Log In
BREAKING NEWS >
ಉಡುಪಿ ನಗರದಲ್ಲಿನ ಗ್ರಾಹಕರ ಅಚ್ಚುಮೆಚ್ಚಿನ ಪ್ರಸಿದ್ಧ ಜವಳಿಮಳಿಗೆಯಾದ "ಕಲ್ಸ೦ಕ ಗಿರಿಜಾ ಸಿಲ್ಕ್"ನಲ್ಲಿ ಗ್ರಾಹಕರಿಗಾಗಿ ಜೂನ್ 1ರಿ೦ದ ಮಳೆಗಾಲದ ಮಹೋನ್ನತ ಭಾರೀ ರಿಯಾಯಿತಿ ದರದಲ್ಲಿ ವಸ್ತ್ರಗಳ ಮಾರಾಟ ಆರ೦ಭ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಜ್ರದ ಉಂಗುರವಿದ್ದ ಬ್ಯಾಗ್ ನಾಪತ್ತೆ

ಬೆಂಗಳೂರು: ನವೆಂಬರ್ : 03: ಪ್ರೈಮ್ ಟಿವಿ ನ್ಯೂಸ್ : ಮಹಿಳೆಯೊಬ್ಬರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಶೌಚಾಲಯಕ್ಕೆ ಹೋಗುವ ಮುನ್ನ ಹೊರಗಿಟ್ಟಿದ್ದ ವಜ್ರದ ಉಂಗುರ, ಕಿವಿಯೋಲೆ ಹಾಗೂ ಒಂದು ಲಕ್ಷ ರೂ. ಹಣವಿದ್ದ ಬ್ಯಾಗ್ ನಾಪತ್ತೆಯಾಗಿರುವುದು ವರದಿಯಾಗಿದೆ.

ಟರ್ಮಿನಲ್-1ರ ನಿರ್ಗಮನ ಗೇಟ್ ನಂಬರ್-1 ಸಮೀಪದ ಶೌಚಾಲಯದ ಬಳಿ ಈ ಬ್ಯಾಗ್ ನಾಪತ್ತೆಯಾಗಿದ್ದು, ಈ ಸಂಬಂಧ ಕೆಐಎಎಲ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

ಅಕ್ಟೋಬರ್ 29ರಂದು ಬಸವೇಶ್ವರನಗರದ ನಿವಾಸಿ ಶಾಲು ಅಗರ್ವಾಲ್ ಎಂಬುವರು ನಗರದಿಂದ ಅಹಮದಾಬಾದ್‍ಗೆ ಪ್ರಯಾಣಿಸಬೇಕಿತ್ತು. ಬೆಳಗ್ಗೆ 7 ಗಂಟೆಗೆ ಏರ್ಪೋಟ್ ಗೆ ಬಂದಿದ್ದ ಅವರು ಸೆಕ್ಯೂರಿಟಿ ಚೆಕ್ ಇನ್ ಆದ ನಂತರ, ನಿರ್ಗಮನ ಗೇಟ್ ನಂಬರ್ 1ರ ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ತಮ್ಮ ಬ್ಯಾಗ್ ಅನ್ನು ಶೌಚಾಲಯದ ಹೊರಗಡೆ ಇಟ್ಟು ಒಳಗೆ ಹೋಗಿದ್ದಾರೆ. ವಾಪಸ್ ಬಂದು ನೋಡಿದಾಗ ಬ್ಯಾಗ್ ಕಾಣೆಯಾಗಿತ್ತು. ಬ್ಯಾಗ್‍ನಲ್ಲಿದ್ದ ಒಂದು ವಜ್ರದ ಉಂಗುರ, ಒಂದು ಜೊತೆ ಕಿವಿಯೋಲೆ ಮತ್ತು 1 ಲಕ್ಷ ರೂಪಾಯಿ ಹಣ ಕಳುವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

No Comments

Leave A Comment