ನಾಡಿನೆಲ್ಲೆಡೆಯಲ್ಲಿ ದೇವಸ್ಥಾನ ಹಾಗೂ ದೇವಿ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ....ಸಮಸ್ತ ಓದುಗರಿಗೆ,ನಮ್ಮ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನವರಾತ್ರೆಯ ಶುಭಾಶಯಗಳು

ಶ್ರೀಕೃಷ್ಣಮಠ:ವಿಜಯದಶಮಿಯ ದಿನವಾದ ಇ೦ದು ಅದ್ದೂರಿಯಲ್ಲಿ ಕದಿರುಕಟ್ಟುವ ಕಾರ್ಯಕ್ರಮ ಸ೦ಪನ್ನ

ಉಡುಪಿ:ಶ್ರೀಕೃಷ್ಣಮಠದಲ್ಲಿ ವಿಜಯದಶಮಿಯ ದಿನವಾದ ಮ೦ಗಳವಾರದ೦ದು ಶ್ರೀಸೋದೆ ವಾದಿರಾಜ ಮಠದ ಹೆಬ್ಬಾಗಿಲಿನಲ್ಲಿರಿಸಿದ ಕದಿರಿಗೆ ಪರ್ಯಾಯ ಶ್ರೀಕೃಷ್ಣಾಪುರ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಪೂಜೆಯನ್ನು ನೆರವೇರಿಸಿ ಸಕಲ ವಾದ್ಯ,ಬಿರುದಾವಳಿಗಳೊಂದಿಗೆ ಚಿನ್ನದಪಲ್ಲಕಿಯಲ್ಲಿರಿಸಿ ಮೆರವಣಿಗೆಯಲ್ಲಿ ತಂದು, ಗರ್ಭಗುಡಿಯ ಪೂರ್ವದ್ವಾರದಿಂದ ಪ್ರವೇಶಿಸಿ , ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪೂಜೆ ನಡೆಸಲಾಯಿತು.
ನಂತರ ಬಡಗುಮಾಳಿಗೆಯಲ್ಲಿರಿಸಿ ಪೂಜೆ ಸಲ್ಲಿಸಿದ ಬಳಿಕ ಭಕ್ತಾದಿಗಳಿಗೆ ಕದಿರನ್ನು ವಿತರಿಸಲಾಯಿತು.

 

No Comments

Leave A Comment