Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಉಡುಪಿಯಲ್ಲಿ ಪುತ್ತಿಗೆ ಪರ್ಯಾಯದ ಸ೦ಭ್ರಮ-ಭಕ್ತಿಸ೦ಗೀತ,ಹೊರೆಕಾಣಿಕೆ,ಯಕ್ಷಗಾನ ಕಾರ್ಯಕ್ರಮ-ಹೆಚ್ಚುತ್ತಿದೆ ಪರ್ಯಾಯದ ಮೆರಗು

ಉಡುಪಿ:ರಥಬೀದಿಯ “ಆನಂದತೀರ್ಥ” ಮಂಟಪದಲ್ಲಿ ಶುಕ್ರವಾರದ೦ದು ಭಜನಾ ಕಾರ್ಯಕ್ರಮವು ಉಡುಪಿಯ ಕು. ಸಾಕ್ಷಿ ಕಾಮತ್ ಮತ್ತು ಬಳಗ ದಿ೦ದ ಕಾರ್ಯಕ್ರಮ ಜರಗಿತು.

ನ೦ತರ ಸಂವಾದಕಾರ್ಯಕ್ರಮವು – ‘ ಗೋ ಕುಟುಂಬ ಪ್ರಕಾಶ್ ಶೆಟ್ಟಿ ಕಪಿಲ ಗೋಸಂರಕ್ಷಕರು ಮಂಗಳೂರು,ಭಕ್ತಿ ಭೂಷಣ ಸ್ವಾಮೀಜಿ
ಮಾರಿ ಪಳ್ಳ ಬಿ ಸಿ ರೋಡ್,ಪ್ರೊ| ಪವನ್ ಕಿರಣ್ ಕೆರೆಯಕ್ಷಗಾನ ಅರ್ಥದಾರಿ ಗಳಿ೦ದ ಕಾರ್ಯಕ್ರಮ ಜರಗಿತು.

ಪರ್ಯಾಯೋತ್ಸವದ ಅಂಗವಾಗಿ ವಿವಿಧ ತಾಲೂಕು ಹಾಗೂ ವಲಯಗಳಿಂದ ಇಂದು ಹೊರೆಕಾಣಿಕೆ ಸಮರ್ಪಿಸಲಾಯಿತು.

ಬೈಂದೂರು ತಾಲೂಕು, ಕುಂದಾಪುರ ತಾಲೂಕು, ಬ್ರಹ್ಮಾವರ ತಾಲೂಕು, ಮಂದಾರ್ತಿ ವಲಯ, ಕೋಟ ವಲಯ, ಉಪ್ಪೂರು, ಹಾವಂಜೆ ವಲಯ, ಕಲ್ಯಾಣಪುರ ಸಂತೆಕಟ್ಟೆ ವಲಯ, ಸಗ್ರಿ, ಚಕ್ರತೀರ್ಥ ವಲಯ, ಪೆರಂಪಳ್ಳಿ ವಲಯ, ಕೊಡವೂರು ವಲಯದಿಂದ ಅಕ್ಕಿ, ಬೆಲ್ಲ, ತೆಂಗಿನಕಾಯಿ, ತರಕಾರಿ ಹಾಗೂ ವಿವಿಧ ಸಾಮಾಗ್ರಿಗಳನ್ನು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ತಂದು ಮಠಕ್ಕೆ ಅರ್ಪಿಸಲಾಯಿತು.

No Comments

Leave A Comment