Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಮಣಿಪಾಲದ ಶ್ರೀ ಮಹಾಮಾಯಾ ಭಜನೆ ಮಂಡಳಿಯ 17ನೇಯ ವಾರ್ಷಿಕೋತ್ಸವ-ಭಜನಾ ತರಬೇತಿಗೆ ಚಾಲನೆ

ಉಡುಪಿ:ಮಣಿಪಾಲದ ಶ್ರೀಮತಿ ಮಾಯಾ ಕಾಮತ್ ಈಶ್ವರನಗರ ಮಣಿಪಾಲ ಇವರ ನೇತೃತ್ವದಲ್ಲಿನ ಶ್ರೀ ಮಹಾಮಾಯಾ ಭಜನೆ ಮಂಡಳಿಯ 17ನೇಯ ವಾರ್ಷಿಕೋತ್ಸವದ ಪ್ರಯುಕ್ತ ಪ್ರಗತಿ ನಗರದ ಅಂಗನವಾಡಿಯಲ್ಲಿ ಭಜನಾ ತರಬೇತಿ ಮತ್ತು ಭಜನೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಶ್ರುತಿ. ಜಿ ಶೆಣೈ ಯವರು ದೀಪಬೆಳಗಿಸಿ ಶುಭವನ್ನು ಕೋರಿದರು.

ಮುಖ್ಯ ಅತಿಥಿಯಾಗಿ ಪ್ರಗತಿ ನಗರದ ಅಂಗನವಾಡಿ ಶಾಲೆಯ ಶಿಕ್ಷಕಿ ಹೇಮಲತಾ ಮಾಧವ, ಭದ್ರಕಾಳಿ ಮಂದಿರದ ಉಪಾಧ್ಯಕ್ಷರು ಆದ ಶ್ರೀಯುತ ಮಿಥುನ್ ಪೂಜಾರಿ, ಶ್ರೀಮತಿ ಸುಜಾತಾ ಪೂಜಾರಿ ಪ್ರಗತಿನಗರ,ಶ್ರೀಮತಿ ಸುಗಣಶೆಟ್ಟಿ ಅಂಬಾಗಿಲು ಶ್ರೀಮತಿ ಅಹಲ್ಯ ರಾವ್ ಅಂಬಾಗಿಲು,ಶ್ರೀಮತಿ ವಿದ್ಯಾ. S ನಾಯಕ್ ಲಕ್ಷೀoದ್ರ ನಗರ, ಶ್ರೀಮತಿ ಸುಜಾತಾ ಗಣೇಶ್ ಉಡುಪಿ, ನಾಗರಾಜ್ ಆಚಾರ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಶ್ರೀಮತಿ ಪ್ರಭಾ ರಾವ್, ಶ್ರೀಮತಿ ಕುಸುಮಾ ಕಾಮತ್ ಕರ್ವಾಲ್, ಶ್ರೀಮತಿ ಸುಮಿತ್ರ ಪೂಜಾರಿ ಪ್ರಗತಿ ನಗರ ಇವರನ್ನು ಸನ್ಮಾನನಿಸಲಾಯಿತು.

ಶ್ರೀಮತಿ ಸವಿತಾಶೆಟ್ಟಿ ಈಶ್ವರ ನಗರ ಮಣಿಪಾಲ ಇವರು ನಿರೂಪಣೆ ಮಾಡಿದರು. ಪ್ರಭಾವತಿ ಪ್ರಾರ್ಥನೆ ಮಾಡಿದರು. ಶ್ರೀಮತಿ ವಿದ್ಯಾ ಶರ್ಮಾ ಕಟಪಾಡಿ,ಸಂಜನಾ ಮೋಹನ್, ಹರಿಣಿ ನಾಯಕ್, ಗೀತಾ ಸಂಜೀವ, ಜ್ಯೋತಿ ನಾಯಕ್, ಯಶೋದಾ ಕುಂದರ್,ನಿತ್ಯಲಕ್ಷ್ಮಿ ಭಟ್,ಯುಕ್ತಾವತಿ ರಾಮಚಂದ್ರ, ಸಹಕರಿಸಿದರು . ಶ್ರೀಮತಿ ಸವಿತಾ ಶೆಟ್ಟಿ ಎಲ್ಲಾ ಅಂಗನವಾಡಿ ಮಕ್ಕಳಿಗೆ ಉಡುಗೊರೆ ನೀಡಿದರು.ಭಜನೆ ತಂಡದವರಿಂದ ಭಜನೆ ಕಾರ್ಯ ಕ್ರಮ ನಡೆಯಿತು , ಮಕ್ಕಳಿಗೆ ಸಿಹಿ ತಿಂಡಿಯೊ೦ದಿಗೆ ಉಪಹಾರ ನೀಡಲಾಯಿತು , ಶ್ರೀಮತಿ ಸವಿತಾ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು

No Comments

Leave A Comment