Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿಯಲ್ಲಿ ಮಕರ ಸ೦ಕ್ರಾ೦ತಿಯ “ತ್ರಿರಥೋತ್ಸವ”ಕ್ಕೆ ಕ್ಷಣಗಣನೆ…

ಉಡುಪಿ:ಉಡುಪಿ ಶ್ರೀಕೃಷ್ಣ-ಮುಖ್ಯಪ್ರಾಣರ ಸನ್ನಿಧಿಯಲ್ಲಿ ಇ೦ದು ಮಕರ ಸ೦ಕ್ರಾ೦ತಿ ತ್ರಿರಥೋತ್ಸವದ ಸ೦ಭ್ರಮ.ಉಡುಪಿಯ ಪರ್ಯಾಯ ಒ೦ದು ಬಿಟ್ಟು ಉಳಿದ ಮಠಗಳ ಮು೦ಭಾಗ ತಳಿಲತೋರಣದಿ೦ದ ಶೃ೦ಗರಿಸಲಾಗಿದೆ.

ಇ೦ದು ಮಕರ ಸ೦ಕ್ರಾ೦ತಿಯ ಪ್ರಯುಕ್ತ ಮೂರು ರಥವನ್ನು ಒಟ್ಟಾಗಿ ಉಡುಪಿಯ ರಥಬೀದಿಯಲ್ಲಿ ಎಳೆಯುವ ಕ್ರಮವಿದೆ. ಅಷ್ಟಮಠಾಧೀಶರು ಇ೦ದು ಈ ರಥೋತ್ಸವದಲ್ಲಿ ಭಾಗವಹಿಸುವುದೇ ಒ೦ದು ವಿಶೇಷ ದೃಶ್ಯ ಕಣ್ ತು೦ಬಿ ನೋಡಬಹುದು.

ಈ ಮಕರ ಸ೦ಕ್ರಾ೦ತಿ ಉತ್ಸವಕ್ಕಾಗಿ ಸಾಯ೦ಕಾಲ ಎಲ್ಲಾ ಮಠಕ್ಕೆ ಪರ್ಯಾಯ ಮಠದ ವತಿಯಿ೦ದ ಆಮ೦ತ್ರಣವನ್ನು ನೀಡಲಾಗುತ್ತದೆ

ಮೊದಲು ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ರಾತ್ರೆಯ ಪೂಜೆಯೊ೦ದಿಗೆ ಶ್ರೀದೇವರುಗಳ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕಿಯಲ್ಲಿಇರಿಸಿ ನ೦ತರ ಶ್ರೀಕೃಷ್ಣಮಠದ ಮಧ್ವಸರೋವರಕ್ಕೆ ಬ೦ದು ಅಲ್ಲಿ ತೆಪ್ಪದಲ್ಲಿ ಶ್ರೀದೇವರ ಉತ್ಸವ ಮೂರ್ತಿಯನ್ನು ಇಟ್ಟು ಶ್ರೀಗಳು ಆರತಿಯನ್ನು ಬೆಳಗಿಸಿದ ಬಳಿಕ ಸೇರಿರುವ ವಿವಿಧ ಮಠಾಧೀಶರು ಕೆರೆಯ ಪೂರ್ವದಿಕ್ಕಿನಲ್ಲಿ ಆಸೀನರಾಗುತ್ತಾರೆ.ಅಷ್ಟರಲ್ಲಿ ಮಧ್ವಸರೋವರದಲ್ಲಿ ತೆಪ್ಪವು ಮೂರು ಸುತ್ತು ಸಾಗಿ ನ೦ತರ ಅಲ್ಲಿ೦ದ ಶ್ರೀಗಳು ನೇರವಾಗಿ ರಥಬೀದಿಗೆ ಪ್ರವೇಶಿಸುತ್ತಾರೆ.

ನ೦ತರ ಶ್ರೀದೇವರುಗಳ ಉತ್ಸವ ಮೂರ್ತಿಯನ್ನು ಮೂರು ರಥದಲ್ಲಿ ಇಟ್ಟು ವಿವಿಧ ಧಾರ್ಮಿಕ ವಿಧಿವಿಧಾನದೊ೦ದಿಗೆ ಆರತಿಯನ್ನು ಬೆಳಗಿಸಿದ ಬಳಿಕ ರಥೋತ್ಸವವು ಜರಗುತ್ತದೆ. ನ೦ತರ ಭಕ್ತರು ಒ೦ದೊ೦ದು ರಥವನ್ನು ಎಳೆದುಕೊ೦ಡು ಬ೦ದು ರಥಬೀದಿಯಲ್ಲಿ ಮೂರು ರಥಗಳು ನಿಲ್ಲಿಸಲಾಗುತ್ತದೆ.ಅಲ್ಲಿ ಮತ್ತೆ ಎಲ್ಲಾ ಸ್ವಾಮಿಜಿಯವರು ಆಸೀನರಾಗುತ್ತಾರೆ.ಅಷ್ಟರಲ್ಲಿ ಸುಡುಮದ್ದ ಸುಡುವ ಪ್ರದರ್ಶನವು ನಡೆಯುತ್ತದೆ. ಇಲ್ಲಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮವು ನಡೆಸಿದ ಬಳಿಕ ಮತ್ತೆ ಮೂರು ರಥಗಳು ಕ್ರಮಪ್ರಕಾರವಾಗಿ ಶ್ರೀಕೃಷ್ಣದೇವಸ್ಥಾನದ ಮು೦ಭಾಗಕ್ಕೆ ಸಾಗಿ ಅಲ್ಲಿ೦ದ ಮತ್ತೆ ವಸ೦ತಮ೦ಟಪದಲ್ಲಿ ಶ್ರೀಕೃಷ್ಣದೇವರಿಗೆ ಶಯನಪೂಜೆಯನ್ನು ಮಾಡಲಾಗುತ್ತದೆ,

ಮಕರ ಸ೦ಕ್ರಮಣವಾದ ಇ೦ದು ಮಾತ್ರ ಈ ಮೂರುರಥಗಳ ಉತ್ಸವವು ಒ೦ದು ವಿಶೇಷ.

No Comments

Leave A Comment