ಉಡುಪಿ ಶ್ರೀಕೃಷ್ಣದೇವರಿಗೆ 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಸಮರ್ಪಣೆ
ಉಡುಪಿ:ಶ್ರೀಕೃಷ್ಣದೇವರಿಗೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಲ್ಲಿ,ತೆಲಂಗಾಣದ ಆರ್.ಸ್ವಾಮಿನಾಥನ್ ಎನ್ನುವ ಭಕ್ತರೋರ್ವರು ಸುಮಾರು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.ಇಂದು ಶುಕ್ರವಾರದ೦ದು ಶ್ರೀಕೃಷ್ಣದೇವರಿಗೆ ತೊಡಿಸಲಾಯಿತು.