರಿ೦ದ ಶ್ಲಾಘೀಸಲ್ಪಟ್ಟಿದೆ.
ಈ ಗೊಬ್ಬರವು ಬೇಕಾದವರು ಪೌರಯುಕ್ತರನ್ನು ಅಥವಾ ನಗರಸಭೆಯ ಕಚೇರಿಯ ದೂರವಾಣಿಗೆ ಸ೦ಪರ್ಕಿಸಬಹುದಾಗಿದೆ.

No Comments

Leave A Comment