Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಸ್ವರ್ಣ ಪದಕದೊಂದಿಗೆ `ಮುಂಬಯಿಶ್ರೀ’ಬಿರುದು ಮುಡಿಗೇರಿಸಿದ ನಂದಿಕೂರು ಜ್ಞಾನೇಶ್ ಪೂಜಾರಿ

ಮುಂಬಯಿ, ಜ.23: ಬೃಹನ್ಮುಂಬಯಿಯ ಉಪನಗರದಲ್ಲಿನ ಹೌಶಿ ಶರೀರ್ ಸೌಷ್ಠವ್ ಸೇವಾ ಸಂಸ್ಥೆ ಇತ್ತೀಚೆಗೆ ಆಯೋಜಿಸಿದ ಮುಂಬಯಿ ಜೂನಿಯರ್ಸ್ ಬಾಡಿಬಿಲ್ಡಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಯಲ್ಲಿ ಜ್ಞಾನೇಶ್ ಸದಾನಂದ ಪೂಜಾರಿ 2023-2024 ಮುಂಬಯಿಶ್ರೀ’ಬಿರುದು ಸಹಿತ ಚಿನ್ನದ ಪದಕಕ್ಕೆ ಭಾಜನರಾಗಿದ್ದು ಆ ಮೂಲಕ ಇದೇ ಜ.28 ರಂದು ರತ್ನಗಿರಿ ಚಿಪ್ಲ್ಲೂನ್‍ನಲ್ಲಿ ನಡೆಯಲಿರುವ `ಮಹಾರಾಷ್ಟ್ರ ಶ್ರೀ’ಗೆ ಸ್ಪರ್ಧೆಗೆ ಆಯ್ಕೆ ಆಗಿರುವರು.

ಉಡುಪಿ ಜಿಲ್ಲೆಯ ನಂದಿಕೂರು ಮೂಲತಃ ಸದಾನಂದ ಕಂಠಪ್ಪ ಪೂಜಾರಿ ಮತ್ತು ಶೋಭಾ ಎಸ್.ಪೂಜಾರಿ ದಂಪತಿ ಸುಪುತನಾಗಿದ್ದು ಘಾಟ್ಕೋಪರ್ ಇಲ್ಲಿ ವಾಸವಾಗಿದ್ದು ಟಾಟಾ ಸಂಸ್ಥೆಯ ಉದ್ಯೋಗಿ ಆಗಿರುವರು. ಜ್ಞಾನೇಶ್ ಪೂಜಾರಿ ಅವರು ಮಿಸ್ಟರ್ ಇಂಡಿಯಾ ಅಂಕುಶ್ ಟೆರ್ವಾಂಕರ್ ಸರ್ ತೇರ್ವಂಕರ್ ಜಿಮ್ಕೋ ಇವರ ಶಿಷ್ಯನಾಗಿದ್ದು ಕುನಾಲ್ ಸಾವಂತ್ ಅವರ ತರಬೇತು ಪಡೆಯುತ್ತಿದ್ದಾರೆ.

ಈ ಹಿಂದೆ ವಿವಿಧೆಡೆ ನಡೆಸಲ್ಪಟ್ಟ ಬಾಡಿಬಿಲ್ಡಿಂಗ್ ಸ್ಪರ್ಧೆಯ 2022-2023ರಲ್ಲಿ ಮುಂಬಯಿ ಕುಮಾರಶ್ರೀ ಪ್ರಥಮ ಸ್ಥಾನ ಚಿನ್ನದ ಪದಕ, ಮಹಾರಾಷ್ಟ್ರ ಕುಮಾರಶ್ರೀ 3ನೇ ಸ್ಥಾನದೊಂದಿಗೆ ಕಂಚಿನ ಪದಕ, ರಾಷ್ಟ್ರೀಯ ಭಾರತ್ ಕುಮಾರ್‍ಶ್ರೀ 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕ, 2021-2022ರಲ್ಲಿ ಮುಂಬಯಿ ಉದಯಶ್ರೀ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ, ಮಹಾರಾಷ್ಟ್ರ ಉದಯಶ್ರೀ ದ್ವಿತೀಯ ಸ್ಥಾನ ಕಂಚಿನ ಪದಕ, ರಾಷ್ಟ್ರೀಯ ಭಾರತ್ ಉದಯಶ್ರೀ ಟಾಪ್-5 ಸ್ಥಾನಕ್ಕೆ ಭಾಜನರಾಗಿರುವರು.

No Comments

Leave A Comment