![](https://i0.wp.com/karavalikirana.com/kan/wp-content/uploads/2023/12/SGR_1627.jpg?fit=900%2C834&ssl=1)
ಪೊಡವಿಗೊಡೆಯ ಉಡುಪಿ ಶ್ರೀಕೃಷ್ಣದೇವರಿಗೆ “ಕೋಟಿ ತುಳಸಿ ಅರ್ಚನೆ” ಕಾರ್ಯಕ್ರಮ ಸ೦ಪನ್ನ…
ಉಡುಪಿ:ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಮಹಾ ಮಂಡಲ(ರಿ) ಉಡುಪಿ ಇದರ ಅಂಗಸಂಸ್ಥೆ ತುಷಿಮಾಮ ಕಡಿಯಾಳಿ ಇವರ ನೇತೃತ್ವದಲ್ಲಿ ಭಾನುವಾರ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಬ್ರಾಹ್ಮಣ ವಲಯ ಹಾಗೂ ಬ್ರಾಹ್ಮಣ ಬಂಧುಗಳ ಸಹಕಾರದೊಂದಿಗೆ ಪೊಡವಿಗೊಡೆಯ ಶ್ರೀಕೃಷ್ಣದೇವರಿಗೆ ವಿಷ್ಣುಸಹಸ್ರ ನಾಮಾವಳಿ ಸಹಿತ “ಕೋಟಿ ತುಳಸಿ ಅರ್ಚನೆ” ಯನ್ನುಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು,ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ನೆರವೇರಿಸಿ ಅನುಗ್ರಹಿಸಿದರು.
![](https://i0.wp.com/karavalikirana.com/kan/wp-content/uploads/2023/12/SGR_1597.jpg?resize=900%2C386&ssl=1)
ತುಷಿಮಾಮ ಕಡಿಯಾಳಿ ಇದರ ಅಧ್ಯಕ್ಷರಾದ ರಘುಪತಿ ಉಪಾಧ್ಯ,ಕಾರ್ಯದರ್ಶಿ ರಾಜೇಶ್ ಭಟ್,ಪಣಿಯಾಡಿ,ಕೋಶಾಧಿಕಾರಿ ಕೊರಂಗ್ರಪಾಡಿ ಕೃಷ್ಣಮೂರ್ತಿ ಆಚಾರ್ಯ ಮತ್ತು ಇತರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸಮಸ್ತ ವಿಪ್ರಬಂಧವರ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು.![](https://i0.wp.com/karavalikirana.com/kan/wp-content/uploads/2023/12/Untitled-5-13.jpg?resize=1000%2C789&ssl=1)