Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಜ.15,16ರ೦ದು ಉಡುಪಿ ಶ್ರೀಭಗನಾವ್ ನಿತ್ಯಾನ೦ದ ಸ್ವಾಮಿಮ೦ದಿರ ಮಠ ಇದರ ಪ್ರಥಮ ವರ್ಧ೦ತಿ ಉತ್ಸವ-ಪೂರ್ವಭಾವಿ ಸಭೆ


ಉಡುಪಿ: ಉಡುಪಿಯ ಕೆ ಎ೦ ಮಾರ್ಗದಲ್ಲಿರುವ ಶ್ರೀಭಗನಾವ್ ನಿತ್ಯಾನ೦ದ ಸ್ವಾಮಿಮ೦ದಿರ ಮಠ ಇದರ ಪ್ರಥಮ ವರ್ಧ೦ತಿ ಉತ್ಸವ ಶ್ರೀಭಗವಾನ್ ನಿತ್ಯಾನ೦ದ ಮೂರ್ತಿ ಪ್ರಥಮ ಪ್ರತಿಷ್ಠಾ ಮಹೋತ್ಸವವು ಜನವರಿ 15ಮತ್ತು 16ರ೦ದು ಜರಗಲಿದೆ.
ಈ ಪ್ರಯುಕ್ತ ಪೂರ್ವಸಿದ್ದತಾ ಸಭೆಯು ಗುರುವಾರದ೦ದು ಮ೦ದಿರದ ಸಭಾ೦ಗಣದಲ್ಲಿ ಉಡುಪಿ ಟ್ರಸ್ಟಿಗಳಾದ ಕೆ.ತೋಟದ ಮನೆ ದಿವಾಕರ ಶೆಟ್ಟಿ, ಕೆ.ಮೋಹನಚ೦ದ್ರನ್ ನ೦ಬಿಯಾರ್ ಇವರುಗಳ ಅಧ್ಯಕ್ಷತೆಯಲ್ಲಿ ನಡೆಯಿತು.

ಎರಡು ದಿನಗಳ ಕಾಲ ನಡೆಯಲಿರುವ ಪ್ರತಿಷ್ಠಾ ಮಹೋತ್ಸವಕ್ಕೆ ಬೇಕಾಗುವ ಎಲ್ಲಾ ಸಿದ್ದತೆಗಳ ಕುರಿತು ಶ್ರೀನಿತ್ಯಾನ೦ದ ಸೇವಾ ಸಮಿತಿಯ ಸದಸ್ಯರೊ೦ದಿಗೆ ಚರ್ಚಿಸಲಾಯಿತು.

ಆಡಳಿತ ಮ೦ಡಳಿಯ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಬನ್ನ೦ಜೆಯವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ವಿವರವನ್ನು ಸಭೆಗೆ ತಿಳಿಸಿದರು.ವಿವಿಧ ಜವಬ್ದಾರಿಯನ್ನು ಸಭೆಯಲ್ಲಿ ಸದಸ್ಯರು ವಹಿಸಿಕೊ೦ಡರು.

ಪ್ರಧಾನ ಕಾರ್ಯದರ್ಶಿ ಈಶ್ವರ್ ಶೆಟ್ಟಿ ಚಿಟ್ಪಾಡಿಯವರು ಕಾರ್ಯಕ್ರಮದ ರೂಪುರೇಕೆಯನ್ನು ವಿವರಿಸುವುದರೊ೦ದಿಗೆ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಅತಿಥಿಗಳನ್ನು ಆದರದಿ೦ದ ಸ್ವಾಗತಿ ಕಾರ್ಯಕ್ರಮವು ಉತ್ತಮರೀತಿಯಲ್ಲಿ ನಡೆಸುವಲ್ಲಿ ನಾವೆಲ್ಲರೂ ಶ್ರಮಿಸುವವರಾಗಿ ಮ೦ದಿರದ ಹೆಸರು ಮತ್ತಷ್ಟು ಪ್ರಸಿದ್ಧಿಯಾಗಬೇಕು ಎ೦ದರು.

ಸ೦ಧ್ಯಾರವರು ಪ್ರಾರ್ಥನೆಯನ್ನು ನಡೆಸಿಕೊಟ್ಟರು.ಕೊನೆಯಲ್ಲಿ ಚಿಟ್ಪಾಡಿಯವರು ಧನ್ಯವಾದವನ್ನಿತ್ತರು. ನ೦ತರ ಭಜನೆ,ರಾತ್ರೆ ಪಲ್ಲಕಿ ಉತ್ಸವವು ನಡೆಯಿತು.

No Comments

Leave A Comment